ಅಪ್ಪ ಬೇಡ ಅಂದರೂ ಮಗನ ಬಾಯಲ್ಲಿ ವರುಣಾ ಜಪ! ಶಿಕಾರಿವೀರನ ನಿರ್ಧಾರದ ಹಿಂದಿದೆ ವರುಣಾ "ಖೆಡ್ಡಾ" ರಹಸ್ಯ!

ಅಪ್ಪ ಬೇಡ ಅಂದರೂ ಮಗನ ಬಾಯಲ್ಲಿ ವರುಣಾ ಜಪ! ಶಿಕಾರಿವೀರನ ನಿರ್ಧಾರದ ಹಿಂದಿದೆ ವರುಣಾ "ಖೆಡ್ಡಾ" ರಹಸ್ಯ!

Published : Apr 02, 2023, 02:21 PM IST

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೇಡವೆಂದರೂ ಅವರ ಪುತ್ರ ವಿಜಯೇಂದ್ರ ವರುಣಾ ಕ್ಷೇತ್ರದಿಂದಲೇ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಲು ತಯಾರಿ ನಡೆಸುತ್ತಿದ್ದಾರೆ. 

ಬೆಂಗಳೂರು (ಏ.02): ವರುಣಾ ವಾರ್‌ಗೆ ರೆಡಿಯಾದ್ರಾ ಸನ್ ಆಫ್ ಶಿಕಾರಿವೀರ..? ವರುಣಾದಿಂದ ಮಗನ ಸ್ಪರ್ಧೆ ಇಲ್ಲಅಂತಿದ್ದಾರೆ ಅಪ್ಪ..! ಅಪ್ಪ ಬೇಡ ಅಂದ್ರೂ ಮಗನ ಬಾಯಲ್ಲಿ ವರುಣಾ ಜಪ.! ಸಿದ್ದು ಸೋಲಿಗೆ ಸಿದ್ಧವಾಯ್ತಾ ವಿಜಯೇಂದ್ರ ವ್ಯೂಹ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ವರುಣಾ 'ವಿಜಯ' ರಹಸ್ಯ.

ಇಷ್ಟು ದಿನ ಇದ್ದ ಕುತೂಹಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸ್ತಾರೆ ಅನ್ನೋದು. ಈಗಿರೋ ಕುತೂಹಲ ವರುಣಾದಿಂದ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧಿಸ್ತಾರಾ ಅನ್ನೋದು. ಅಪ್ಪ ಬೇಡ ಅಂತಿದ್ದಾರೆ,  ಮಗನಿಗೆ ಮಾತ್ರ ವರುಣಾ ವ್ಯಾಮೋಹ ಕಮ್ಮಿಯಾಗ್ತಿಲ್ಲ. ವರುಣಾ ಯುದ್ಧಭೂಮಿಗೆ ನುಗ್ಗಿರೋ ವಿಜಯೇಂದ್ರ, ಸಿದ್ದರಾಮಯ್ಯನವರಿಗೆ ರಣವೀಳ್ಯ ಕೊಟ್ಟೇ ಬಿಟ್ಟೇ ಬಿಟ್ಟಿದ್ದಾರೆ. ಹಾಗಾದ್ರೆ ಏನಿದು ವಿಜಯೇಂದ್ರ ರಾಜನೀತಿ..? ವರುಣಾ “ವಿಜಯ” ರಹಸ್ಯದ ಅಸಲಿ ಗುಟ್ಟನ್ನು ತೋರಿಸ್ತೀವಿ ನೋಡಿ.

2018ರಲ್ಲಿ ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆಗೆ ಬ್ರೇಕ್ ಹಾಕಿದ್ದು ಬಿಜೆಪಿ ಹೈಕಮಾಂಡ್. ಈ ಬಾರಿ ಬ್ರೇಕ್ ಹಾಕಿರೋದು ಸ್ವತಃ ಯಡಿಯೂರಪ್ಪ. ಹಾಗಾದ್ರೆ ವರುಣಾದಿಂದ ಮಗ ಸ್ಪರ್ಧಿಸೋದು ಬೇಡ ಅನ್ನೋ ನಿರ್ಧಾರಕ್ಕೆ ಬಿಎಸ್ವೈ ಬಂದದ್ದೇಕೆ..? ಸಿದ್ದರಾಮಯ್ಯ ವಿರುದ್ಧ ವರುಣಾ ಯುದ್ಧಕ್ಕೆ ರೆಡಿಯಾಗಿದ್ದ ವಿಜಯೇಂದ್ರಗೆ ತಂದೆ ಯಡಿಯೂರಪ್ಪನವರೇ ಬ್ರೇಕ್ ಹಾಕಿದ್ದಾರೆ. ಮಗನ ರಣೋತ್ಸಾಹಕ್ಕೆ ತಂದೆ ತಣ್ಣೀರೆರಚಿದ್ದು ಯಾಕೆ..? ಮಗನಿಗೆ ಇಷ್ಟ ಇದ್ರೂ ವರುಣಾದಿಂದ ಸ್ಪರ್ಧೆ ಬೇಡ ಅಂತ ಬಿಎಸ್ವೈ ಹೇಳಿದ್ದೇಕೆ..? ಯಡಿಯೂರಪ್ಪನವರ ನಿರ್ಧಾರದ ಹಿಂದಿರೋ ರಹಸ್ಯ ಇಲ್ಲಿದೆ ನೋಡಿ.

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!