ಕರ್ನಾಟಕ ಬಿಜೆಪಿ ಯಾವತ್ತೂ ಹೈಕಮಾಂಡ್‌ಗೆ ಬಿಸಿ ತುಪ್ಪ, ರಾಜ್ಯ ನಾಯಕರಿಗೆ ಮೊಸರಿನಲ್ಲಿ ಕಲ್ಲು!

ಕರ್ನಾಟಕ ಬಿಜೆಪಿ ಯಾವತ್ತೂ ಹೈಕಮಾಂಡ್‌ಗೆ ಬಿಸಿ ತುಪ್ಪ, ರಾಜ್ಯ ನಾಯಕರಿಗೆ ಮೊಸರಿನಲ್ಲಿ ಕಲ್ಲು!

Published : Dec 02, 2024, 11:42 PM IST

ಕರ್ನಾಟಕದ ಬಿಜೆಪಿ ಬಂಡಾಯ ಶಮನ ಯಾರಿಗೂ ಬೇಡವಾಗಿದೆ.  ರಾಜ್ಯ ನಾಯಕರು ಬಡಿದಾಡುತ್ತಿದ್ದರೆ, ಗುಂಪಿಗೆ ಸೇರದವರು ಗೋಲ್ ಸಿಡಿಸಲು ಸಜ್ಜಾಗಿ ನಿಂತಿದ್ದಾರೆ. ಅತ್ತ ಹೈಕಮಾಂಡ್ ನಮ್ಮ ತಲೆನೋವಿನ ನಡುವೆ ನಿಮ್ಮದೇನು ಅಂತಿದ್ದಾರೆ
 

ದೇಶದ ಇತರ ರಾಜ್ಯದ ಬಿಜೆಪಿ ಘಟಕಗಳು ಒಂದು ಗೆರೆ ದಾಟಿದರೂ ಹೈಕಮಾಂಡ್ ಮುಗುದಾರ ಹಾಕಿ ನಿಲ್ಲಿಸುತ್ತದೆ.  ಆದರೆ ಕರ್ನಾಟಕ ಬಿಜೆಪಿ ಹಾಗಲ್ಲ. ಹೈಕಮಾಂಡ್ ಎಷ್ಟೇ ಗಟ್ಟಿಯಾಗಿದ್ದರೂ ರಾಜ್ಯ ಬಿಜೆಪಿ ನಾಯಕರನ್ನು ಹಿಡಿದಿಡುವುದು ಕಷ್ಟ. ಕಳೆದ ಹಲವು ವರ್ಷಗಳಿಂದ ರಾಜ್ಯ ಬಿಜೆಪಿಯಲ್ಲಿ ಬಂಡಾಯ, ಬಡಿದಾಟ, ಪಕ್ಷ ಬಿಟ್ಟು ಹೊಸ ಪಕ್ಷ ಕಟ್ಟುವುದು ಸೇರಿದಂತೆ ಹಲವು ಚಟುವಟಿಕೆಗಳು ನಡೆದಿದೆ. ಪ್ರತಿ ಬಾರಿ ಹೈಕಮಾಂಡ್ ಮೂಕಪ್ರೇಕ್ಷರಾಗಿದೆ. ಇದೀಗ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ತಂಡ ಸಿಡೆದೆದ್ದಿದೆ. ರಾಜ್ಯದ ನಾಯಕರು ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಎರಡುಬಣಗಳು ಬಡಿದಾಡುತ್ತಿದೆ. ಬಣದಲ್ಲಿ ಗುರುತಿಸಿಕೊಳ್ಳದ ನಾಯಕರು ಹೈಕಮಾಂಡ್‌ನಿಂದ ಹೆಚ್ಚುವರಿ ಜವಾಬ್ದಾರಿ ಸೂಚನೆ ಬರಲಿ ಎಂದು ಕಾಯುತ್ತಿದ್ದಾರೆ. ಇತ್ತ ಹೈಕಮಾಂಡ್ ನಮ್ಮದೇ ಸಾವಿರ ತಲೆನೋವು, ಇದರ ನಡುವೆ ಅಧಿಕಾರನೂ ಇಲ್ಲ, ಉಪಚುನಾವಣೆಯಲ್ಲೂ ಗೆಲುವಿಲ್ಲದ ಕರ್ನಾಟಕದ ಬಂಡಾಯಕ್ಕೆ ತಲೆ ಹಾಕಲು ಮನಸ್ಸು ಮಾಡುತ್ತಿಲ್ಲ. ಇದರ ನಡುವೆ ಯತ್ನಾಳ್‌ಗೆ ನೋಟಿಸ್ ಬಂದಿದೆ. 
 

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more