ಸಾತನೂರಿನ ಆ ರಹಸ್ಯ: ಡಿಕೆ-ಹೆಚ್‌ಡಿಕೆ ವೈರತ್ವದ ಹಿಂದಿನ ಕಥೆ ರಿವೀಲ್ ಆಯ್ತು ನೋಡಿ!

ಸಾತನೂರಿನ ಆ ರಹಸ್ಯ: ಡಿಕೆ-ಹೆಚ್‌ಡಿಕೆ ವೈರತ್ವದ ಹಿಂದಿನ ಕಥೆ ರಿವೀಲ್ ಆಯ್ತು ನೋಡಿ!

Published : Oct 27, 2025, 01:44 PM IST

ಡಿಕೆ ಶಿವಕುಮಾರ್ ಮತ್ತು ಹೆಚ್‌ಡಿ ಕುಮಾರಸ್ವಾಮಿ ನಡುವಿನ ವೈರತ್ವಕ್ಕೆ ಕಾರಣವಾದ 'ಸಾತನೂರು ರಣಚರಿತ್ರೆ' ಎಂದರೇನು? ಈ ಸೇಡಿನ ಕಥೆಯ ಹಿಂದಿನ ರಹಸ್ಯ ತಿಳಿಯಲು ಈ ವಿಡಿಯೋ ನೋಡಿ.

ಬೆಂಗಳೂರು (ಅ.27): ಕರ್ನಾಟಕದ ರಾಜ್ಯ ರಾಜಕಾರಣದ ಇಬ್ಬರು ಪ್ರಬಲ ನಾಯಕರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಡಿ.ಕೆ.) ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (ಹೆಚ್‌ಡಿಕೆ) ನಡುವಿನ ದಶಕಗಳ ವೈರತ್ವದ 'ಮಹಾಯುದ್ಧ'ವು ಇದೀಗ ಮತ್ತೊಮ್ಮೆ ಭುಗಿಲೆದ್ದಿದೆ. ಈ ಬಾರಿಯ ರಾಜಕೀಯ ಜಟಾಪಟಿಯ ನಡುವೆ, ಡಿ.ಕೆ. ಶಿವಕುಮಾರ್ ಅವರು ಹೆಚ್‌ಡಿಕೆ ಅವರಿಗೆ 'ಸಾತನೂರಿನ ರಣಚರಿತ್ರೆ' ಮತ್ತು 'ಸೇಡು ಸಿಡಿಲು' ಘಟನೆಯನ್ನು ಪದೇ ಪದೇ ನೆನಪಿಸುತ್ತಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇದು ಕೇವಲ ಇಬ್ಬರು ನಾಯಕರ ನಡುವಿನ ವೈಯಕ್ತಿಕ ಸಂಘರ್ಷವಲ್ಲ, ಬದಲಾಗಿ 'ದಳಪತಿ Vs ಸಾತನೂರು ಸಲಗ' ನಡುವಿನ ರಾಜಕೀಯ ಮದ್ದಾನೆ ಗುದ್ದಾಟದ ರೋಚಕ ಇತಿಹಾಸದ ಪುನರಾವರ್ತನೆಯಾಗಿದೆ.

ಏನಿದು ಸಾತನೂರು ರಣಚರಿತ್ರೆ?
ಡಿ.ಕೆ. ಶಿವಕುಮಾರ್ ಅವರು ಹೆಚ್‌ಡಿಕೆ ಅವರಿಗೆ ನೆನಪಿಸುತ್ತಿರುವ 'ಸಾತನೂರು ಘಟನೆ' ರಾಜಕೀಯ ಜಿದ್ದು ಮತ್ತು ಸೇಡಿನ ಅತ್ಯಂತ ತೀವ್ರ ರೂಪದ ಕಥೆಯಾಗಿದೆ. ರಾಜಕೀಯ ವಲಯದ ಮಾಹಿತಿಯ ಪ್ರಕಾರ, ಡಿ.ಕೆ. ಶಿವಕುಮಾರ್ ಅವರು ಚುನಾವಣಾ ಸಂಘರ್ಷವೊಂದರಲ್ಲಿ ಹೆಚ್‌ಡಿಕೆ ಅವರ ಎದುರಿಗೆ ಅವರ ಹೆತ್ತಮ್ಮನನ್ನೇ ಕರೆತಂದು ನಿಲ್ಲಿಸಿದ್ದರು ಎನ್ನಲಾಗಿದೆ. ಸೋಲಿನಿಂದ ಶುರುವಾಗಿ, ವೈಯಕ್ತಿಕ ಸೇಡಿನ ರೂಪ ತಾಳಿದ ಈ ಘಟನೆ, ಆ ಎರಡೂ ಕುಟುಂಬಗಳ ನಡುವೆ ಬೂದಿ ಮುಚ್ಚಿದ ಕೆಂಡದಂತಿರುವ ವೈರತ್ವಕ್ಕೆ ಕಾರಣವಾಗಿದೆ. 'ಕನಕಾಧಿಪತಿ' ಖ್ಯಾತಿಯ ಡಿ.ಕೆ. ಶಿವಕುಮಾರ್ ಅವರು ಆ ಸಾತನೂರು ರಣಚರಿತ್ರೆಯನ್ನು ಈಗ ಮತ್ತೆ ಕೆಣಕುತ್ತಿದ್ದಾರೆ.

