ಸಿಎಂ ವಿರುದ್ಧವೇ ಡಿಸಿಎಂ ರಣಕಹಳೆ..?! ವಿಪಕ್ಷಗಳು ಹೇಳಿದ್ದ ಹೈಕಮಾಂಡ್ VS ಯೋಗಿ ರಹಸ್ಯ ಇದೇನಾ?

ಸಿಎಂ ವಿರುದ್ಧವೇ ಡಿಸಿಎಂ ರಣಕಹಳೆ..?! ವಿಪಕ್ಷಗಳು ಹೇಳಿದ್ದ ಹೈಕಮಾಂಡ್ VS ಯೋಗಿ ರಹಸ್ಯ ಇದೇನಾ?

Published : Jul 20, 2024, 05:07 PM IST

ಯು.ಪಿ ಕೇಸರಿ ಭದ್ರಕೋಟೆಯಲ್ಲೇ ಬಿರುಕು ಉಂಟಾಗಿದ್ದೇಕೆ
ಮೋದಿ ಕರ್ಮಭೂಮಿಯಲ್ಲಿ ಶುರುವಾಗಿದೆ ಅಂತರ್ಯುದ್ಧ!
ಒಂದು ಸೋಲಿನಿಂದು ಉಂಟಾಯ್ತು ರಾಜಕೀಯ ಸುನಾಮಿ!
ರಣಕೌತುಕ ಮೂಡಿಸಿದ್ದೇಕೆ ಯೋಗಿ VS ಅದರ್ಸ್ ಕದನ..?

24ರ ಲೋಕಸಭಾ ಸಂಗ್ರಾಮ  ಮುಗಿದಿದ್ದೂ ಆಯ್ತು. ಮತ್ತೆ ನರೇಂದ್ರ ಮೋದಿ (Narendra Modi)ಪ್ರಧಾನಿಯಾಗಿದ್ದೂ ಆಯ್ತು. ಎನ್‌ಡಿಎ(NDA) ಮಿತ್ರ ಕೂಟ ಅಧಿಕಾರ ಹಿಡಿದಿದ್ದೂ ಆಯ್ತು. ಆದ್ರೆ, ಉತ್ತರ ಪ್ರದೇಶದಲ್ಲಿ(Uttar pradesh) ಯಾಕ್ ಹಿಂಗ್ ಆಯ್ತು? ಯಾರಿಂದ ಆಯ್ತು ಅನ್ನೋ ಪ್ರಶ್ನೆಗೆ ಮಾತ್ರ ನಿಖರ ಉತ್ತರ ಸಿಕ್ಕಿಲ್ಲ. ಆದ್ರೆ ಆ ಪ್ರಶ್ನೆಗೆ ಉತ್ತರ ಹುಡುಕೋ ಪ್ರಯತ್ನವಾಗ್ತಿದ್ದ ಹಾಗೇ, ಉತ್ತರ ಪ್ರದೇಶದ ಕೇಸರಿ ಭದ್ರಕೋಟೆಯಲ್ಲೇ(BJP) ಬಿರುಕು ಉಂಟಾಗಿದೆ. ಕೋಟೆಯೊಳಗೇ ಒಂದು ಅಂತರ್ಯುದ್ಧ ನಡೀತಿರೋ ಹಾಗೆ ಕಾಣ್ತಾ ಇದೆ. ರಾಷ್ಟ್ರ ರಾಜಕಾರಣದಲ್ಲೀಗ ಹೊಸ ಚರ್ಚೆ ಉದ್ಭವಿಸಿದೆ.. ದೇಶದ ಮೂಲೆ ಮೂಲೆಯಲ್ಲೂ ಹೊಸ ಅಲೆ ಸೃಷ್ಟಿಸಿದ್ದ ಯೋಗಿ ಆದಿತ್ಯನಾಥ್ ( Yogi Adityanath) ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಮುಂದುವರೀತಾರೋ ಇಲ್ವೋ ಅನ್ನೋ ಆತಂಕ ಹುಟ್ಟಿಕೊಂಡಿದೆ. ಅದಕ್ಕೆ ಕಾರಣವಾಗಿದ್ದು, ಇದೊಂದು ಸಂಗತಿ. ಉತ್ತರ ಪ್ರದೇಶದಲ್ಲಿ ರಾಜಕೀಯ ಪಲ್ಲಟದ ಭವಿಷ್ಯ ಹೇಳ್ತಾ ಇರೋದು.. ಉತ್ತರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಚೌದರಿ, ಹಾಗೂ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಇತ್ತೀಚಿಗೆ ತಾನೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡ ಅವರನ್ನ ಭೇಟಿಯಾದ್ರು.. ಭೇಟಿಯಾಗಿ ಮಾತುಕತೆ ನಡೆಸಿದ್ರು. ಈ ಸಿಂಪಲ್ ಭೇಟಿ ಯೋಗಿ ಆದಿತ್ಯನಾಥರ ಸರ್ಕಾರಕ್ಕೇ ಅಗ್ನಿಪರೀಕ್ಷೆ ತಂದೊಡ್ಡಿದೆ ಅನ್ನೋ ಮಾತಿದೆ.. ಅದಕ್ಕೆ ಕಾರಣ ಬರೀ ಮಾತುಕತೆ ಮಾತ್ರವೇ ಅಲ್ಲ, ಬದಲಾಗಿ, ಈ ಇಬ್ಬರು ರಾಜ್ಯ ನಾಯಕರು, ಹೈಕಮಾಂಡ್ ಮುಂದೆ ಇಟ್ಟಿರೋ ಆ 15 ಪುಟಗಳ ವರದಿ..  ಉತ್ತರ ಪ್ರದೇಶದಲ್ಲಷ್ಟೇ ಅಲ್ಲ, ರಾಷ್ಟ್ರ ರಾಜಕಾರಣದಲ್ಲೇ ದೊಡ್ಡದೊಂದು ಬಿರುಗಾಳಿ ಎಬ್ಬಿಸುವ ಸುಳಿವು ನೀಡ್ತಾ ಇವೆ.

ಇದನ್ನೂ ವೀಕ್ಷಿಸಿ:  ಅಕ್ರಮಗಳ ಸರದಾರನ ವಿಚಾರದಲ್ಲಿ ಸಿದ್ದು ದಾರಿ ತಪ್ಪಿದ್ದು ಹೇಗೆ ? 'ಟಗರು'ರಾಮಯ್ಯಗೆ ಇಂದು 'ನಾಗ'ಕಂಟಕ..!

20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:00‘ರಾಮ’ರಣವ್ಯೂಹ ಛಿದ್ರಗೊಳಿಸಿದ ‘ಶಿವ’ ನಿಗೂಢತೆಯಲ್ಲಿಯೇ ಅಂತ್ಯಗೊಂಡ ಪ್ರಹಸನ; ಟ್ರಬಲ್ ಹಂಟಿಂ
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
Read more