ವಿಳಂಬ ಹುಟ್ಟು ಹಾಕಿದ ಅನುಮಾನ!: 3ನೇ ಸಿಎಂ ಬಾಂಬ್, ಬಿಜೆಪಿಯಲ್ಲಿ ತಳಮಳ?

Aug 11, 2022, 10:51 AM IST

ಬೆಂಗಳೂರು(ಆ.11): ರಾಜ್ಯ ರಾಜಕೀಯದಲ್ಲಿ 3ನೇ ಸಿಎಂ ಬಾಂಬ್‌ ಭಾರೀ ಸಂಚಲನವನ್ನೇ ಸೃಷ್ಟಿಸಿದೆ.  ಕಾಂಗ್ರೆಸ್‌ ಪಾಳಯದ 3ನೇ ಸಿಎಂ ಬಾಂಬ್‌ಗೆ ಬಿಜೆಪಿ ಪತರುಗುಟ್ಟಿತಾ ಎಂಬೆಲ್ಲ ಪ್ರಶ್ನೆಗಳು ಇದೀಗ ಉದ್ಭವವಾಗಿದೆ. ಮಂಗಳವಾರ ಮಾಡಿದ ಟ್ವೀಟ್‌ಗೆ ಬುಧವಾರ ಸಂಜೆ ಉತ್ತರಿಸಿದೆ ಬಿಜೆಪಿ. ಒಂದು ಟ್ವೀಟ್‌ಗೆ ರಿಪ್ಲೈ ಮಾಡೋದಕ್ಕೆ ಬಿಜೆಪಿಗೆ ಇಡೀ ದಿನ ಬೇಕಾಯಿತಾ?. ಬಿಜೆಪಿಯ ಈ ವಿಳಂಬದ ನಡೆಯಿಂದ ಕಾಂಗ್ರೆಸ್‌ ಮತ್ತಷ್ಟು ಲಾಭ ಮಾಡಿಕೊಂಡಿದೆ. ಕಾಂಗ್ರೆಸ್‌ ಟ್ವೀಟ್‌ನಿಂದಾದ ಗೊಂದಲ ಪರಿಹಾರಕ್ಕೆ ಬಿಜೆಪಿ ಭಾರೀ ಹರಸಾಸಹವನ್ನೇ ಪಟ್ಟಿದೆ.

ಕಾಂಗ್ರೆಸ್‌ಗೆ ಟಕ್ಕರ್! ದಾವಣಗೆರೆಯಲ್ಲಿ ಬೃಹತ್ ಸಮಾವೇಶಕ್ಕೆ ಮುಂದಾದ ಬಿಜೆಪಿ!