ಸಿದ್ದು ವಿರುದ್ಧ ಗುಡುಗಿದ ಅನಂತ್ ಕುಮಾರ್ ಹೆಗಡೆ: 7ನೇ ಬಾರಿ ಸಂಸತ್ತು ಪ್ರವೇಶಿಸ್ತಾರಾ ಹಿಂದೂ ಹುಲಿ..?

ಸಿದ್ದು ವಿರುದ್ಧ ಗುಡುಗಿದ ಅನಂತ್ ಕುಮಾರ್ ಹೆಗಡೆ: 7ನೇ ಬಾರಿ ಸಂಸತ್ತು ಪ್ರವೇಶಿಸ್ತಾರಾ ಹಿಂದೂ ಹುಲಿ..?

Published : Dec 26, 2023, 03:08 PM IST

ಹೈಕಮಾಂಡ್‌ನಿಂದ ಅಂತರ ಕಾಯ್ದುಕೊಂಡಿದ್ದ ಹೆಗಡೆ..!
ಚುನಾವಣಾ ರಾಜಕೀಯದಿಂದ ದೂರವಾಗಿದ್ದ ಸಂಸದ..!
ತನ್ನ ಕ್ಷೇತ್ರದ ಮೋದಿ ಸಮಾವೇಶಕ್ಕೇ ಗೈರಾಗಿದ್ದ ಎಂಪಿ..!
 

