ಅಮೆರಿಕಾದ ಆಲ್ಬನಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ

ಅಮೆರಿಕಾದ ಆಲ್ಬನಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ

Published : Nov 17, 2019, 11:52 PM ISTUpdated : Nov 17, 2019, 11:57 PM IST

ಬೆಂಕಿ ಬಸಣ್ಣ
ನವೆಂಬರ್   2ರಂದು ಅಮೆರಿಕಾದ ನ್ಯೂಯಾರ್ಕ್ ರಾಜ್ಯದ  ಆಲ್ಬನಿಯಲ್ಲಿ ಕನ್ನಡ-ರಾಜ್ಯೋತ್ಸವವನ್ನು  ಅದ್ದೂರಿಯಿಂದ ಆಚರಿಸಲಾಯಿತು.  ಇಲ್ಲಿಯ ಕನ್ನಡ-ಕಲಿ ಶಾಲೆಯ ಪುಟಾಣಿ ಮಕ್ಕಳು, ಲತಾ ಮೇಡಂ ನಿರ್ದೇಶನದ  "ಕನ್ನಡ-ವೈಭವ"  ಎಂಬ ಕಾರ್ಯಕ್ರಮದಲ್ಲಿ  ನಮ್ಮ ನಾಡಿನ ಚರಿತ್ರೆಯನ್ನು ಶರಣರು, ಸಂತರು, ಕವಿಗಳು, ಮಹಾರಾಜರು, ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರು, ಕ್ರಿಕೆಟ್ ಆಟಗಾರರು, ವಿಜ್ಞಾನಿಗಳು, ಮುಂತಾದವವ ರೂಪದಲ್ಲಿ  ಪ್ರಸ್ತುತ ಪಡಿಸಿದರು.

ಬೆಂಕಿ ಬಸಣ್ಣ
ನವೆಂಬರ್   2ರಂದು ಅಮೆರಿಕಾದ ನ್ಯೂಯಾರ್ಕ್ ರಾಜ್ಯದ  ಆಲ್ಬನಿಯಲ್ಲಿ ಅದ್ದೂರಿಯಿಂದ ಆಚರಿಸಲಾಯಿತು.  ಇಲ್ಲಿಯ ಕನ್ನಡ-ಕಲಿ ಶಾಲೆಯ ಪುಟಾಣಿ ಮಕ್ಕಳು, ಲತಾ ಮೇಡಂ ನಿರ್ದೇಶನದ  "ಕನ್ನಡ-ವೈಭವ"  ಎಂಬ ಕಾರ್ಯಕ್ರಮದಲ್ಲಿ  ನಮ್ಮ ನಾಡಿನ ಚರಿತ್ರೆಯನ್ನು ಶರಣರು, ಸಂತರು, ಕವಿಗಳು, ಮಹಾರಾಜರು, ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರು, ಕ್ರಿಕೆಟ್ ಆಟಗಾರರು, ವಿಜ್ಞಾನಿಗಳು, ಮುಂತಾದವವ ರೂಪದಲ್ಲಿ  ಪ್ರಸ್ತುತ ಪಡಿಸಿದರು.

ಆಲ್ಬನಿ  ಕನ್ನಡ ಸಂಘದ ಅಧ್ಯಕ್ಷ ವಿಶ್ವಾಸ್ ಗೌಡ , ಕಾರ್ಯದರ್ಶಿ ಉಮಾ ಬೆಂಕಿ, ಖಜಾಂಚಿ ಸುನಿತಾ ವಿಜಯ್  ಕಾರ್ಯಕ್ರಮದ ಸಂಘಟನೆ ಜವಾಬ್ದಾರಿ ಹೊತ್ತುಕೊಂಡಿದ್ದರು. 40 ವರ್ಷಗಳಿಂದ ಆಲ್ಬನಿಯಲ್ಲಿ ನೆಲೆಸಿರುವ  ಜಯಾ ಮತ್ತು ಎಂ. ಆರ್. ಬಾಲಕೃಷ್ಣ ಮತ್ತು  ಮೈತಲಿ ಹಾಗೂ ಡಾ. ದಿವಾಕರ್  ದೀಪ ಬೆಳಗಿಸಿ ಉದ್ಘಾಟಿಸಿದರು.  ಶೀಲಾ ರಂಗರಾಜ್ ಮತ್ತು ಉಮಾ ಶ್ರೀನಿವಾಸ್ ಹಾಡಿದ ಪ್ರಾರ್ಥನೆಯೊಂದಿಗೆ  ಕಾರ್ಯಕ್ರಮ ಪ್ರಾರಂಭವಾಯಿತು.
 
 ಹಿನ್ನಲೆ ಗಾಯಕರಾದ ಒಹೈವೋ ರಾಜ್ಯದ  ರಾಮ ಪ್ರಸಾದ್, ನಾರ್ತ್ ಕ್ಯಾರೊಲಿನ ರಾಜ್ಯದ ರವಿ  ಗೂಟಿ ಮತ್ತು ಬೋಸ್ಟೋನ್ ನಗರದ ಅಕ್ಕಿ ಮಧು ಹೆಬ್ಬಾಳ , ಸೌಮ್ಯಶ್ರೀ , ಲಕ್ಷ್ಮಿ ರಮೇಶ್,  ರಾಮನಾಥ್ ,  ರಮೇಶ್ ಯಾಲಕ್ಕಿಶೆಟ್ಟರ್ , ಅನುಷಾ ಕುಲ್ಕರ್ಣಿ, ವರವಾಣಿ ದ್ವಾರಕಿ ಮುಂತಾದವರು,   "ರಾಜ್- ವೈಭವ" ಎಂಬ ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು.  ಪರ ಊರುಗಳಿಂದ ಬಂದ ಕಲಾವಿದರಿಗೆ  ಉಮಾ-ಬೆಂಕಿ ಬಸಣ್ಣ ಅವರ ಮನೆಯಲ್ಲಿ ಆತಿಥ್ಯ ಮತ್ತು ವಸತಿ ಒದಗಿಸಲಾಗಿತ್ತು.
 
