ಕುಮಾರಸ್ವಾಮಿಯನ್ನು ಹಾವಾಡಿಗರಿಗೆ ಹೋಲಿಸಿದ ಸಚಿವ ಕೆ.ಎನ್. ರಾಜಣ್ಣ: ಜೇಬಲ್ಲಿರೋದನ್ನ ಆಚೆ ಬಿಡಿ

ಕುಮಾರಸ್ವಾಮಿಯನ್ನು ಹಾವಾಡಿಗರಿಗೆ ಹೋಲಿಸಿದ ಸಚಿವ ಕೆ.ಎನ್. ರಾಜಣ್ಣ: ಜೇಬಲ್ಲಿರೋದನ್ನ ಆಚೆ ಬಿಡಿ

Published : Aug 05, 2023, 05:59 PM IST

ಮಾಜಿ ಸಿಎಂ ಕುಮಾರಸ್ವಾಮಿ ಸುಳ್ಳು ಆರೋಪ ಮಾಡ್ತಿದ್ದಾರೆ. ಹಾವಾಡಿಗರು ಹಾವು ಬಿಡ್ತಿವಿ ಅಂತಾ ಹೇಳ್ತಾರಲ್ಲಾ ಅಂತಹ ಕೆಲಸವಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಟೀಕೆ ಮಾಡಿದರು.

ಹಾಸನ (ಆ.05): ರಾಜ್ಯದ ಸರ್ಕಾರದ ಮೇಲಿರೋ ವರ್ಗಾವಣೆ ದಂಧೆ ಆರೋಪಗಳೆಲ್ಲಾ ಸುಳ್ಳು. ಅದೇನಾದ್ರೂ ಇದ್ದರೆ ನಿಖರವಾಗಿ ಇಂತಹ ಅಂಶದಲ್ಲಿ ಆಗಿದೆ ಅಂತಾ ಹೇಳಲಿ. ಮಾಜಿ ಸಿಎಂ ಕುಮಾರಸ್ವಾಮಿ ಅವರು, ಸಾಕ್ಷ್ಯವನ್ನು ಇಲ್ಲಿ ಇಟ್ಕೊಂಡಿದ್ದೀನಿ, ನಾಳೆ ತೋರಿಸ್ತೀನಿ, ನಾಳಿದ್ದು ಕೊಡ್ತೀನಿ ಅನ್ನೋದು, ಹಾವಾಡಿಗರು ಹಾವು ಬಿಡ್ತಿವಿ ಅಂತಾ ಹೇಳ್ತಾರಲ್ಲಾ ಆ ತರಹದ ಕೆಲಸವಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಟೀಕೆ ಮಾಡಿದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ವರ್ಗಾವಣೆ ದಂಧೆ ಆರೋಪಗಳೆಲ್ಲಾ ಸುಳ್ಳು. ಅದೇನಾದ್ರೂ ಇದ್ದರೆ ನಿಖರವಾಗಿ ಇಂತಹ ಅಂಶದಲ್ಲಿ ಆಗಿದೆ ಅಂತಾ ಹೇಳಲಿ. ಅದೇನೋ ಹೇಳ್ತಾ ಇದ್ರಲ್ಲ ಜೇಬಿನಲ್ಲಿ ತೋರಿಸಿಕೊಂಡು ಇಲ್ಲೈತೆ .. ಅಲ್ಲೈತೆ.. ತೋರಿಸ್ತಾ ಇದ್ರಲ್ಲ. ಏನಿದೆ ಅದನ್ನು ಹೊರ ಹಾಕೋದಕ್ಕೆ ಹೇಳಿ, ಹೊರ ಹಾಕಿದ ಮೇಲೆ ಯಾರು ತಪ್ಪಿತಸ್ಥರಿರ್ತಾರೆ ಗೊತ್ತಾಗುತ್ತದೆ. ಸುಮ್ಮನೆ ಸುಳ್ಳು ಆಪಾದನೆ ಮಾಡುವಂತಹದ್ದು ಯಾರಿಗೂ ಭೂಷಣ ಅಲ್ಲ ಎಂದು ಹೇಳಿದರು.