ಲೋಕಸಭಾ ಚುನಾವಣೆ 2024ರಲ್ಲಿ ನಡೆಯಲಿದೆ. ಮುಹೂರ್ತವಿನ್ನೂ ಫಿಕ್ಸ್ ಆಗದೇ ಇದ್ರೂ ಕೂಡ ಯಾರು ತಮ್ಮ ತಮ್ಮ ಕ್ಷೇತ್ರದಿಂದ ಎಂಪಿ ಸ್ಥಾನಕ್ಕೆ ನಿಲ್ಲಬಹುದು ಅನ್ನೋ ಚರ್ಚೆಗಳು ಈಗಾಗಲೇ ಶುರುವಾಗಿದೆ. ಈ ಚರ್ಚೆ ಉತ್ತರಕನ್ನಡ(Uttara kannada) ಜಿಲ್ಲೆಗೂ ಹೊರತಾಗಿಲ್ಲ. ಅನೇಕ ಆಕಾಂಕ್ಷಿಗಳನ್ನ ಹೊಂದಿರೋ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಹಿಂದೂ ಫೈರ್ ಬ್ರಾಂಡ್ ಅನಂತ್ ಕುಮಾರ್ ಹೆಗಡೆ(Ananth Kumar Hegde) ಹೆಸರೇ ಜೋರಾಗಿ ಕೇಳ್ತಾ ಇದೆ. ಸದ್ಯ ರಾಷ್ಟ್ರ ರಾಜಕಾರಣದಲ್ಲಿ ಲೋಕಸಭಾ ಚುನಾವಣೆಯ ಗಲಾಟೆ ಜೋರಾಗಿದೆ. ಮೂರನೇ ಬಾರಿ ಪ್ರಧಾನಿಯಾಗೋಕೆ ಮೋದಿ ಕಿ ಗ್ಯಾರಂಟಿ ಅನ್ನೋ ಉದ್ಘೋಷದ ಮೂಲಕ ಪ್ರಧಾನಿ ನರೇಂದ್ರ ಮೋದಿ(Narendra Modi) ಅಖಾಡಕ್ಕೆ ಇಳಿದಿದ್ದಾರೆ. ಇನ್ನೊಂದು ಕಡೆಯಲ್ಲಿ ಮೋದಿಯ ರಾಜಕೀಯ ಶತ್ರುಗಳು ತಮ್ಮದೇ ಒಂದು ಮಹಾಮೈತ್ರಿಯನ್ನ ಮಾಡಿಕೊಂಡು ಅದಕ್ಕೆ ಐ ಎನ್ ಡಿ ಐ ಎ ಎಂಬ ಹೆಸರನ್ನ ಕೊಟ್ಕೊಂಡು ಮೋದಿಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಯುದ್ಧ ತಾಲೀಮು ನಡೆಸ್ತಾ ಇದಾರೆ. ವಿಧಾನಸಭಾ ಚುನಾವಣೆ ಮುಗೀತು, ಅದಾದ ಮೇಲೆ  ಪಂಚರಾಜ್ಯ ಎಲೆಕ್ಷನ್ ರಿಸಲ್ಟ್ ಬಂದಾಯ್ತು. ಈಗ ಶುರುವಾಗಿರೋದೇ 2024ರ ಲೋಕಸಭಾ ಚುನಾವಣೆಯ ಕುತೂಹಲಗಳು. ಮೋದಿ ಮತ್ತೆ ಪ್ರಧಾನಿ ಆಗ್ತಾರಾ ಅಥವಾ ದೇಶದ ಜನ ಬದಲಾವಣೆ ಬಯಸಿ ಬೇರೆ ಪಕ್ಷದ ಬೇರೆ ನಾಯಕನಿಗೆ ಹುದ್ದೆ ನೀಡ್ತಾರಾ ಅನ್ನೋ ಚರ್ಚೆ ಕಾವೇರೋದಕ್ಕೂ ಮುನ್ನ ಹೊಸ ಮಾತು ಕತೆ ಶುರುವಾಗಿದೆ. ಅದೇ ನಮ್ಮ ಜಿಲ್ಲೆಯಿಂದ ಸಂಸದ ಸ್ಥಾನಕ್ಕೆ ಅಭ್ಯರ್ಥಿ ಯಾರಾಗಬಹುದು ಅನ್ನೋದು. ಇದು ಎಲ್ಲಾ ಕಡೆಗಳಲ್ಲಿ ಕಂಡು ಬರ್ತಾ ಇರೋ ಕಾಮನ್ ಡಿಬೇಟ್.  ಅವರು ಆಗಬಬಹುದು, ಇವರು ಈ ಪಕ್ಷದಿಂದ ನಿಲ್ಲಬಹುದು ಹೀಗೇ ಜನರ ಮಾತುಕಥೆ ಶುರುವಾಗಿದೆ. ಇದರ ಮಧ್ಯ ಉತ್ತರ ಕನ್ನಡ ಜಿಲ್ಲೆಯಿಂದ ಬ್ರೇಕಿಂಗ್ ನ್ಯೂಸ್ ಬರ್ತಾ ಇದೆ. ಅದೇ ಆರು ಬಾರಿ ಸಂಸದರಾಗಿ ಆಯ್ಕೆ ಆಗಿರುವ, ಚುನಾವಣಾ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡಿರುವ, ಕಟ್ಟರ್ ಹಿಂದುತ್ವವಾದಿ, ಅನಂತ್ ಕುಮಾರ್ ಹೆಗಡೆ ಅವರು ಲೋಕಸಭೆಗೆ ನಿಲ್ತಾರಾ ಅನ್ನೋದು.

ಇದನ್ನೂ ವೀಕ್ಷಿಸಿ:  ಕಾಶ್ಮೀರದಲ್ಲಿ ಶುರವಾಗಿದೆಯಾ ಮುಸ್ಲಿಂ VS ಮುಸ್ಲಿಂ ಸಂಘರ್ಷ..? ಕಣಿವೆ ರಾಜ್ಯದಲ್ಲಿ ಏನಾಗುತ್ತಿದೆ..?

21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:00‘ರಾಮ’ರಣವ್ಯೂಹ ಛಿದ್ರಗೊಳಿಸಿದ ‘ಶಿವ’ ನಿಗೂಢತೆಯಲ್ಲಿಯೇ ಅಂತ್ಯಗೊಂಡ ಪ್ರಹಸನ; ಟ್ರಬಲ್ ಹಂಟಿಂ
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
23:52ಪದಗ್ರಹಣಕ್ಕೂ ಮುನ್ನ ಮೂರು ಹೆಜ್ಜೆ, 3 ಸಂದೇಶ; ಡಿಕೆ ಮಾಸ್ಟರ್ ಪ್ಲಾನ್‌ ರಹಸ್ಯವೇನು?
Read more