DK Suresh Vs Ashwath Narayan : ಸಿಎಂ ಮುಂದೆ ಸಂಸದ-ಸಚಿವರ ಫೈಟ್, ಹಿಂದಿನ ರಾಜಕೀಯ ಲೆಕ್ಕಾಚಾರವೇನು.?

DK Suresh Vs Ashwath Narayan : ಸಿಎಂ ಮುಂದೆ ಸಂಸದ-ಸಚಿವರ ಫೈಟ್, ಹಿಂದಿನ ರಾಜಕೀಯ ಲೆಕ್ಕಾಚಾರವೇನು.?

Suvarna News   | Asianet News
Published : Jan 04, 2022, 01:45 PM ISTUpdated : Jan 04, 2022, 01:53 PM IST

ಸಿಎಂ ಬಸ​ವ​ರಾಜ ಬೊಮ್ಮಾಯಿ (Basavaraj bommai) ಎದು​ರ​ಲ್ಲಿಯೇ ಉನ್ನತ ಶಿಕ್ಷಣ ಸಚಿವ ಡಾ.ಸಿ.​ಎನ್‌. ಅ​ಶ್ವತ್ಥ ನಾರಾ​ಯಣ (Ashwath Narayan) ಹಾಗೂ ಸಂಸದ ಡಿ.ಕೆ.​ಸು​ರೇಶ್‌ (DK Suresh) ರವರು ಪರಸ್ಪರ ಸವಾಲು ಹಾಕಿ​ಕೊಂಡು ಕೈ ಕೈ ಮಿಲಾ​ಯಿ​ಸಲು ಮುಂದಾದ ಪ್ರಸಂಗ  ನಡೆ​ಯಿತು. 

ಬೆಂಗಳೂರು (ಜ. 04): ಸಿಎಂ ಬಸ​ವ​ರಾಜ ಬೊಮ್ಮಾಯಿ (Basavaraj bommai) ಎದು​ರ​ಲ್ಲಿಯೇ ಉನ್ನತ ಶಿಕ್ಷಣ ಸಚಿವ ಡಾ.ಸಿ.​ಎನ್‌. ಅ​ಶ್ವತ್ಥ ನಾರಾ​ಯಣ (Ashwath Narayan) ಹಾಗೂ ಸಂಸದ ಡಿ.ಕೆ.​ಸು​ರೇಶ್‌ (DK Suresh) ರವರು ಪರಸ್ಪರ ಸವಾಲು ಹಾಕಿ​ಕೊಂಡು ಕೈ ಕೈ ಮಿಲಾ​ಯಿ​ಸಲು ಮುಂದಾದ ಪ್ರಸಂಗ  ನಡೆ​ಯಿತು. 

ರಾಮನಗ​ರದ (Ramanagara) ಜಿಲ್ಲಾ ಕಚೇ​ರಿ​ಗಳ ಸಂಕೀ​ರ್ಣದ ಆವ​ರ​ಣ​ದಲ್ಲಿ ಸಂವಿ​ಧಾನ ಶಿಲ್ಪಿ ಅಂಬೇ​ಡ್ಕರ್‌ BR Ambedkar) ಮತ್ತು ನಾಡ​ಪ್ರಭು ಕೆಂಪೇ​ಗೌ​ಡರ (Kempegowda) ಪ್ರತಿ​ಮೆ​ಗಳ ಅನಾ​ವ​ರಣ ಹಾಗೂ ವಿವಿಧ ಕಾಮ​ಗಾ​ರಿ​ಗಳ ಚಾಲನೆ ನೀಡುವ ವೇಳೆ ಸಿಎಂ ಎದು​ರಿ​ಗೆಯೇ ಅಶ್ವತ್ಥ ನಾರಾ​ಯಣ ಮತ್ತು ಡಿ.ಕೆ.​ಸು​ರೇಶ್‌ ಬೈಗುಳಕ್ಕೆ ಮುಂದಾ​ಗಿ​ದ್ದ​ರಿಂದ ಗೊಂದಲದ ಗೂಡಾಯಿತು.

