ಜನ್​​ಧನ್​ ಖಾತೆಗಳಿಂದ ಹಣ ಕದ್ದಿದ್ದಾನೆ, ಅವನಿಗೆ ಬೇಲ್ ಕೊಡಿಸಿದ್ಯಾರು? ಎಚ್‌ಡಿಕೆ ಸ್ಫೋಟಕ ಹೇಳಿಕೆ

Nov 11, 2021, 6:32 PM IST

ಬೆಂಗಳೂರು, (ನ.11): ಬಿಟ್​​ಕಾಯಿನ್​​ ಹಗರಣ (Bitcoin Scam) ಸಂಬಂಧ ರಾಜ್ಯ ರಾಜಕಾರಣಿಗಳ ಆರೋಪ-ಪ್ರತ್ಯಾರೋಪ ಮುಂದುವರೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಹ್ಯಾಕರ್​ ಶ್ರೀಕಿ (Hacker Sriki) ಬಿಡುಗಡೆ ಸಂಬಂಧ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. 

'2 ಪಕ್ಷಗಳ ಕೆಸರೆರಚಾಟದಿಂದ ಬಿಟ್ ಕಾಯಿನ್ ಹಗರಣದ ಸತ್ಯಾಂಶ ಹೊರ ಬರಲ್ಲ'

ಬಿಟ್ ಕಾಯಿನ್  ಆರೋಪಿಗೆ ಜಾಮೀನು  (Bail) ಕೊಡಿಸಿದವರು ಯಾರು? ಜಾಮೀನು ಕೊಡಲು ವಾದ ಮಂಡಿಸಿದ್ಯಾರು? ಜಾಮೀನಿಗೆ ಯಾರು ಶ್ಯೂರಿಟಿ ಕೊಟ್ಟರು? ಕೆಲವು ಹೆಸರುಗಳು ಕೇಳಿ ಬರುತ್ತಿವೆ. ದೊಡ್ಡ ಮಟ್ಟದ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.