2023 ನನ್ನ ಜೀವನದ ಕೊನೆಯ ಹೋರಾಟ: ಕುಮಾರಸ್ವಾಮಿ ಶಾಕಿಂಗ್ ಹೇಳಿಕೆ

Aug 24, 2021, 6:47 PM IST

ಹಾವೇರಿ, (ಆ.24): 2023 ನನ್ನ ಜೀವನದ ಕೊನೆಯ ಹೋರಾಟ.  2023 ಚುನಾವಣೆಯಲ್ಲಿ ನನಗೊಂದು ಅವಕಾಶ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಶಾಕಿಂಗ್ ಹೇಳಿಕೆ ಕೊಟ್ಟಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. 

ಬೆಂಗಳೂರಿನಿಂದ ಗದಗ ತನಕ ಕರೆಯಿಸಿ ಕುಮಾರಸ್ವಾಮಿಗೆ ಅವಮಾನ ಮಾಡಿದ್ರಾ?

ಹಾವೇರಿಯಲ್ಲಿ ಮಾತನಾಡಿದ ಎಚ್‌ಡಿ ಕುಮಾರಸ್ವಾಮಿ,  ನನ್ನ ಜೀವನದ ಕೊನೆಯ ಹೋರಾಟ. ನಿಮ್ಮ ಬದುಕು ಸರಿಪಡಿಸಲು ನನಗೊಂದು ಪೂರ್ಣ ಸರ್ಕಾರ ಕೊಡಿ. ನನ್ನನ್ನು ಸಿಎಂ ಮಾಡಿ ಎಂದು ನಾನು ಕೇಳಲ್ಲ  ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಹಾಗಾದ್ರೆ, 2023 ರಲ್ಲಿ ನಡೆಯುವ ಚುನಾವಣೆ ಕುಮಾರಸ್ವಾಮಿಗೆ ಕೊನೆ ಎಲೆಕ್ಷನ್ ಆಗುತ್ತಾ..? ಮುಂದೆ ಅವರು ಚುನಾವಣೆಗೆ ಸ್ಪರ್ಧೆ ಮಾಡೋಲ್ವಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.