Karnataka Election 2023: ಮತದಾನ ದಿನವೂ ಮಂಡ್ಯದಲ್ಲಿ ಗಿಫ್ಟ್‌ ಪಾಲಿಟಿಕ್ಸ್‌, ಬಿಜೆಪಿಗೆ ಮತ ನೀಡುವಂತೆ ಸೀರೆ, ಕೋಳಿ ಹಂಚಿಕೆ..?

May 10, 2023, 2:08 PM IST

ಮಂಡ್ಯ(ಮೇ.10): ಮತದಾನ ದಿನವೂ ಮಂಡ್ಯದಲ್ಲಿ ಗಿಫ್ಟ್‌ ಪಾಲಿಟಿಕ್ಸ್‌ ನಡೆದಿದೆ ಅಂತ ಆರೋಪಿಸಲಾಗಿದೆ. ಬಿಜೆಪಿ ಕಾರ್ಯಕರ್ತರು ಮತದಾರರಿಗೆ ಉಡುಗೊರೆ ಹಂಚಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ. ಬಿಜೆಪಿಗೆ ಮತ ನೀಡುವಂತೆ ಸೀರೆ, ಕೋಳಿ ಹಂಚಿಕೆ ಮಾಡಲಾಗಿದೆ. ಕೆ.ಸಿ. ನಾರಾಯಣಗೌಡ ಅವರ ಬೆಂಬಲಿಗರಿಂದ ತಡರಾತ್ರಿ ಮತದಾರರಿಗೆ ಸೀರೆ, ಕೋಳಿ ಹಂಚಲಾಗಿದೆ ಅಂತ ಆರೋಪಿಸಲಾಗಿದೆ. ಯಾವುದೇ ಆಮಿಷಗಳಿಗೆ ಒಳಗಾಗಬೇಡಿ ಅಂತ ಗ್ರಾಮಸ್ಥರು ಬಿಜೆಪಿ ವಿರುದ್ಧ ಘೋಷನೆಗಳನ್ನ ಕೂಗಿ ಆಕ್ರೋಶವನ್ನ ಹೊರಹಾಕಿದ್ದಾರೆ. ದಲಿತ ವಿರೋಧಿ ಬಿಜೆಪಿಗೆ ಗ್ರಾಮಸ್ಥರು ದಿಕ್ಕಾರ ಕೂಗಿದ್ದಾರೆ. 

Karnataka Election 2023: ನೆಲಮಂಗಲದಲ್ಲಿ ಮತ ಚಲಾಯಿಸಿದ ತೃತೀಯ ಲಿಂಗಿಗಳು