ಡಿಕೆ ಸಹೋದರರಿಗೆ ಕಾದಿದ್ಯಾ "ಕಮಲದಳ" ಮೈತ್ರಿ ತೂಫಾನ್ ಶಾಕ್..?

ಡಿಕೆ ಸಹೋದರರಿಗೆ ಕಾದಿದ್ಯಾ "ಕಮಲದಳ" ಮೈತ್ರಿ ತೂಫಾನ್ ಶಾಕ್..?

Published : Sep 12, 2023, 02:23 PM IST

ಮಂಡ್ಯ ರಣಕ್ಷೇತ್ರ..ರಾಮನಗರ ಕುರುಕ್ಷೇತ್ರ..ದೋಸ್ತಿ-ಕುಸ್ತಿ..!
ಬೇಟೆಗಾರ ಬಿಜೆಪಿ..ಟಾರ್ಗೆಟ್ ಡಿಕೆ..!ಸುಮಲತಾ ಕಥೆ ಏನು..?
“ಕಮಲದಳ” ಮೈತ್ರಿಗೆ ಉರುಳುತ್ತಾ ಕಾಂಗ್ರೆಸ್‌ ಭದ್ರಕೋಟೆ..?

ರಾಜಕಾರಣ ಅಂದ್ರೇನೇ ಹಾಗೆ.. ಅದೊಂಥರಾ ರಹಸ್ಯಗಳ ಕೋಟೆ. ಅಲ್ಲಿ ಯಾವಾಗ ಏನಾಗುತ್ತೋ, ಯಾರು ಯಾರ ಜೊತೆ ಕೈ ಜೋಡಿಸ್ತಾರೋ ಅನ್ನೋದೇ ಗೊತ್ತಾಗಲ್ಲ. ಇಲ್ಲಿ ಆಜನ್ಮ ವೈರಿಗಳು ಒಂದಾಗ್ತಾರೆ, ಒಂದಾಗಿದ್ದವರು ಆಜನ್ಮ ಶತ್ರುಗಳಾಗ್ತಾರೆ. ಅದೇ ರಾಜಕೀಯ. ಲೋಕಸಭಾ(Loksabha) ಚುನಾವಣೆ ಹತ್ತಿರ ಬರ್ತಾ ಇದ್ದಂತೆ ರಾಜ್ಯದಲ್ಲಿ ಕಾಂಗ್ರೆಸ್‌ನನ್ನು(Congress) ಬಗ್ಗು ಬಡಿಯಲು ಬಿಜೆಪಿ(BJP) ಮತ್ತು ಜೆಡಿಎಸ್ (JDS) ಒಂದಾಗೋ ಲಕ್ಷಣ ಕಾಣಿಸ್ತಾ ಇದೆ. ಕೂಡಿ ಕಳೆಯೋ ಆಟದಲ್ಲೀಗ ನಿಜವಾದ ಸವಾಲು ಎದುರಾಗಿರೋದು ಕನಕಪುರ ಬಂಡೆ ಡಿಕೆ ಶಿವಕುಮಾರ್ ಅವ್ರಿಗೆ. ಡಿಕೆಶಿ ಅವ್ರನ್ನು ರಾಜ್ಯ ರಾಜಕಾರಣದಲ್ಲಿ ರಣಬೇಟೆಗಾರ ಅಂತ ಕರೀತಾರೆ. ಅದನ್ನು ಡಿಕೆ ಸಾಹೇಬ ಕಳೆದ ವಿಧಾನಸಭಾ ಚುನಾವಣೆಯಲ್ಲಿ(Assembly election) ಪ್ರೂವ್ ಮಾಡಿ ಬಿಟ್ಟಿದ್ದಾರೆ. ಆದ್ರೀಗ ಇಂಥಾ ಬೇಟೆಗಾರನನ್ನೇ ಬೇಟೆಯಾಡೋ ರಣಬೇಟೆಗಾರನ ರೂಪದಲ್ಲಿ ನುಗ್ಗಿ ಬಂದಿದೆ ಮೈತ್ರಿ ತೂಫಾನ್. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡ್ಕೊಂಡು  ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸಲಿವೆಯಂತೆ. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನನ್ನು ಮಕಾಡೆ ಮಲಗಿಸಿ ಬಿಟ್ಟಿರೋ ಕನಕಪುರ ಬಂಡೆ ಡಿಕೆ ಶಿವಕುಮಾರ್ ಅವರ ಮುಂದಿನ ಟಾರ್ಗೆಟ್ ಲೋಕಸಭಾ ಚುನಾವಣೆ. ಈಗಾಗ್ಲೇ ಮಿಷನ್ 20 ಗುರಿಯೊಂದಿಗೆ ಲೋಕಯುದ್ಧಕ್ಕೆ ಬಂಡೆ ತಾಲೀಮು ಶುರುವಾಗಿದೆ. ಅದ್ರಲ್ಲೂ ಮುಖ್ಯವಾಗಿ ಡಿಕೆಶಿಯವ್ರು ಟಾರ್ಗೆಟ್ ಮಾಡಿರೋದು ಎರಡು ಅಖಾಡಗಳನ್ನ. ಒಂದು ಮಂಡ್ಯ, ಮತ್ತೊಂದು ಬೆಂಗಳೂರು ಗ್ರಾಮಾಂತರ. ಕಳೆದ ಚುನಾವಣೆಯಂದೀಚೆಗೆ ಕಾಂಗ್ರೆಸ್ ಭದ್ರಕೋಟೆಯಾಗಿ ಬದಲಾಗಿರೋ ಈ ಎರಡೂ ಕ್ಷೇತ್ರಗಳನ್ನು ಕೈವಶ ಮಾಡಿಕೊಳ್ಳಲು ಡಿಕೆಶಿ ಪ್ಲ್ಯಾನ್‌ ಮಾಡ್ತಿದ್ದಾರೆ. ಈ ಪೈಕಿ ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆಶಿ ಸಹೋದರ ಡಿಕೆ ಸುರೇಶ್ ಅವ್ರೇ ಹಾಲಿ ಸಂಸದ. ಇದ್ರ ಜೊತೆಗೆ ಮಂಡ್ಯವನ್ನೂ ಗೆದ್ದು ಒಕ್ಕಲಿಗರ ಕೋಟೆಯಲ್ಲಿ ಪ್ರಭಾವಿ ಹೆಚ್ಚಿಸಿಕೊಳ್ಳೋದು ಡಿಕೆ ಶಿವಕುಮಾರ್ ಅವರ ಮೆಗಾ ಪ್ಲಾನ್. 

ಇದನ್ನೂ ವೀಕ್ಷಿಸಿ:  ಒಂದು ದಿನದ ಸಮಸ್ಯೆ ಅಲ್ಲ, ಇವರದ್ದು ನಿತ್ಯ ನರಕ: 6 ವರ್ಷವಾದ್ರೂ ಉದ್ಘಾಟನೆಯಾಗದ ಶೌಚಾಲಯ

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
Read more