ಲತಾ ಮತ್ತು ನಂದಕಿಶೋರ್, ತಾವೇ ಹಾದಿ,  ಕುಣಿದ  ರೋಮ್ಯಾಂಟಿಕ್ -ಜಾನಪದ -ನೃತ್ಯ ‘ಮಾತಾಡ್ -ಮಾತಾಡ್ ಮಲ್ಲಿಗೆ’  ರಸಿಕರ ಮೈ ಜುಂ ಎನ್ನಿಸಿತು.  ಪುಟಾಣಿಗಳಾದ ಜೀವಿಕ ಬೆಂಕಿ ಮತ್ತು ಸಹನಾ ರಾವ್  ಮಾಡಿದ ಪುರಂದರ ದಾಸರ ‘ತಂಬೂರಿ ಮೀಟಿದವ’  ನೃತ್ಯ ಎಲ್ಲರ ಮೆಚ್ಚುಗೆ ಗಳಿಸಿದವು . ಸಿಂಚನಾ , ಚೈತಾಲಿ  ಮತ್ತು ಅಲ್ಪಾ ಗೌಡ ತಮ್ಮ ಸುಮಧುರ ಗಾಯನದಿಂದ ಮನಸೂರೆಗೊಂಡರು . ಪ್ರಾಂತ್ಯದ 40+ ಕ್ರಿಕೆಟ್ ಟ್ರೋಫಿ ಗೆದ್ದ  ಅಲ್ಬನಿ  ಕನ್ನಡ ಸಂಘದ  ಕ್ರಿಕೆಟ್ ಆಟಗಾರರಾದ  ಕಿರಣ್, ರವಿ ಯಲಿಗಾರ, ಪ್ರವೀಣ್ ರಾವ್ ರನ್ನು ಬೆಂಕಿ ಬಸಣ್ಣ ಸನ್ಮಾನಿಸಿದರು.  

16:55ವಿದೇಶದಲ್ಲೂ ಮೊಳಗಿದ ಕನ್ನಡ ಡಿಂಡಿಮ, ರಾಜ್ಯೋತ್ಸವ ಸಂಭ್ರಮ
04:30ಪುನೀತ್‌ ರಾಜ್‌ಕುಮಾರ್‌ ಸ್ಪೆಷಲ್ ಫ್ಯಾನ್ ವಿಡಿಯೋ: ನೋಡಿದರೆ ಕಣ್ಣಂಚಲ್ಲಿ ನೀರು!
11:26ಇತಿಹಾಸದಲ್ಲೇ ಮೊದಲು;ವಿದೇಶದಲ್ಲಿರುವ 5 ಲಕ್ಷ ಭಾರತೀಯರ ಏರ್‌ಲಿಫ್ಟ್‌ಗೆ ತಯಾರಿ!
07:13ಲಾಕ್‌ಡೌನ್ ಸಂಕಷ್ಟದಲ್ಲಿರುವ UAE ಕನ್ನಡಿಗರಿಗೆ ಶಾಕ್!
02:42ದುಬೈನಲ್ಲಿ ಸಿಲುಕಿದ ಕನ್ನಡಿರಿಗೆ ತವರಿಗೆ ಮರಳಲು ಸರ್ಕಾರದ ನೆರವು, ನೋಂದಣಿ ಮಾಡಿ!
02:24ಬೆಚ್ಚಿಬಿದ್ದ ಭಾರತ; 3000ಕ್ಕೂ ಅಧಿಕ NRIಗಳಿಗೆ ಕೊರೋನಾ ಸೋಂಕು
02:25ಆಸ್ಟ್ರೇಲಿಯಾದಲ್ಲಿ ಸಿಲುಕಿದ 500 ಕನ್ನಡಿಗರು: ತವರಿಗೆ ವಾಪಸ್ ಆಗಲು ಪರದಾಟ
02:57ನಮ್ಮ ಸೇಫ್ಟಿಗೆ ಯಾರು ಭಯಪಡಬೇಕಿಲ್ಲ: ಅಮೆರಿಕಾದಿಂದ ಕರುನಾಡ ಕುವರನ ಮಾತು
03:52ಕತಾರ್ ಉತ್ತರ ಕರ್ನಾಟಕ ಬಳಗಕ್ಕೆ ವರ್ಷದ ಸಂಭ್ರಮ: ಅದ್ಧೂರಿ ಕಾರ್ಯಕ್ರಮ
13:42ಮೆಲ್ಬೋರ್ನ್‌ನಲ್ಲಿ ರಾಜ್ಯೋತ್ಸವ, ದಂಪತಿ ಸಮೇತ ಉಪ್ಪಿ ಡೈಲಾಗ್ ಅಬ್ಬರ