ಕುಮಾರಸ್ವಾಮಿಯನ್ನು ಹಾವಾಡಿಗರಿಗೆ ಹೋಲಿಸಿದ ಸಚಿವ ಕೆ.ಎನ್. ರಾಜಣ್ಣ: ಜೇಬಲ್ಲಿರೋದನ್ನ ಆಚೆ ಬಿಡಿ

ಕುಮಾರಸ್ವಾಮಿಯನ್ನು ಹಾವಾಡಿಗರಿಗೆ ಹೋಲಿಸಿದ ಸಚಿವ ಕೆ.ಎನ್. ರಾಜಣ್ಣ: ಜೇಬಲ್ಲಿರೋದನ್ನ ಆಚೆ ಬಿಡಿ

Published : Aug 05, 2023, 05:59 PM IST

ಮಾಜಿ ಸಿಎಂ ಕುಮಾರಸ್ವಾಮಿ ಸುಳ್ಳು ಆರೋಪ ಮಾಡ್ತಿದ್ದಾರೆ. ಹಾವಾಡಿಗರು ಹಾವು ಬಿಡ್ತಿವಿ ಅಂತಾ ಹೇಳ್ತಾರಲ್ಲಾ ಅಂತಹ ಕೆಲಸವಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಟೀಕೆ ಮಾಡಿದರು.

ಹಾಸನ (ಆ.05): ರಾಜ್ಯದ ಸರ್ಕಾರದ ಮೇಲಿರೋ ವರ್ಗಾವಣೆ ದಂಧೆ ಆರೋಪಗಳೆಲ್ಲಾ ಸುಳ್ಳು. ಅದೇನಾದ್ರೂ ಇದ್ದರೆ ನಿಖರವಾಗಿ ಇಂತಹ ಅಂಶದಲ್ಲಿ ಆಗಿದೆ ಅಂತಾ ಹೇಳಲಿ. ಮಾಜಿ ಸಿಎಂ ಕುಮಾರಸ್ವಾಮಿ ಅವರು, ಸಾಕ್ಷ್ಯವನ್ನು ಇಲ್ಲಿ ಇಟ್ಕೊಂಡಿದ್ದೀನಿ, ನಾಳೆ ತೋರಿಸ್ತೀನಿ, ನಾಳಿದ್ದು ಕೊಡ್ತೀನಿ ಅನ್ನೋದು, ಹಾವಾಡಿಗರು ಹಾವು ಬಿಡ್ತಿವಿ ಅಂತಾ ಹೇಳ್ತಾರಲ್ಲಾ ಆ ತರಹದ ಕೆಲಸವಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಟೀಕೆ ಮಾಡಿದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ವರ್ಗಾವಣೆ ದಂಧೆ ಆರೋಪಗಳೆಲ್ಲಾ ಸುಳ್ಳು. ಅದೇನಾದ್ರೂ ಇದ್ದರೆ ನಿಖರವಾಗಿ ಇಂತಹ ಅಂಶದಲ್ಲಿ ಆಗಿದೆ ಅಂತಾ ಹೇಳಲಿ. ಅದೇನೋ ಹೇಳ್ತಾ ಇದ್ರಲ್ಲ ಜೇಬಿನಲ್ಲಿ ತೋರಿಸಿಕೊಂಡು ಇಲ್ಲೈತೆ .. ಅಲ್ಲೈತೆ.. ತೋರಿಸ್ತಾ ಇದ್ರಲ್ಲ. ಏನಿದೆ ಅದನ್ನು ಹೊರ ಹಾಕೋದಕ್ಕೆ ಹೇಳಿ, ಹೊರ ಹಾಕಿದ ಮೇಲೆ ಯಾರು ತಪ್ಪಿತಸ್ಥರಿರ್ತಾರೆ ಗೊತ್ತಾಗುತ್ತದೆ. ಸುಮ್ಮನೆ ಸುಳ್ಳು ಆಪಾದನೆ ಮಾಡುವಂತಹದ್ದು ಯಾರಿಗೂ ಭೂಷಣ ಅಲ್ಲ ಎಂದು ಹೇಳಿದರು.

ಬಿಡಿಎನಲ್ಲಿ‌ ಹಣ ವಸೂಲಿ ಮಾಡೋದಕ್ಕೆ ಅಧಿಕಾರಿಗಳನ್ನ ನೇಮಕ‌ ಮಾಡಿದ್ದಾರೆ ಎಂಬ ವಿಚಾರವೂ ಸುಳ್ಳಾಗಿದೆ. ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಏನೇ ಆಪಾದನೆ ಮಾಡಿದ್ರೂ ಕೂಡಾ ಅದಕ್ಕೆ ಏನಾದ್ರೂ ಆಧಾರ ಇರಬೇಕು. ಆಧಾರ ಇಟ್ಟು ಹೇಳಿದ್ರೆ ಒಪ್ಪುತ್ತೇವೆ. ಪದೇ ಪದೇ ಇಲ್ಲೆಲ್ಲಾ ಇಟ್ಕೊಂಡಿದ್ದೀನಿ, ತೋರಿಸ್ತೀನಿ.. ನಾಳೆ ಕೊಡ್ತೀನಿ, ನಾಳಿದ್ದು ಕೊಡ್ತೀನಿ ಅಂತಾರೆ. ಇದು ಹಾವಾಡಿಗರು ಹಾವು ಬಿಡ್ತಿವಿ ಅಂತಾ ಹೇಳ್ತಾರಲ್ಲಾ ಆ ತರಹದ ಕೆಲಸವಾಗಿದೆ. ಅದೆಲ್ಲಾ ಮಾಡಬಾರದು, ಈಗಲೂ ಅರ್ಜೆಂಟಾಗಿ ತೋರಿಸೋದಕ್ಕೆ ಹೇಳಿ. ಇಷ್ಟು ದಿನ ಯಾಕೆ ಕಾಯಬೇಕು, ಆಪಾದನೆ ವೈಯಕ್ತಿಕವಾಗಿ ಮಾಡ್ತರಲ್ಲಾ. ಅಲ್ಲಿ ಲಂಚ ಹೊಡೆದಿದ್ದಾರೆ, ಇಲ್ಲಿ ಲಂಚ ಹೊಡೆದಿದ್ದಾರೆ ಅಂತಾ ಹೇಳ್ತಾರಲ್ಲಾ. ಜೇಬಿನಲ್ಲಿ ಇದೆ ಅಂತಾ ತೋರಿಸಿದ್ರಲ್ಲಾ, ಅದನ್ನ ಆಚೆ ಬಿಡೋದಕ್ಕೆ ಹೇಳಿ ಅಮೇಲೆ ನೋಡೋಣ ಎಂದರು.

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
Read more