ಡಿಕೆಶಿ ಸಿದ್ದರಾಮಯ್ಯ ಹೇಳಿದಂತೆ ನಾನು ವೀಕ್ಷಕನಾಗಿ ಕೆಲಸ ಮಾಡಿದ್ದೇನೆ: ಧ್ರುವ ನಾರಾಯಣ್

Feb 27, 2021, 1:53 PM IST

ಬೆಂಗಳೂರು (ಫೆ. 27): ಮೈಸೂರು ಮೇಯರ್ ಮೈತ್ರಿ ವಿವಾದ ಇನ್ನೂ ಎಳೆಯುತ್ತಲೇ ಇದೆ. ಡಿಕೆಶಿ ಸಿದ್ದರಾಮಯ್ಯ ಹೇಳಿದಂತೆ ನಾನು ವೀಕ್ಷಕನಾಗಿ ಕೆಲಸ ಮಾಡಿದ್ದೇನೆ.  ಚುನಾವಣಾ ವೇಳೆ ನಡೆದ ಘಟನೆ ಕುರಿತು ಡಿಕೆಶಿ ವರದಿ ಕೇಳಿದ್ದಾರೆ. ಸೋಮವಾರ ವರದಿ ಸಲ್ಲಿಸುತ್ತೇನೆ' ಎಂದು ಧ್ರುವ ನಾರಾಯಣ್ ಹೇಳಿದ್ದಾರೆ. 

ಡಿಜೆ ಹಳ್ಳಿ ಗಲಭೆ: ಸಂಪತ್ ರಾಜ್‌ಗೆ ಕ್ಲೀನ್ ಚಿಟ್, ಅಖಂಡ ಅಸಮಾಧಾನ; ಕಾಂಗ್ರೆಸ್‌ನಲ್ಲಿ ಏನಾಗ್ತಿದೆ.?

ಅಷ್ಟೇ ಅಲ್ಲ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಜೆಡಿಎಸ್ ನಾಯಕರು ಮೊದಲಿನಿಂದಲೂ ವಚನ ಭ್ರಷ್ಟರು. ಒಪ್ಪಂದದಂತೆ ಕಾಂಗ್ರೆಸ್‌ಗೆ ಮೇಯರ್ ಸ್ಥಾನ ಸಿಗಬೇಕಿತ್ತು. ಕೊಟ್ಟ ಮಾತಿನಂತೆ ಜೆಡಿಎಸ್ ನಾಯಕರು ನಡೆಯಲಿಲ್ಲ' ಎಂದು ಹೇಳಿದ್ದಾರೆ.