ಸಿಎಂ ಬೊಮ್ಮಾಯಿಗೆ ಹೊಸ ತಲೆಬಿಸಿ : ಅತೃಪ್ತರಿಂದ ಹೊಸ ವರಸೆ

Aug 10, 2021, 10:36 AM IST

ಬೆಂಗಳೂರು (ಆ.10): ರಾಜ್ಯದಲ್ಲಿ ಸಂಪುಟ ವಿಸ್ತರಣೆಯಾಗಿದ್ದು, ಆದರೆ ಹಲವರ ಅಸಮಾಧಾನ ಮಾತ್ರ ಇನ್ನೂ ಮುಂದುವರಿದಿದೆ. ಕೆಲವರು ಖಾತೆಗಾಗಿ ಅಸಮಾಧಾನಗೊಂಡರೆ ಹಲವರು ಸಿಕ್ಕ ಸಚಿವ ಸ್ಥಾನದ ಬಗ್ಗೆಯೆ ಮುನಿಸಿಕೊಂಡಿದ್ದಾರೆ. 

ಅತೃಪ್ತ ಶಾಸಕರ ಟೀಂ ದೆಹಲಿಗೆ, ಖಾಲಿ ಇರುವ 4 ಸ್ಥಾನಗಳಿಗಾಗಿ ಸರ್ಕಸ್..!

ಇದೀಗ ಸಿಎಂ ಬೊಮ್ಮಾಯಿಗೆ ತಲೆ ಬಿಸಿ ಶುರುವಾಗಿದೆ. ಅತೃಪ್ತ ಶಾಸಕರ ಪಡೆ ದೆಹಲಿ ಯಾತ್ರೆಗೆ ಮುಂದಾಗಿದೆ.  ಸಚಿವ ಸ್ಥಾನ ವಂಚಿತರಲ್ಲಿ ಕೆಲವರು ದೆಹಲಿಯಲ್ಲೇ  ಬೀಡುಬಿಟ್ಟಿದ್ದಾರೆ.