ನಾಮಪತ್ರ ಸಲ್ಲಿಸಿ ಕಣ್ಣೀರಿಟ್ಟ ಅರುಣಾ ಲಕ್ಷ್ಮೀ, ಸಮಾಧಾನಪಡಿಸಿದ ಪುತ್ರಿ ಬ್ರಾಹ್ಮಣಿ ರೆಡ್ಡಿ

ನಾಮಪತ್ರ ಸಲ್ಲಿಸಿ ಕಣ್ಣೀರಿಟ್ಟ ಅರುಣಾ ಲಕ್ಷ್ಮೀ, ಸಮಾಧಾನಪಡಿಸಿದ ಪುತ್ರಿ ಬ್ರಾಹ್ಮಣಿ ರೆಡ್ಡಿ

Published : Apr 17, 2023, 05:40 PM IST

ಬಳ್ಳಾರಿ ನಗರದಲ್ಲಿ ಕೆಆರ್‌ಪಿಪಿ ಅಭ್ಯರ್ಥಿಯಾಗಿ ಲಕ್ಷ್ಮೀ ಅರುಣಾ ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಲಕ್ಷ್ಮೀ ಅರುಣಾ ಅವರನ್ನು ಪುತ್ರಿ ಬ್ರಾಹ್ಮಣಿ ರೆಡ್ಡಿ ಸಮಾಧಾನಗೊಳಿಸಿದರು.

ಬಳ್ಳಾರಿ (ಏ.17): ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಅಭ್ಯರ್ಥಿಯಾಗಿ ಲಕ್ಷ್ಮೀ ಅರುಣಾ ನಾಮಪತ್ರ ಸಲ್ಲಿಕೆ ಮಾಡಿದರು. ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಲಕ್ಷ್ಮೀ ಅರುಣಾ ಅವರನ್ನು ಪುತ್ರಿ ಬ್ರಾಹ್ಮಣಿ ರೆಡ್ಡಿ ಸಮಾಧಾನಗೊಳಿಸಿದರು.

ನಂತರ ಮಾತನಾಡಿದ ಅವರು, ಇವತ್ತು ಜನಾರ್ದನ ರೆಡ್ಡಿಯವರ ಅನುಪಸ್ಥಿತಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿರುವೆ. ರೆಡ್ಡಿಯವರು ಬಳ್ಳಾರಿಯಲ್ಲಿ ಇಲ್ಲದಿರುವುದು ದುಃಖ ತಂದಿದೆ. ಸಾವಿರಾರು ಕಾರ್ಯಕರ್ತರು ಇಂದು ನಮ್ಮೊಂದಿಗೆ ಬಂದಿದ್ದಾರೆ. ನಾಮಪತ್ರ ಸಲ್ಲಿಕೆಗೆ ಪತಿ ಜನಾರ್ದನ ರೆಡ್ಡಿ ಬರಬೇಕು ಅನ್ನೋ ಆಸೆಯಿತ್ತು. ರೆಡ್ಡಿಯವರು 12 ವರ್ಷದಿಂದ ಬಳ್ಳಾರಿಯಿಂದ ದೂರವಿದ್ದಾರೆ. ರೆಡ್ಡಿಯವರು ಅಧಿಕಾರದಲ್ಲಿ ಇದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಅರ್ಧಕ್ಕೆ ನಿಂತಿವೆ. ಅರ್ಧಕ್ಕೆ ನಿಂತ ಅಭಿವೃದ್ಧಿ ಕಾರ್ಯ ಗಳನ್ನ ಪೂರ್ಣಗೊಳಿಸಲು ನನಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.

ಬಿಜೆಪಿ ಪ್ರತಿಸ್ಪರ್ಧಿ ಕೆಆರ್‌ಪಿಪಿ ಅಲ್ಲ. ಬಿಜೆಪಿ ಪ್ರತಿಸ್ಪರ್ಧಿ ಕಾಂಗ್ರೆಸ್ ಅನ್ನೋ ಶಾಸಕ ಸೋಮಶೇಖರರೆಡ್ಡಿ ಹೇಳಿಕೆಗೆ ಲಕ್ಷ್ಮೀ ಅರುಣಾ ತಿರುಗೇಟು ನೀಡಿದ ಅವರು, ಉತ್ತರ ಕೊಡುವ ಸಮಯ ಹತ್ತಿರದಲ್ಲಿ ಇದೆ. ಉತ್ತರ ಕೊಡ್ತೇವೆ. ನಮ್ಮ ಪಕ್ಷದಲ್ಲಿ ಎಲ್ಲ ಕಾರ್ಯಕರ್ತರು ಕೂಡ ಒಬ್ಬೊಬ್ಬ ಲೀಡರ್ ಅಗಿದ್ದಾರೆ. ಅವರಿಗೆ ಶ್ರೀಘ್ರದಲ್ಲೆ ಉತ್ತರ ಕೊಡುವ ಕಾಲ ಬರುತ್ತದೆ ಎಂದು ಹೇಳಿದರು.

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more