ಕೋಲಾರ ಮನೆ ಹುಡುಕಾಟದಲ್ಲಿ ಸಿದ್ದು, ಟಗರು ಬಲೆಗೆ ಬೀಳಿಸಲು ಬಿಜೆಪಿ ಸಜ್ಜು!

Jan 20, 2023, 11:11 PM IST

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಘೋಷಣೆ ಮಾಡಿದ ಬೆನ್ನಲ್ಲೇ ಹೈ ಪ್ರೊಫೈಲ್ ಕ್ಷೇತ್ರವಾಗಿದೆ. ಕೋಲಾರದಲ್ಲಿ ಸಿದ್ದರಾಮಯ್ಯಗೆ ಬೆಂಬಲಿಗರು ಮನೆ ಹುಡುಕಾಟ ಆರಂಭಿಸಿದ್ದಾರೆ. ಇತ್ತ ಬಿಜೆಪಿ ಸಿದ್ದರಾಮಯ್ಯಗೆ ಸೋಲುಣಿಸಲು ಅತೀ ದೊಡ್ಡ ಪ್ಲಾನ್ ರೆಡಿ ಮಾಡಿದೆ. ಬಿಜೆಪಿ ಸಂಘಟನಾ ಚತುರ ಬಿಎಲ್ ಸಂತೋಷ್ ಕೋಲಾರಕ್ಕೆ ಎಂಟ್ರಿಕೊಟ್ಟಿದ್ದಾರೆ.ಕೋಲಾರದಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.  ಇತ್ತ ಪಕ್ಷಾಂತರ ನಾಯಕರನ್ನು ವೇಶ್ಯೆಯರಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಬಳಿಕ ಕ್ಷಮೆ ಕೇಳಿದ್ದರು. ಆದರೆ ಇಂದು ಉಲ್ಟಾ ಹೊಡೆದಿದ್ದಾರೆ. ನಾನು ವೇಶ್ಯೆ ಪದ ಹೇಳೇ ಇಲ್ಲ. ಈ ಶಬ್ದ ನಾನು ಮಾತನಾಡಿದ್ದರೆ ವಿಧಾನಪರಿಷತ್ತಿನ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ. ಬಿಕೆ ಹರಿಪ್ರಸಾದ್ ಭಾಷಣ, ಬಳಿಕ ಮೊಂಡುವಾದ ಇಲ್ಲಿದೆ ನೋಡಿ.