ಶಿಗ್ಗಾಂವಿ ಕೋಟೆ ಭದ್ರಪಡಿಸಿಕೊಳ್ಳಲು ಸಿಎಂ ಮಾಸ್ಟರ್‌ ಪ್ಲ್ಯಾನ್‌: ಬೊಮ್ಮಾಯಿ ಸ್ಟಾಟರ್ಜಿಗೆ 'ಕೈ' ಸುಸ್ತು..?

Mar 23, 2023, 11:13 AM IST

ಸಿಎಂ ಬಸವರಾಜ ಬೊಮ್ಮಾಯಿ ಚುನಾವಣೆ ಹತ್ತರವಾಗ್ತಿದ್ದಂತೆ ರ್ಯಾಲಿ, ಯಾತ್ರೆಗಳ ಜತೆಗೆ ತಮ್ಮ ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ಗೆಲುವು ಸುಲಭಗೊಳಿಸಲು ಮಾಸ್ಟರ್‌ಪ್ಲಾನ್‌ ರೂಪಿಸುತ್ತದ್ದಾರೆ. ಈ ಹಿನ್ನೆಲೆ ಸಿಎಂ ಬೊಮ್ಮಾಯಿ ಎಲೆಕ್ಷನ್‌ ಸ್ಟಾಟರ್ಜಿಗೆ ಕೈ ನಾಯಕರು ಸುಸ್ತು ಹೊಡೆದಿದ್ದಾರೆ ಎನ್ನಲಾಗುತ್ತಿದೆ. ತಮ್ಮ ಕ್ಷೇತ್ರದ ಕೋಟೆಯನ್ನು ಸಿಎಂ ಬಸವರಾಜ್‌ ಬೊಮ್ಮಾಯಿ ಭದ್ರಪಡಿಸಿಕೊಳ್ಳುತ್ತಿದ್ದಾರೆ. ರಾಜ್ಯಾದ್ಯಂತ ಪ್ರಚಾರದಲ್ಲಿ ಬ್ಯುಸಿಯಾಗಿದ್ರೂ, ಕ್ಷೇತ್ರದಲ್ಲಿ ತಮ್ಮ ಪರ ಪ್ರಚಾರಕ್ಕೆ ತೊಂದರೆಯಾಗದಂತೆ ರಣತಂತ್ರ ರೂಪಿಸುತ್ತಿದ್ದಾರೆ. ಮಾರ್ಚ್‌ ತಿಂಗಳಲ್ಲೇ ಬೊಮ್ಮಾಯಿ 9 ಬಾರಿ ಶಿಗ್ಗಾಂವಿಗೆ ಭೇಟಿ ನೀಡಿದ್ದಾರೆ. ಹಾವೇರಿ ಜಿಲ್ಲೆಯ ಹಲವರಿಗೆ ನಿಗಮಗಳ ಸ್ಥಾನಮಾನ ನೀಡುತ್ತಿದ್ದಾರೆ. ತಮ್ಮ ಪರಮಾಪ್ತರಿಗೆ ನಿಗಮ ಮಂಡಳಿಯಲ್ಲಿ 40ಕ್ಕೂ ಹೆಚ್ಚು ಸ್ಥಾನ ನೀಡಿದ್ದಾರೆ.