ಲಿಂಗಾಯತ ಸಿಎಂ ಚರ್ಚೆ ಮಧ್ಯೆ ಬೊಮ್ಮಾಯಿ ಕ್ಯಾಂಪೇನ್‌ ಕಿಕ್‌: ಜಯ ವಾಹಿನಿ ಹೆಸರಿನಲ್ಲಿ ರೋಡ್‌ ಶೋ

Apr 23, 2023, 2:37 PM IST

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಯಲಹಂಕದಿಂದ ರೋಡ್ ಶೋ ಆರಂಭಿಸಿದ್ದಾರೆ. ಬಹುತೇಕ ಲಿಂಗಾಯತ ಕ್ಷೇತ್ರಗಳಲ್ಲಿ ಸಿಎಂ ಯಾತ್ರೆ ಸಾಗಲಿದೆ. ಜಯ ವಾಹಿನಿ ಹೆಸರಿನಲ್ಲಿ ಸಿಎಂ ರೋಡ್‌ ಶೋ ಮಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಎಸ್. ಆರ್. ವಿಶ್ವನಾಥ ಪರವಾಗಿ ಯಲಹಂಕದಲ್ಲಿ ರೋಡ್ ಶೋ ನಡೆಸಿ ಸಿಎಂ ಮಾತನಾಡಿದರು. ಸಾದರ ಲಿಂಗಾಯತ ಕ್ಷೇತ್ರವನ್ನು ಸಿಎಂ ಟಾರ್ಗೆಟ್‌ ಮಾಡಿದ್ದು, ಅಲ್ಲಿ ಪ್ರಚಾರ ಮಾಡಲಿದ್ದಾರೆ. ಲಿಂಗಾಯತ ಟ್ರಂಪ್‌ ಕಾರ್ಡ್‌ ಪ್ಲೇ ಮಾಡಲಿದ್ದಾರಾ ಸಿಎಂ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ.

ಇದನ್ನೂ ವೀಕ್ಷಿಸಿ:  ಲಿಂಗಾಯತ ಸಮಾಜದ ಆತ್ಮವನ್ನು ಸಿದ್ದರಾಮಯ್ಯ ತುಳಿದಿದ್ದಾರೆ: ಬೊಮ್ಮಾಯಿ