ಅಪ್ಪ ಬೇಡ ಅಂದರೂ ಮಗನ ಬಾಯಲ್ಲಿ ವರುಣಾ ಜಪ! ಶಿಕಾರಿವೀರನ ನಿರ್ಧಾರದ ಹಿಂದಿದೆ ವರುಣಾ "ಖೆಡ್ಡಾ" ರಹಸ್ಯ!

ಅಪ್ಪ ಬೇಡ ಅಂದರೂ ಮಗನ ಬಾಯಲ್ಲಿ ವರುಣಾ ಜಪ! ಶಿಕಾರಿವೀರನ ನಿರ್ಧಾರದ ಹಿಂದಿದೆ ವರುಣಾ "ಖೆಡ್ಡಾ" ರಹಸ್ಯ!

Published : Apr 02, 2023, 02:21 PM IST

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೇಡವೆಂದರೂ ಅವರ ಪುತ್ರ ವಿಜಯೇಂದ್ರ ವರುಣಾ ಕ್ಷೇತ್ರದಿಂದಲೇ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಲು ತಯಾರಿ ನಡೆಸುತ್ತಿದ್ದಾರೆ. 

ಬೆಂಗಳೂರು (ಏ.02): ವರುಣಾ ವಾರ್‌ಗೆ ರೆಡಿಯಾದ್ರಾ ಸನ್ ಆಫ್ ಶಿಕಾರಿವೀರ..? ವರುಣಾದಿಂದ ಮಗನ ಸ್ಪರ್ಧೆ ಇಲ್ಲಅಂತಿದ್ದಾರೆ ಅಪ್ಪ..! ಅಪ್ಪ ಬೇಡ ಅಂದ್ರೂ ಮಗನ ಬಾಯಲ್ಲಿ ವರುಣಾ ಜಪ.! ಸಿದ್ದು ಸೋಲಿಗೆ ಸಿದ್ಧವಾಯ್ತಾ ವಿಜಯೇಂದ್ರ ವ್ಯೂಹ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ವರುಣಾ 'ವಿಜಯ' ರಹಸ್ಯ.

ಇಷ್ಟು ದಿನ ಇದ್ದ ಕುತೂಹಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸ್ತಾರೆ ಅನ್ನೋದು. ಈಗಿರೋ ಕುತೂಹಲ ವರುಣಾದಿಂದ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧಿಸ್ತಾರಾ ಅನ್ನೋದು. ಅಪ್ಪ ಬೇಡ ಅಂತಿದ್ದಾರೆ,  ಮಗನಿಗೆ ಮಾತ್ರ ವರುಣಾ ವ್ಯಾಮೋಹ ಕಮ್ಮಿಯಾಗ್ತಿಲ್ಲ. ವರುಣಾ ಯುದ್ಧಭೂಮಿಗೆ ನುಗ್ಗಿರೋ ವಿಜಯೇಂದ್ರ, ಸಿದ್ದರಾಮಯ್ಯನವರಿಗೆ ರಣವೀಳ್ಯ ಕೊಟ್ಟೇ ಬಿಟ್ಟೇ ಬಿಟ್ಟಿದ್ದಾರೆ. ಹಾಗಾದ್ರೆ ಏನಿದು ವಿಜಯೇಂದ್ರ ರಾಜನೀತಿ..? ವರುಣಾ “ವಿಜಯ” ರಹಸ್ಯದ ಅಸಲಿ ಗುಟ್ಟನ್ನು ತೋರಿಸ್ತೀವಿ ನೋಡಿ.

2018ರಲ್ಲಿ ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆಗೆ ಬ್ರೇಕ್ ಹಾಕಿದ್ದು ಬಿಜೆಪಿ ಹೈಕಮಾಂಡ್. ಈ ಬಾರಿ ಬ್ರೇಕ್ ಹಾಕಿರೋದು ಸ್ವತಃ ಯಡಿಯೂರಪ್ಪ. ಹಾಗಾದ್ರೆ ವರುಣಾದಿಂದ ಮಗ ಸ್ಪರ್ಧಿಸೋದು ಬೇಡ ಅನ್ನೋ ನಿರ್ಧಾರಕ್ಕೆ ಬಿಎಸ್ವೈ ಬಂದದ್ದೇಕೆ..? ಸಿದ್ದರಾಮಯ್ಯ ವಿರುದ್ಧ ವರುಣಾ ಯುದ್ಧಕ್ಕೆ ರೆಡಿಯಾಗಿದ್ದ ವಿಜಯೇಂದ್ರಗೆ ತಂದೆ ಯಡಿಯೂರಪ್ಪನವರೇ ಬ್ರೇಕ್ ಹಾಕಿದ್ದಾರೆ. ಮಗನ ರಣೋತ್ಸಾಹಕ್ಕೆ ತಂದೆ ತಣ್ಣೀರೆರಚಿದ್ದು ಯಾಕೆ..? ಮಗನಿಗೆ ಇಷ್ಟ ಇದ್ರೂ ವರುಣಾದಿಂದ ಸ್ಪರ್ಧೆ ಬೇಡ ಅಂತ ಬಿಎಸ್ವೈ ಹೇಳಿದ್ದೇಕೆ..? ಯಡಿಯೂರಪ್ಪನವರ ನಿರ್ಧಾರದ ಹಿಂದಿರೋ ರಹಸ್ಯ ಇಲ್ಲಿದೆ ನೋಡಿ.

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!