ಕರ್ನಾಟಕ ರಾಜಕೀಯದಲ್ಲಿ 'ಜೋಡೆತ್ತು' ಹೊಯ್ತು ಜೋಡಿ ಹುಲಿ ಬಂತು...!

Nov 22, 2020, 10:54 PM IST

ಬಳ್ಳಾರಿ, (ನ.22): ಮಂಡ್ಯ ಚುನಾವಣಾ ಪ್ರಚಾರದ ವೇಳೆ ನಟ ದರ್ಶನ್ ತಮ್ಮ ಹಾಗೂ ಯಶ್ ಜೋಡಿಗೆ 'ಜೋಡೆತ್ತು' ಎಂಬ ಹೆಸರು ನೀಡಿದ್ದರು. ಬಳಿಕ ಆ ಪದ ಸಿಕ್ಕಾಪಟ್ಟೆ ಫೇಮಸ್ ಆಗಿ ಹೋಯ್ತು. ಯಾವ ಮಟ್ಟಿಗೆ ಅಂದರೆ, ಈಗ ಆ ಹೆಸರಿನಲ್ಲಿ ಸಿನಿಮಾ ಮಾಡುವ ತಯಾರಿ ಕೂಡ ನಡೆಯುತ್ತಿದೆ.

ಹೊಸ ಬಾಂಬ್ ಸಿಡಿಸಿದ ಡಿಕೆಶಿ, ಅನಿಲ್ ಲಾಡ್: ರಾಜ್ಯ ರಾಜಕಾರಣದಲ್ಲಿ ಸಂಚಲನ

ಇದೀಗ ಕರ್ನಾಟಕ ರಾಜಕೀಯದಲ್ಲಿ 'ಜೋಡೆತ್ತು' ಬದಲಾಗಿ ಜೋಡಿ ಹುಲಿಗಳು ಎನ್ನುವುದು ಶುರುವಾಗಿದೆ. ಕಾಂಗ್ರೆಸ್ ನಾಯಕರೊಬ್ಬರು ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜೋಡೆತ್ತು ಅಲ್ಲ ಜೋಡಿ ಹುಲಿಗಳು ಎಂದು ಹೇಳಿದ್ದಾರೆ.