DK Suresh Vs Ashwath Narayan : ಸಿಎಂ ಮುಂದೆ ಸಂಸದ-ಸಚಿವರ ಫೈಟ್, ಹಿಂದಿನ ರಾಜಕೀಯ ಲೆಕ್ಕಾಚಾರವೇನು.?

DK Suresh Vs Ashwath Narayan : ಸಿಎಂ ಮುಂದೆ ಸಂಸದ-ಸಚಿವರ ಫೈಟ್, ಹಿಂದಿನ ರಾಜಕೀಯ ಲೆಕ್ಕಾಚಾರವೇನು.?

Suvarna News   | Asianet News
Published : Jan 04, 2022, 01:45 PM ISTUpdated : Jan 04, 2022, 01:53 PM IST

ಸಿಎಂ ಬಸ​ವ​ರಾಜ ಬೊಮ್ಮಾಯಿ (Basavaraj bommai) ಎದು​ರ​ಲ್ಲಿಯೇ ಉನ್ನತ ಶಿಕ್ಷಣ ಸಚಿವ ಡಾ.ಸಿ.​ಎನ್‌. ಅ​ಶ್ವತ್ಥ ನಾರಾ​ಯಣ (Ashwath Narayan) ಹಾಗೂ ಸಂಸದ ಡಿ.ಕೆ.​ಸು​ರೇಶ್‌ (DK Suresh) ರವರು ಪರಸ್ಪರ ಸವಾಲು ಹಾಕಿ​ಕೊಂಡು ಕೈ ಕೈ ಮಿಲಾ​ಯಿ​ಸಲು ಮುಂದಾದ ಪ್ರಸಂಗ  ನಡೆ​ಯಿತು. 

ಬೆಂಗಳೂರು (ಜ. 04): ಸಿಎಂ ಬಸ​ವ​ರಾಜ ಬೊಮ್ಮಾಯಿ (Basavaraj bommai) ಎದು​ರ​ಲ್ಲಿಯೇ ಉನ್ನತ ಶಿಕ್ಷಣ ಸಚಿವ ಡಾ.ಸಿ.​ಎನ್‌. ಅ​ಶ್ವತ್ಥ ನಾರಾ​ಯಣ (Ashwath Narayan) ಹಾಗೂ ಸಂಸದ ಡಿ.ಕೆ.​ಸು​ರೇಶ್‌ (DK Suresh) ರವರು ಪರಸ್ಪರ ಸವಾಲು ಹಾಕಿ​ಕೊಂಡು ಕೈ ಕೈ ಮಿಲಾ​ಯಿ​ಸಲು ಮುಂದಾದ ಪ್ರಸಂಗ  ನಡೆ​ಯಿತು. 

ರಾಮನಗ​ರದ (Ramanagara) ಜಿಲ್ಲಾ ಕಚೇ​ರಿ​ಗಳ ಸಂಕೀ​ರ್ಣದ ಆವ​ರ​ಣ​ದಲ್ಲಿ ಸಂವಿ​ಧಾನ ಶಿಲ್ಪಿ ಅಂಬೇ​ಡ್ಕರ್‌ BR Ambedkar) ಮತ್ತು ನಾಡ​ಪ್ರಭು ಕೆಂಪೇ​ಗೌ​ಡರ (Kempegowda) ಪ್ರತಿ​ಮೆ​ಗಳ ಅನಾ​ವ​ರಣ ಹಾಗೂ ವಿವಿಧ ಕಾಮ​ಗಾ​ರಿ​ಗಳ ಚಾಲನೆ ನೀಡುವ ವೇಳೆ ಸಿಎಂ ಎದು​ರಿ​ಗೆಯೇ ಅಶ್ವತ್ಥ ನಾರಾ​ಯಣ ಮತ್ತು ಡಿ.ಕೆ.​ಸು​ರೇಶ್‌ ಬೈಗುಳಕ್ಕೆ ಮುಂದಾ​ಗಿ​ದ್ದ​ರಿಂದ ಗೊಂದಲದ ಗೂಡಾಯಿತು.

ಪ್ರತಿ​ಮೆ​ಗಳ ಅನಾ​ವ​ರಣ ಹಾಗೂ ವಿವಿಧ ಕಾಮ​ಗಾ​ರಿ​ಗಳ ಶಂಕು​ಸ್ಥಾ​ಪನೆ ಸಮಾ​ರಂಭ ಕುರಿತು ಜಿಲ್ಲಾ​ಡ​ಳಿತ ಜನ​ಪ್ರ​ತಿ​ನಿ​ಧಿ​ಗಳ ಪೂರ್ವಭಾವಿ ಸಭೆ ನಡೆ​ಸಿ​ರ​ಲಿಲ್ಲ. ಅಲ್ಲದೆ, ಸಂಸದ ಡಿ.ಕೆ.​ಸು​ರೇಶ್‌, ವಿಧಾನ ಪರಿ​ಷತ್‌ ಸದಸ್ಯ ಎಸ್‌.ರವಿ ಸೇರಿ​ದಂತೆ ಜನ​ಪ್ರ​ತಿ​ನಿ​ಧಿ​ಗ​ಳ ಮನೆ ಬಾಗಿ​ಲಿಗೆ ಆಹ್ವಾನ ಪತ್ರಿಕೆ ತಲು​ಪಿ​ಸಿತ್ತು. ಇನ್ನು ಆಹ್ವಾನ ನೀಡ​ದ ಕಾರಣ ದಲಿತಪರ ಸಂಘ​ಟ​ನೆ​ಗಳ ಮುಖಂಡ​ರು ಪ್ರತಿ​ಭ​ಟ​ನೆಯ ಎಚ್ಚ​ರಿಕೆ ನೀಡಿ​ದ್ದ​ರು. ಇದನ್ನು ಜಿ​ಲ್ಲಾ​ಡ​ಳಿತ ಹಾಗೂ ಪೊಲೀಸ್‌ ಇಲಾಖೆ ಲಘು​ವಾಗಿ ಪರಿ​ಗ​ಣಿ​ಸಿದ್ದೆ ಘಟ​ನೆಗೆ ಕಾರ​ಣ​ವಾ​ಯಿತು. ಇದು ಮೇಲ್ನೋಟಕ್ಕೆ ಅ ಕ್ಷಣದಲ್ಲಿ ನಡೆದ ಘಟನೆ ಅನಿಸಿದರೂ, ಇದರ ಹಿಂದೆ ರಾಜಕೀಯ ಲೆಕ್ಕಾಚಾರಗಳಿವೆ. ಏನದು...? ಇಲ್ಲಿದೆ ರಿಪೋರ್ಟ್


 

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
22:55Karnataka Politics: ಉಭಯ ಸಂಕಟದಲ್ಲಿ ಸಿಲುಕಿದ ಕಾಂಗ್ರೆಸ್ ಹೈಕಮಾಂಡ್! ಹೇಗಿವೆ ಸಿದ್ದು-ಡಿಕೆ ಪಟ್ಟುಗಳು?
Read more