ಆರೋಪ ಸುಳ್ಳೆಂದು ಸಾಬೀತುಪಡಿಸಿ ಎನ್ನಬೇಕಿತ್ತು, ಮೋದಿ ಆರೋಪ ನಿರ್ಲಕ್ಷಿಸಿ ಅಂದ್ರೆ ಹೇಗೆ? ಸಿದ್ದು ಪ್ರಶ್ನೆ

Nov 12, 2021, 10:16 PM IST

ಬೆಂಗಳೂರು, (ನ.12): ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಬಿಟ್​ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಆರೋಪ ಪ್ರತ್ಯಾರೋಗಳು ಸಹ ಜೋರಾಗಿವೆ. ಒಬ್ಬರಿಗೊಬ್ಬರು ಕೆಸರೆರಚಾಟದಲ್ಲಿ ನಿರತರಾಗಿದ್ದಾರೆ.

Bitcoin Scam: ಮೋದಿ ಮುಂದೆ ಸಿಎಂ ಯಾಕೆ ಬಿಟ್ ಕಾಯಿನ್ ಪ್ರಸ್ತಾಪಿಸಿದ್ರು? ಡಿಕೆಶಿ ಪ್ರಶ್ನೆ

ಇದರ ಮುಂದುವರೆದ ಭಾಗವಾಗಿ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ನಡೆಸಿ ಸಿಎಂ ಬೊಮ್ಮಾಯಿಗೆ ಐದು ಪ್ರಶ್ನೆಗಳನ್ನ ಕೇಳಿದ್ದಾರೆ. ಮತ್ತೊಂದೆಡೆ ಬಿಜೆಪಿ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದಾರೆ.