ಉಪರಾಷ್ಟ್ರಪತಿ ರೇಸ್​ನಲ್ಲಿದೆ ಅಚ್ಚರಿಯ ಹೆಸರು: ಏನು ಗೊತ್ತಾ ಧನ್​​ಕರ್ ದಿಢೀರ್ ರಾಜೀನಾಮೆ ರಹಸ್ಯ?

ಉಪರಾಷ್ಟ್ರಪತಿ ರೇಸ್​ನಲ್ಲಿದೆ ಅಚ್ಚರಿಯ ಹೆಸರು: ಏನು ಗೊತ್ತಾ ಧನ್​​ಕರ್ ದಿಢೀರ್ ರಾಜೀನಾಮೆ ರಹಸ್ಯ?

Published : Jul 25, 2025, 12:54 PM IST

ಉಪರಾಷ್ಟ್ರಪತಿಗಳ ರಾಜೀನಾಮೆ, ರಾಷ್ಟ್ರ ರಾಜಕಾರಣದಲ್ಲಿ ಬಿಗ್ ಟ್ವಿಸ್ಟ್ ಕೊಡೋ ಸಾಧ್ಯತೆ, ನಿಚ್ಚಳವಾಗಿ ಎದ್ದು ಕಾಣ್ತಾ ಇದೆ.

ರಾಜಕೀಯ ಅಖಾಡದಲ್ಲಿ ಏನೇನೋ ನಡೀತಾ ಇರುತ್ತೆ. ಕೆಲವೊಮ್ಮೆ ಸದ್ದಿಲ್ಲದೆ ಅದೆಷ್ಟೋ ನಾಟಕೀಯ ತಿರುವುಗಳು ಸೃಷ್ಟಿಯಾಗುತ್ತೆ.. ಈಗಲೂ ಅಂಥದ್ದೇ ಒಂದು ರಾಜಕೀಯ ವಿಚಿತ್ರ ಘಟಿಸಿದೆ. ಉಪರಾಷ್ಟ್ರಪತಿಗಳ ರಾಜೀನಾಮೆ, ರಾಷ್ಟ್ರ ರಾಜಕಾರಣದಲ್ಲಿ ಬಿಗ್ ಟ್ವಿಸ್ಟ್ ಕೊಡೋ ಸಾಧ್ಯತೆ, ನಿಚ್ಚಳವಾಗಿ ಎದ್ದು ಕಾಣ್ತಾ ಇದೆ. ಇಂಥಾ ಇನ್ನೂ ಹತ್ತಾರು ಅನುಮಾನಗಳು ಹಾಗೇ ಉಳಿದುಕೊಂಡಿವೆ.. ಅವಕ್ಕೆ ಉತ್ತರ ಕೊಡ್ಬೇಕಿರೋದು ಜಗದೀಪ್ ಧನ್​ಕರ್. ಆದ್ರೆ ಅವರು ಸದ್ಯಕ್ಕೆ ಉತ್ತರ ಕೊಡೋ ಸಾಧ್ಯಯಂತೂ ಇಲ್ಲ.. ಹಾಗಾಗಿನೇ, ಅನುಮಾನಗಳ ಪಟ್ಟಿ ಬೆಳೀತಲೇ ಹೋಗುತ್ತೆ.

ಧನ್​ಕರ್ ಅವರ ರಾಜೀನಾಮೆ ಬೆನ್ನಲ್ಲೇ ಒಂದಷ್ಟು ವಿಚಿತ್ರ ಲೆಕ್ಕಾಚಾರಗಳು ಎದ್ದು ಕಾಣ್ತಾ ಇದಾವೆ.. ರಾಜಕೀಯವಾಗಿ ನೋಡೋದಾದ್ರೆ, ಯಾವೊಂದು ಸಾಧ್ಯತೆಯನ್ನೂ ಕೂಡ ತಳ್ಳಿಹಾಕೋಕೆ ಸಾಧ್ಯವಿಲ್ಲ. ಹಾಗಂತ ಅವನ್ನ ನಂಬೋದೂ ಕೂಡ, ಸುಲಭವಿಲ್ಲ. ಅದ್ಯಾಕೆ ಗೊತ್ತಾ? ಬಿಜೆಪಿ ಉಪ ರಾಷ್ಟ್ರಪತಿ ಹುದ್ದೆಗೆ, ಅಂಥಾ ಒಬ್ಬ ವ್ಯಕ್ತಿಯ ಹೆಸರನ್ನ ಹೇಳಬಹುದು ಅನ್ನೋ ಕಲ್ಪನೆಯೇ ವಿಚಿತ್ರ ಅಂತನ್ಸುತ್ತೆ. ಆದ್ರೆ ಈ ವಿಚಿತ್ರ ಘಟಿಸತ್ತೋ, ಅಥವಾ ಬರೀ ಮಾತಾಗಿ ಉಳಿಯುತ್ತೋ ಗೊತ್ತಿಲ್ಲ. ಸದ್ಯಕ್ಕಂತೂ ರಾಷ್ಟ್ರದ ಉಪ ರಾಷ್ಟ್ರಪತಿಗಳ ಸ್ಥಾನ ಖಾಲಿಯಾಗಿದೆ.. ಅದನ್ನ ಆದಷ್ಟು ಬೇಗ ಭರ್ತಿ ಮಾಡ್ಬೇಕು ಅನ್ನೋ ನಿಯಮವೂ ಇದೆ.

ಆದ್ರೆ ಇಂತಿಷ್ಟು ದಿನದಲ್ಲೇ ಆಗ್ಬೇಕು ಅನ್ನೋ ಕಟ್ಟುಪಾಡು ಇಲ್ಲ.. ಹಾಗಾಗಿನೇ, ಬಿಜೆಪಿಗೆ ಯೋಚೊಸೋಕೆ ಟೈಮ್ ಸಿಕ್ಕಿದೆ ಅಂದ್ಕೊಬೋದು. ಬಟ್, ಇದರ ಮಧ್ಯೆಯೇ ಆ ಒಬ್ಬರ ಹೆಸರು, ಉಪರಾಷ್ಟ್ರಪತಿ ರೇಸಲ್ಲಿ ಸದ್ದು ಮಾಡ್ತಾ ಇದೆ. ಆ ಅಚ್ಚರಿಯ ಹೆಸರು ಯಾರದ್ದು ಗೊತ್ತಾ? ಅಂದ ಹಾಗೆ, ಇವೆಲ್ಲವೂ ಕೇವಲ ಊಹಾಪೋಹಗಳು. ಯಾಕಂದ್ರೆ, ಎನ್ಡಿಎ ಅಥವಾ ವಿರೋಧ ಪಕ್ಷ  ಧನ್​ಕರ್ ಅವರ ಉತ್ತರಾಧಿಕಾರಿಯಾಗಿ ಯಾರನ್ನ ಪ್ರಸ್ತಾಪಿಸುತ್ತದೆ ಅನ್ನೋದರ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಈಗ ಪ್ರಶ್ನೆ ಇಷ್ಟೇ, ಈ ರೇಸ್ನಲ್ಲಿ ಯಾರು ಗೆಲ್ತಾರೆ? ರಾಜಕೀಯದ ಹೊಸ ತಿರುವಿನಲ್ಲಿ ಯಾರಿಗೆ ಯಾವ ಪಾತ್ರ ಸಿಗುತ್ತೆ ಅಂತ ಕಾದು ನೋಡಬೇಕು.

43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
Read more