ಸೋತವರನ್ನೂ ಮಂತ್ರಿ ಮಾಡ್ಬೇಕಂದ್ರೆ BSY ಮುಂದಿರವ 2 ಆಯ್ಕೆಗಳು

Dec 13, 2019, 9:07 PM IST

ಬೆಂಗಳೂರು, [ಡಿ.13]:: ಬೈ ಎಲೆಕ್ಷನ್‌ನಲ್ಲಿ ಬಿಜೆಪಿ 15ರ ಪೈಕಿ 12ರಲ್ಲಿ ಗೆದ್ದು ಬೀಗಿದೆ. ಆದ್ರೆ, ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಹಾಗೂ ಹುಣಸೂರಿನಲ್ಲಿ ಎಚ್.ವಿಶ್ವನಾಥ್‌ಗೆ ಸೋಲಾಗಿದೆ. ಇದು ಬಿಎಸ್‌ವೈಗೆ ಕೊಂಚ ಬೇಸರತರಿಸಿದೆ.

ಇಬ್ಬರ ತಲೆದಂಡ: ಸೋತ್ರೂ ಎಂಟಿಬಿ-ವಿಶ್ವನಾಥ್‌ಗೆ ಮಂತ್ರಿ ಭಾಗ್ಯ?

ಮೈತ್ರಿ ಸರ್ಕಾರದಿಂದ ಹೊರಬಂದು ಯಡಿಯೂರಪ್ಪ ಸಿಎಂ ಆಗಲು ಕಾರಣವಾಗಿರುವ ಈ ಇಬ್ಬರನ್ನೂ ಕೊಟ್ಟ ಮಾತಿನಂತೆ ಸಚಿವರನ್ನಾಗಿ ಮಾಡಲೇಕೆಂದು ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಆದ್ರೆ, ಕೇವಲ ಒಂದೇ ಒಂದು ವಿಧಾನಪರಿಷತ್ ಸ್ಥಾನ ಖಾಲಿ ಇದೆ. ಇದಕ್ಕೆ .ವಿಶ್ವನಾಥ್, ಎಂಟಿಬಿ, ಆರ್.ಶಂಕರ್. ಲಕ್ಷ್ಮಣ ಸವದಿ. ಹೋಗೆ ನಾಲ್ವರು ರೇಸ್ ನಲ್ಲಿದ್ದಾರೆ. ಉಪಚುನಾವಣೆಯಲ್ಲಿ ಸೋತವರಿಗೂ ಸಿಗುತ್ತಾ ಮಂತ್ರಿಗಿರಿ ಕೊಡ್ಬೇಕಂದ್ರೆ ಯಡಿಯೂರಪ್ಪನವರ ಮುಂದೆ ಎರಡೇ ಎರೆಡು.ಆಯ್ಕೆಗಳಿವೆ. ಅವುಗಳನ್ನು ವಿಡಿಯೋನಲ್ಲಿ ನೋಡಿ...