ಸರ್ಕಾರದ ವಿವಾದಾತ್ಮಕ ನಿಲುವು : ಲೋಕಸಭಾ ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ಆಸ್ತ್ರ ಕೊಟ್ಟಿತಾ ಕಾಂಗ್ರೆಸ್..?

Jan 5, 2024, 11:07 AM IST

ಇತ್ತೀಚೆಗೆ ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಪ್ರತಿಪಕ್ಷಗಳೀಗೆ ಆಹಾರವಾಗುತ್ತಿದೆ. ಲೋಕಸಭಾ(Loksabha) ಚುನಾವಣೆ ಹೊತ್ತಲ್ಲಿ ಇದು ಬಿಜೆಪಿಗೆ(BJP) ಅಸ್ತ್ರವಾಗುತ್ತಿದೆ. ಅಲ್ಲದೇ ಹಿಂದು ಅಸ್ತ್ರ ಪ್ರಯೋಗಿಸಲು ಬಿಜೆಪಿಗೆ ಕಾಂಗ್ರೆಸ್‌(Congress) ಅನುಕೂಲ ಮಾಡಿಕೊಟ್ಟಂತಾಗಿದೆ. ಕಳೆದ 15 ದಿನಗಳ ಅವಧಿಯಲ್ಲಿ ಪ್ರತಿಪಕ್ಷಗಳ ಕೆಂಗಣ್ಣಿಗೆ ರಾಜ್ಯ ಸರ್ಕಾರ ಗುರಿಯಾಗಿದೆ. ವಿವಾದಾತ್ಮಕ ನಿಲುವುಗಳ ಮೂಲಕ ಬಿಜೆಪಿಯ ಆಕ್ರೋಶಕ್ಕೆ ಕಾಂಗ್ರೆಸ್‌ ಕಾರಣವಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದು  ಪ್ರತಿಪಕ್ಷ ಬಿಜೆಪಿ ಬೀದಿಗಿಳಿದಿದೆ. ಇತ್ತೀಚೆಗೆ ಸಿಎಂ ಹಿಜಾಬ್ ನಿಷೇಧ ವಾಪಸ್ ಪಡೆಯುವೆ ಎಂದಿದ್ದರು. ಅದರ ಬೆನ್ನಲ್ಲೇ ಈಗ ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ:  ಸಿದ್ದರಾಮಯ್ಯ ಸಿಎಂ ಆಗಿ ಮುಂದವರಿಯಬೇಕಾದರೆ.., ಜನರಲ್ಲಿ ಪುತ್ರ ಯತೀಂದ್ರ ಮಹತ್ವದ ಮನವಿ!