ಉ. ಕರ್ನಾಟಕ ಅಭಿವೃದ್ಧಿಗೆ ನಾನು ಕೆಲಸ ಮಾಡ್ಬೇಕು: ಸುರೇಶ್ ಅಂಗಡಿ ಯಾವತ್ತೂ ನುಡಿಯುತ್ತಿದ್ದ ಮಾತು!

Sep 24, 2020, 12:14 PM IST

ನವದೆಹಲಿ(ಸೆ.24 ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನದಿಂದ ಕರ್ನಾಟಕ ಹಾಗೂ ಇಲ್ಲಿನ ಬಿಜೆಪಿ ಪಕ್ಷಕ್ಕೆ ಬಹುದೊಡ್ಡ ಆಘಾತವಾಗಿದೆ. ಯಾಕೆಂದರೆ ಯಡಿಯೂರಪ್ಪನವರ ಬಳಿಕ ಲಿಂಗಾಯತ ನಾಯಕರು ಯಾರು ಎಂಬ ಪ್ರಶ್ನೆ ಎದ್ದಾಗ ಸುರೇಶ್ ಅಂಗಡಿ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿತ್ತು. 

ಇವರೊಬ್ಬ ಸಜ್ಜನ ರಾಜಕಾರಣಿ. ತಾನಾಯ್ತು ತನ್ನ ಕೆಲಸವಾಯ್ತು ಎನ್ನುವಂತೆ ಕಳೆದ ಸುಮಾರು ಹದಿನಾರು ವರ್ಷಗಳಿಂದ ಸೇವೆ ಸಲ್ಲಿಸಿಕೊಂಡಿದ್ದರು. ಬಿಜೆಪಿಯ ಕಾಋfಯಕರ್ತರಾಗಿದ್ದ ಅಂಗಡಿ ಕೇಂದ್ರ ಸಚಿವರಾದ ಹಾದಿಯೇ ಕುತೂಹಲಭರಿತವಾಗಿದೆ.

ಯಾವತ್ತೂ ಉತ್ತರ ಕನ್ನಡ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಸಚಿವರಾಘಿ ನನಗೊಂದು ಅವಕಾಶ ಸಿಕ್ಕಿದೆ ಎನ್ನುತ್ತಿದ್ದ ಸುರೇಶ್ ಅಂಗಡಿ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದ್ದರು.