ಸಾತನೂರಿನ ಆ ರಹಸ್ಯ: ಡಿಕೆ-ಹೆಚ್‌ಡಿಕೆ ವೈರತ್ವದ ಹಿಂದಿನ ಕಥೆ ರಿವೀಲ್ ಆಯ್ತು ನೋಡಿ!

ಸಾತನೂರಿನ ಆ ರಹಸ್ಯ: ಡಿಕೆ-ಹೆಚ್‌ಡಿಕೆ ವೈರತ್ವದ ಹಿಂದಿನ ಕಥೆ ರಿವೀಲ್ ಆಯ್ತು ನೋಡಿ!

Published : Oct 27, 2025, 01:44 PM IST

ಡಿಕೆ ಶಿವಕುಮಾರ್ ಮತ್ತು ಹೆಚ್‌ಡಿ ಕುಮಾರಸ್ವಾಮಿ ನಡುವಿನ ವೈರತ್ವಕ್ಕೆ ಕಾರಣವಾದ 'ಸಾತನೂರು ರಣಚರಿತ್ರೆ' ಎಂದರೇನು? ಈ ಸೇಡಿನ ಕಥೆಯ ಹಿಂದಿನ ರಹಸ್ಯ ತಿಳಿಯಲು ಈ ವಿಡಿಯೋ ನೋಡಿ.

ಬೆಂಗಳೂರು (ಅ.27): ಕರ್ನಾಟಕದ ರಾಜ್ಯ ರಾಜಕಾರಣದ ಇಬ್ಬರು ಪ್ರಬಲ ನಾಯಕರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಡಿ.ಕೆ.) ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (ಹೆಚ್‌ಡಿಕೆ) ನಡುವಿನ ದಶಕಗಳ ವೈರತ್ವದ 'ಮಹಾಯುದ್ಧ'ವು ಇದೀಗ ಮತ್ತೊಮ್ಮೆ ಭುಗಿಲೆದ್ದಿದೆ. ಈ ಬಾರಿಯ ರಾಜಕೀಯ ಜಟಾಪಟಿಯ ನಡುವೆ, ಡಿ.ಕೆ. ಶಿವಕುಮಾರ್ ಅವರು ಹೆಚ್‌ಡಿಕೆ ಅವರಿಗೆ 'ಸಾತನೂರಿನ ರಣಚರಿತ್ರೆ' ಮತ್ತು 'ಸೇಡು ಸಿಡಿಲು' ಘಟನೆಯನ್ನು ಪದೇ ಪದೇ ನೆನಪಿಸುತ್ತಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇದು ಕೇವಲ ಇಬ್ಬರು ನಾಯಕರ ನಡುವಿನ ವೈಯಕ್ತಿಕ ಸಂಘರ್ಷವಲ್ಲ, ಬದಲಾಗಿ 'ದಳಪತಿ Vs ಸಾತನೂರು ಸಲಗ' ನಡುವಿನ ರಾಜಕೀಯ ಮದ್ದಾನೆ ಗುದ್ದಾಟದ ರೋಚಕ ಇತಿಹಾಸದ ಪುನರಾವರ್ತನೆಯಾಗಿದೆ.

ಏನಿದು ಸಾತನೂರು ರಣಚರಿತ್ರೆ?
ಡಿ.ಕೆ. ಶಿವಕುಮಾರ್ ಅವರು ಹೆಚ್‌ಡಿಕೆ ಅವರಿಗೆ ನೆನಪಿಸುತ್ತಿರುವ 'ಸಾತನೂರು ಘಟನೆ' ರಾಜಕೀಯ ಜಿದ್ದು ಮತ್ತು ಸೇಡಿನ ಅತ್ಯಂತ ತೀವ್ರ ರೂಪದ ಕಥೆಯಾಗಿದೆ. ರಾಜಕೀಯ ವಲಯದ ಮಾಹಿತಿಯ ಪ್ರಕಾರ, ಡಿ.ಕೆ. ಶಿವಕುಮಾರ್ ಅವರು ಚುನಾವಣಾ ಸಂಘರ್ಷವೊಂದರಲ್ಲಿ ಹೆಚ್‌ಡಿಕೆ ಅವರ ಎದುರಿಗೆ ಅವರ ಹೆತ್ತಮ್ಮನನ್ನೇ ಕರೆತಂದು ನಿಲ್ಲಿಸಿದ್ದರು ಎನ್ನಲಾಗಿದೆ. ಸೋಲಿನಿಂದ ಶುರುವಾಗಿ, ವೈಯಕ್ತಿಕ ಸೇಡಿನ ರೂಪ ತಾಳಿದ ಈ ಘಟನೆ, ಆ ಎರಡೂ ಕುಟುಂಬಗಳ ನಡುವೆ ಬೂದಿ ಮುಚ್ಚಿದ ಕೆಂಡದಂತಿರುವ ವೈರತ್ವಕ್ಕೆ ಕಾರಣವಾಗಿದೆ. 'ಕನಕಾಧಿಪತಿ' ಖ್ಯಾತಿಯ ಡಿ.ಕೆ. ಶಿವಕುಮಾರ್ ಅವರು ಆ ಸಾತನೂರು ರಣಚರಿತ್ರೆಯನ್ನು ಈಗ ಮತ್ತೆ ಕೆಣಕುತ್ತಿದ್ದಾರೆ.

