ಸಚಿವ ಮುನಿರತ್ನ ಆಸ್ತಿ ಮೂಲಕ್ಕೆ ಕೈ ಹಾಕಿದ ಕೆಂಪಣ್ಣ: ಮುಂದುವರೆದ ಜಟಾಪಟಿ

Jan 16, 2023, 5:54 PM IST

ಸಚಿವ ಮುನಿರತ್ನ ಆಸ್ತಿ ಮೂಲಕ್ಕೆ ಗುತ್ತಿಗೆದಾರ ಕೆಂಪಣ್ಣ ಕೈ ಹಾಕಿದ್ದಾರೆ. ಸಚಿವ ಮುನಿರತ್ನ ಆಸ್ತಿ ವಿವರ ಕುರಿತು  ಲೋಕಾಯುಕ್ತಕ್ಕೆ ಆರ್ ಟಿಐ ನಡಿ ಅರ್ಜಿ ಸಲ್ಲಿಸಿದ್ದಾರೆ. ಕೆಂಪಣ್ಣ ಪರ ಹಿರಿಯ ವಕೀಲ ಧನಂಜಯ್‌ ಅರ್ಜಿ ಸಲ್ಲಿಸಿದ್ದಾರೆ. ಸಚಿವ ಮುನಿರತ್ನ ಅವರು ಕೆಂಪಣ್ಣ ಮೇಲೆ ಮಾನನಷ್ಟ ಹೂಡಿದ್ದರು, ಆದ್ರೆ  ಇದೀಗ ಕೆಂಪಣ್ಣ ಮುನಿರತ್ನ ಆಸ್ತಿ ವಿವರ ಕೋರಿದ್ದಾರೆ. ಇಬ್ಬರ ನಡುವೆ ಜಟಾಪಟಿ ಮುಂದುವರೆದಿದೆ.