ಡಿಕೆ ಸಹೋದರರಿಗೆ ಕಾದಿದ್ಯಾ "ಕಮಲದಳ" ಮೈತ್ರಿ ತೂಫಾನ್ ಶಾಕ್..?

ಡಿಕೆ ಸಹೋದರರಿಗೆ ಕಾದಿದ್ಯಾ "ಕಮಲದಳ" ಮೈತ್ರಿ ತೂಫಾನ್ ಶಾಕ್..?

Published : Sep 12, 2023, 02:23 PM IST

ಮಂಡ್ಯ ರಣಕ್ಷೇತ್ರ..ರಾಮನಗರ ಕುರುಕ್ಷೇತ್ರ..ದೋಸ್ತಿ-ಕುಸ್ತಿ..!
ಬೇಟೆಗಾರ ಬಿಜೆಪಿ..ಟಾರ್ಗೆಟ್ ಡಿಕೆ..!ಸುಮಲತಾ ಕಥೆ ಏನು..?
“ಕಮಲದಳ” ಮೈತ್ರಿಗೆ ಉರುಳುತ್ತಾ ಕಾಂಗ್ರೆಸ್‌ ಭದ್ರಕೋಟೆ..?

ರಾಜಕಾರಣ ಅಂದ್ರೇನೇ ಹಾಗೆ.. ಅದೊಂಥರಾ ರಹಸ್ಯಗಳ ಕೋಟೆ. ಅಲ್ಲಿ ಯಾವಾಗ ಏನಾಗುತ್ತೋ, ಯಾರು ಯಾರ ಜೊತೆ ಕೈ ಜೋಡಿಸ್ತಾರೋ ಅನ್ನೋದೇ ಗೊತ್ತಾಗಲ್ಲ. ಇಲ್ಲಿ ಆಜನ್ಮ ವೈರಿಗಳು ಒಂದಾಗ್ತಾರೆ, ಒಂದಾಗಿದ್ದವರು ಆಜನ್ಮ ಶತ್ರುಗಳಾಗ್ತಾರೆ. ಅದೇ ರಾಜಕೀಯ. ಲೋಕಸಭಾ(Loksabha) ಚುನಾವಣೆ ಹತ್ತಿರ ಬರ್ತಾ ಇದ್ದಂತೆ ರಾಜ್ಯದಲ್ಲಿ ಕಾಂಗ್ರೆಸ್‌ನನ್ನು(Congress) ಬಗ್ಗು ಬಡಿಯಲು ಬಿಜೆಪಿ(BJP) ಮತ್ತು ಜೆಡಿಎಸ್ (JDS) ಒಂದಾಗೋ ಲಕ್ಷಣ ಕಾಣಿಸ್ತಾ ಇದೆ. ಕೂಡಿ ಕಳೆಯೋ ಆಟದಲ್ಲೀಗ ನಿಜವಾದ ಸವಾಲು ಎದುರಾಗಿರೋದು ಕನಕಪುರ ಬಂಡೆ ಡಿಕೆ ಶಿವಕುಮಾರ್ ಅವ್ರಿಗೆ. ಡಿಕೆಶಿ ಅವ್ರನ್ನು ರಾಜ್ಯ ರಾಜಕಾರಣದಲ್ಲಿ ರಣಬೇಟೆಗಾರ ಅಂತ ಕರೀತಾರೆ. ಅದನ್ನು ಡಿಕೆ ಸಾಹೇಬ ಕಳೆದ ವಿಧಾನಸಭಾ ಚುನಾವಣೆಯಲ್ಲಿ(Assembly election) ಪ್ರೂವ್ ಮಾಡಿ ಬಿಟ್ಟಿದ್ದಾರೆ. ಆದ್ರೀಗ ಇಂಥಾ ಬೇಟೆಗಾರನನ್ನೇ ಬೇಟೆಯಾಡೋ ರಣಬೇಟೆಗಾರನ ರೂಪದಲ್ಲಿ ನುಗ್ಗಿ ಬಂದಿದೆ ಮೈತ್ರಿ ತೂಫಾನ್. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡ್ಕೊಂಡು  ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸಲಿವೆಯಂತೆ. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನನ್ನು ಮಕಾಡೆ ಮಲಗಿಸಿ ಬಿಟ್ಟಿರೋ ಕನಕಪುರ ಬಂಡೆ ಡಿಕೆ ಶಿವಕುಮಾರ್ ಅವರ ಮುಂದಿನ ಟಾರ್ಗೆಟ್ ಲೋಕಸಭಾ ಚುನಾವಣೆ. ಈಗಾಗ್ಲೇ ಮಿಷನ್ 20 ಗುರಿಯೊಂದಿಗೆ ಲೋಕಯುದ್ಧಕ್ಕೆ ಬಂಡೆ ತಾಲೀಮು ಶುರುವಾಗಿದೆ. ಅದ್ರಲ್ಲೂ ಮುಖ್ಯವಾಗಿ ಡಿಕೆಶಿಯವ್ರು ಟಾರ್ಗೆಟ್ ಮಾಡಿರೋದು ಎರಡು ಅಖಾಡಗಳನ್ನ. ಒಂದು ಮಂಡ್ಯ, ಮತ್ತೊಂದು ಬೆಂಗಳೂರು ಗ್ರಾಮಾಂತರ. ಕಳೆದ ಚುನಾವಣೆಯಂದೀಚೆಗೆ ಕಾಂಗ್ರೆಸ್ ಭದ್ರಕೋಟೆಯಾಗಿ ಬದಲಾಗಿರೋ ಈ ಎರಡೂ ಕ್ಷೇತ್ರಗಳನ್ನು ಕೈವಶ ಮಾಡಿಕೊಳ್ಳಲು ಡಿಕೆಶಿ ಪ್ಲ್ಯಾನ್‌ ಮಾಡ್ತಿದ್ದಾರೆ. ಈ ಪೈಕಿ ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆಶಿ ಸಹೋದರ ಡಿಕೆ ಸುರೇಶ್ ಅವ್ರೇ ಹಾಲಿ ಸಂಸದ. ಇದ್ರ ಜೊತೆಗೆ ಮಂಡ್ಯವನ್ನೂ ಗೆದ್ದು ಒಕ್ಕಲಿಗರ ಕೋಟೆಯಲ್ಲಿ ಪ್ರಭಾವಿ ಹೆಚ್ಚಿಸಿಕೊಳ್ಳೋದು ಡಿಕೆ ಶಿವಕುಮಾರ್ ಅವರ ಮೆಗಾ ಪ್ಲಾನ್. 

ಇದನ್ನೂ ವೀಕ್ಷಿಸಿ:  ಒಂದು ದಿನದ ಸಮಸ್ಯೆ ಅಲ್ಲ, ಇವರದ್ದು ನಿತ್ಯ ನರಕ: 6 ವರ್ಷವಾದ್ರೂ ಉದ್ಘಾಟನೆಯಾಗದ ಶೌಚಾಲಯ

20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
Read more