ಈಗೇಕೆ ಮತ್ತೆ ಯುದ್ಧ ಪ್ರಾರಂಭ?
ಸದ್ಯ ರಾಜ್ಯ ರಾಜಕೀಯದಲ್ಲಿ ಮತ್ತೆ ಕದನದ ಕಿಚ್ಚು ಹೊತ್ತಲು ಹಲವು ಕಾರಣಗಳಿವೆ. ಮುಖ್ಯವಾಗಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೆಚ್‌ಡಿಕೆ ಅವರು ವಿರೋಧ ಪಕ್ಷದ ಪ್ರಮುಖ ನಾಯಕನಂತೆ ಇಡೀ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಮುಗಿಬಿದ್ದು ಟೀಕೆಗಳ ಸುರಿಮಳೆಗೈಯುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ತಮ್ಮ ವಿರುದ್ಧದ ಹಳೆಯ ಕೇಸುಗಳನ್ನು ಮತ್ತೆ ಕೆಣಕುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಸಂದೇಶ ಹೆಚ್‌ಡಿಕೆ ಅವರಿಗೆ ರವಾನೆಯಾದಂತೆ ಕಾಣುತ್ತಿದೆ.

ಹೆಚ್‌ಡಿಕೆ ಅವರು, 'ಗೌಡರ ಸಾಮ್ರಾಜ್ಯ' ಎಂದು ಕರೆಯಲ್ಪಡುವ ಹಳೇ ಮೈಸೂರು ಭಾಗದಲ್ಲಿ ಡಿ.ಕೆ. ಶಿವಕುಮಾರ್ ಅವರು ಲಗ್ಗೆ ಇಡುತ್ತಿದ್ದಾರೆ ಎಂದು ಭಾವಿಸಿದ್ದಾರೆ. ತಾನು ರಾಷ್ಟ್ರ ರಾಜಕಾರಣದಲ್ಲಿದ್ದರೂ, ರಾಜ್ಯ ರಾಜಕೀಯದ ಮೇಲೆ ನಿರಂತರ ಕಣ್ಣಿಟ್ಟಿರುವುದಾಗಿ ಮತ್ತು 'ಕೋಟೆ ಕಾಯೋಕೆ ಪಣ ತೊಟ್ಟಿರುವುದಾಗಿ' ಕುಮಾರಸ್ವಾಮಿ ಅವರು ಈ ಮೂಲಕ ಕಾಂಗ್ರೆಸ್‌ಗೆ ಸಂದೇಶ ರವಾನಿಸುತ್ತಿದ್ದಾರೆ.

ಒಟ್ಟಾರೆಯಾಗಿ, ಈ 'ಕುಟುಂಬ ಕದನ' ಮತ್ತು ರಣದ್ವೇಷದ ಚರಿತ್ರೆ ಮತ್ತೆ ಮುನ್ನೆಲೆಗೆ ಬಂದಿರುವುದು ರಾಜ್ಯದ ರಾಜಕೀಯ ಸ್ಥಿರತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಕುತೂಹಲಕಾರಿಯಾಗಿದೆ. 'ನೀವಾ? ನಾವಾ?' ಎಂಬಂತಹ ಈ ರಾಜಕೀಯ ಜಿದ್ದು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
22:55Karnataka Politics: ಉಭಯ ಸಂಕಟದಲ್ಲಿ ಸಿಲುಕಿದ ಕಾಂಗ್ರೆಸ್ ಹೈಕಮಾಂಡ್! ಹೇಗಿವೆ ಸಿದ್ದು-ಡಿಕೆ ಪಟ್ಟುಗಳು?
21:37ಬಂಡೆ ಬ್ರದರ್ಸ್ ವಚನ ವಜ್ರಾಯುಧ: ಡಿಕೆ–ಸಿದ್ದರಾಮಯ್ಯ ಪವರ್ ಪಾಲಿಟಿಕ್ಸ್ ನಿರ್ಣಾಯಕ ಹಂತಕ್ಕೆ!
Read more