ಬಿಡಿಎನಲ್ಲಿ‌ ಹಣ ವಸೂಲಿ ಮಾಡೋದಕ್ಕೆ ಅಧಿಕಾರಿಗಳನ್ನ ನೇಮಕ‌ ಮಾಡಿದ್ದಾರೆ ಎಂಬ ವಿಚಾರವೂ ಸುಳ್ಳಾಗಿದೆ. ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಏನೇ ಆಪಾದನೆ ಮಾಡಿದ್ರೂ ಕೂಡಾ ಅದಕ್ಕೆ ಏನಾದ್ರೂ ಆಧಾರ ಇರಬೇಕು. ಆಧಾರ ಇಟ್ಟು ಹೇಳಿದ್ರೆ ಒಪ್ಪುತ್ತೇವೆ. ಪದೇ ಪದೇ ಇಲ್ಲೆಲ್ಲಾ ಇಟ್ಕೊಂಡಿದ್ದೀನಿ, ತೋರಿಸ್ತೀನಿ.. ನಾಳೆ ಕೊಡ್ತೀನಿ, ನಾಳಿದ್ದು ಕೊಡ್ತೀನಿ ಅಂತಾರೆ. ಇದು ಹಾವಾಡಿಗರು ಹಾವು ಬಿಡ್ತಿವಿ ಅಂತಾ ಹೇಳ್ತಾರಲ್ಲಾ ಆ ತರಹದ ಕೆಲಸವಾಗಿದೆ. ಅದೆಲ್ಲಾ ಮಾಡಬಾರದು, ಈಗಲೂ ಅರ್ಜೆಂಟಾಗಿ ತೋರಿಸೋದಕ್ಕೆ ಹೇಳಿ. ಇಷ್ಟು ದಿನ ಯಾಕೆ ಕಾಯಬೇಕು, ಆಪಾದನೆ ವೈಯಕ್ತಿಕವಾಗಿ ಮಾಡ್ತರಲ್ಲಾ. ಅಲ್ಲಿ ಲಂಚ ಹೊಡೆದಿದ್ದಾರೆ, ಇಲ್ಲಿ ಲಂಚ ಹೊಡೆದಿದ್ದಾರೆ ಅಂತಾ ಹೇಳ್ತಾರಲ್ಲಾ. ಜೇಬಿನಲ್ಲಿ ಇದೆ ಅಂತಾ ತೋರಿಸಿದ್ರಲ್ಲಾ, ಅದನ್ನ ಆಚೆ ಬಿಡೋದಕ್ಕೆ ಹೇಳಿ ಅಮೇಲೆ ನೋಡೋಣ ಎಂದರು.

23:52ಪದಗ್ರಹಣಕ್ಕೂ ಮುನ್ನ ಮೂರು ಹೆಜ್ಜೆ, 3 ಸಂದೇಶ; ಡಿಕೆ ಮಾಸ್ಟರ್ ಪ್ಲಾನ್‌ ರಹಸ್ಯವೇನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
44:07ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ ನೀಡಿದ್ದೇಕೆ? ನಿತಿನ್​ ನಬಿನ್ ಮನವೊಲಿಕೆಗೆ ಒಪ್ಪಲಿಲ್ಲ ಯಾಕೆ?
26:58ಬ್ರ್ಯಾಂಡ್ ಬಂಡೆ ಡಿಕೆ: ಖಾದರ್ ಲುಕ್‌ನಿಂದ Yezdi ಬೈಕ್‌ವರೆಗೆ ಡಿಕೆ ಶಿವಕುಮಾರ್ ಸ್ಟೈಲ್ ಸ್ಟೋರಿ
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
39:58ಜಮೀರ್ ಖಾನ್‌ಗೆ 'ಕೈ' ಕೊಟ್ಟ ಆಡಿಯೋ; ಇತ್ತ ಸಿದ್ದರಾಮಯ್ಯ ಆಪ್ತನಿಗೆ ಕೊಟ್ರು ಮಹತ್ವದ ಸಂದೇಶ
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
22:14ಮೈಲಾರನ ಮುನಿಸು ಮಾಯ! ಡಿಕೆಗೆ ಮುಖ್ಯಮಂತ್ರಿ ಯೋಗ, ದೈವ ಕೃಪೆಯ ಹಿಂದೆ ಏನಿದೆ ರಹಸ್ಯ?
21:20ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು! ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!
25:48135 ಸೀಟ್ ಗೆಲ್ಲಿಸಿದ್ರೂ ಸಿಗದ ಸಿಂಹಾಸನ! ಪಕ್ಷಕ್ಕಾಗಿ ಜೈಲು, ಅವಮಾನ ಸಹಿಸಿದ 'ಕನಕಪುರ ಬಂಡೆ' ಡಿಕೆಶಿ ರೋಚಕ ಕಥೆ
Read more