ಪ್ರತಿ​ಮೆ​ಗಳ ಅನಾ​ವ​ರಣ ಹಾಗೂ ವಿವಿಧ ಕಾಮ​ಗಾ​ರಿ​ಗಳ ಶಂಕು​ಸ್ಥಾ​ಪನೆ ಸಮಾ​ರಂಭ ಕುರಿತು ಜಿಲ್ಲಾ​ಡ​ಳಿತ ಜನ​ಪ್ರ​ತಿ​ನಿ​ಧಿ​ಗಳ ಪೂರ್ವಭಾವಿ ಸಭೆ ನಡೆ​ಸಿ​ರ​ಲಿಲ್ಲ. ಅಲ್ಲದೆ, ಸಂಸದ ಡಿ.ಕೆ.​ಸು​ರೇಶ್‌, ವಿಧಾನ ಪರಿ​ಷತ್‌ ಸದಸ್ಯ ಎಸ್‌.ರವಿ ಸೇರಿ​ದಂತೆ ಜನ​ಪ್ರ​ತಿ​ನಿ​ಧಿ​ಗ​ಳ ಮನೆ ಬಾಗಿ​ಲಿಗೆ ಆಹ್ವಾನ ಪತ್ರಿಕೆ ತಲು​ಪಿ​ಸಿತ್ತು. ಇನ್ನು ಆಹ್ವಾನ ನೀಡ​ದ ಕಾರಣ ದಲಿತಪರ ಸಂಘ​ಟ​ನೆ​ಗಳ ಮುಖಂಡ​ರು ಪ್ರತಿ​ಭ​ಟ​ನೆಯ ಎಚ್ಚ​ರಿಕೆ ನೀಡಿ​ದ್ದ​ರು. ಇದನ್ನು ಜಿ​ಲ್ಲಾ​ಡ​ಳಿತ ಹಾಗೂ ಪೊಲೀಸ್‌ ಇಲಾಖೆ ಲಘು​ವಾಗಿ ಪರಿ​ಗ​ಣಿ​ಸಿದ್ದೆ ಘಟ​ನೆಗೆ ಕಾರ​ಣ​ವಾ​ಯಿತು. ಇದು ಮೇಲ್ನೋಟಕ್ಕೆ ಅ ಕ್ಷಣದಲ್ಲಿ ನಡೆದ ಘಟನೆ ಅನಿಸಿದರೂ, ಇದರ ಹಿಂದೆ ರಾಜಕೀಯ ಲೆಕ್ಕಾಚಾರಗಳಿವೆ. ಏನದು...? ಇಲ್ಲಿದೆ ರಿಪೋರ್ಟ್


 

23:00‘ರಾಮ’ರಣವ್ಯೂಹ ಛಿದ್ರಗೊಳಿಸಿದ ‘ಶಿವ’ ನಿಗೂಢತೆಯಲ್ಲಿಯೇ ಅಂತ್ಯಗೊಂಡ ಪ್ರಹಸನ; ಟ್ರಬಲ್ ಹಂಟಿಂ
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
23:52ಪದಗ್ರಹಣಕ್ಕೂ ಮುನ್ನ ಮೂರು ಹೆಜ್ಜೆ, 3 ಸಂದೇಶ; ಡಿಕೆ ಮಾಸ್ಟರ್ ಪ್ಲಾನ್‌ ರಹಸ್ಯವೇನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
44:07ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ ನೀಡಿದ್ದೇಕೆ? ನಿತಿನ್​ ನಬಿನ್ ಮನವೊಲಿಕೆಗೆ ಒಪ್ಪಲಿಲ್ಲ ಯಾಕೆ?
26:58ಬ್ರ್ಯಾಂಡ್ ಬಂಡೆ ಡಿಕೆ: ಖಾದರ್ ಲುಕ್‌ನಿಂದ Yezdi ಬೈಕ್‌ವರೆಗೆ ಡಿಕೆ ಶಿವಕುಮಾರ್ ಸ್ಟೈಲ್ ಸ್ಟೋರಿ
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
39:58ಜಮೀರ್ ಖಾನ್‌ಗೆ 'ಕೈ' ಕೊಟ್ಟ ಆಡಿಯೋ; ಇತ್ತ ಸಿದ್ದರಾಮಯ್ಯ ಆಪ್ತನಿಗೆ ಕೊಟ್ರು ಮಹತ್ವದ ಸಂದೇಶ
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
Read more