ಈಗೇಕೆ ಮತ್ತೆ ಯುದ್ಧ ಪ್ರಾರಂಭ?
ಸದ್ಯ ರಾಜ್ಯ ರಾಜಕೀಯದಲ್ಲಿ ಮತ್ತೆ ಕದನದ ಕಿಚ್ಚು ಹೊತ್ತಲು ಹಲವು ಕಾರಣಗಳಿವೆ. ಮುಖ್ಯವಾಗಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೆಚ್‌ಡಿಕೆ ಅವರು ವಿರೋಧ ಪಕ್ಷದ ಪ್ರಮುಖ ನಾಯಕನಂತೆ ಇಡೀ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಮುಗಿಬಿದ್ದು ಟೀಕೆಗಳ ಸುರಿಮಳೆಗೈಯುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ತಮ್ಮ ವಿರುದ್ಧದ ಹಳೆಯ ಕೇಸುಗಳನ್ನು ಮತ್ತೆ ಕೆಣಕುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಸಂದೇಶ ಹೆಚ್‌ಡಿಕೆ ಅವರಿಗೆ ರವಾನೆಯಾದಂತೆ ಕಾಣುತ್ತಿದೆ.

ಹೆಚ್‌ಡಿಕೆ ಅವರು, 'ಗೌಡರ ಸಾಮ್ರಾಜ್ಯ' ಎಂದು ಕರೆಯಲ್ಪಡುವ ಹಳೇ ಮೈಸೂರು ಭಾಗದಲ್ಲಿ ಡಿ.ಕೆ. ಶಿವಕುಮಾರ್ ಅವರು ಲಗ್ಗೆ ಇಡುತ್ತಿದ್ದಾರೆ ಎಂದು ಭಾವಿಸಿದ್ದಾರೆ. ತಾನು ರಾಷ್ಟ್ರ ರಾಜಕಾರಣದಲ್ಲಿದ್ದರೂ, ರಾಜ್ಯ ರಾಜಕೀಯದ ಮೇಲೆ ನಿರಂತರ ಕಣ್ಣಿಟ್ಟಿರುವುದಾಗಿ ಮತ್ತು 'ಕೋಟೆ ಕಾಯೋಕೆ ಪಣ ತೊಟ್ಟಿರುವುದಾಗಿ' ಕುಮಾರಸ್ವಾಮಿ ಅವರು ಈ ಮೂಲಕ ಕಾಂಗ್ರೆಸ್‌ಗೆ ಸಂದೇಶ ರವಾನಿಸುತ್ತಿದ್ದಾರೆ.

ಒಟ್ಟಾರೆಯಾಗಿ, ಈ 'ಕುಟುಂಬ ಕದನ' ಮತ್ತು ರಣದ್ವೇಷದ ಚರಿತ್ರೆ ಮತ್ತೆ ಮುನ್ನೆಲೆಗೆ ಬಂದಿರುವುದು ರಾಜ್ಯದ ರಾಜಕೀಯ ಸ್ಥಿರತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಕುತೂಹಲಕಾರಿಯಾಗಿದೆ. 'ನೀವಾ? ನಾವಾ?' ಎಂಬಂತಹ ಈ ರಾಜಕೀಯ ಜಿದ್ದು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more