Rain in Bengaluru: ರಾಜ್ಯದ ಹಲವೆಡೆ ಮಳೆರಾಯನ ದರ್ಶನ: ಬಿಸಿಲಿನಿಂದ ‘ಬೆಂದ’ಕಾಳೂರಿಗೆ ಮಳೆ ಸಿಂಚನ!

Rain in Bengaluru: ರಾಜ್ಯದ ಹಲವೆಡೆ ಮಳೆರಾಯನ ದರ್ಶನ: ಬಿಸಿಲಿನಿಂದ ‘ಬೆಂದ’ಕಾಳೂರಿಗೆ ಮಳೆ ಸಿಂಚನ!

Published : May 04, 2024, 11:46 AM IST

ಕಳೆದ 6 ತಿಂಗಳಿನಿಂದ ಕರುನಾಡಿನ ಮೇಲೆ ಮುನಿಸಿಕೊಂಡಿದ್ದ ವರುಣಾ ಕೊನೆಗೂ ರಾಜ್ಯದ ಮೇಲೆ ಕರುಣೆ ತೋರಿದ್ದಾನೆ. ದಕ್ಷಿಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಿದೆ. ಆದ್ರೆ, ಒಮ್ಮೆಲೆ ಸುರಿದ ಮಳೆಯಿಂದಾಗಿ ಹಲವೆಡೆ ಸರಣಿ ಅವಾಂತರಗಳು ಸೃಷ್ಟಿಯಾಗಿವೆ.

ರಣ ಬಿಸಿಲಿನಿಂದ ಬೆಂದು ಬಸವಿಳಿದಿದ್ದ ಕರುನಾಡಿನ(Karnataka) ಮೇಲೆ ಕೊನೆಗೂ ಮಳೆರಾಯ ಕೃಪೆ ತೋರಿದ್ದಾನೆ. ರಾಜ್ಯದ ಹಲವೆಡೆ ಮೇಘರಾಜ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ವರುಣದೇವನ ಎಂಟ್ರಿಯಿಂದ ಸೆಕೆಯಿಂದ ಹಿಂಡು ಹಿಪ್ಪೆಯಾಗಿದ್ದ ಮಂದಿ ಖುಷ್ ಆಗಿದ್ರೆ, ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಮಳೆರಾಯ(Rain) ಅಬ್ಬರಿಸಿ ಬೊಬ್ಬರಿದಿದ್ದಾನೆ. ಬೆಂಗಳೂರಿನ(Bengaluru) ಗಲ್ಲಿಗಲ್ಲಿಯಲ್ಲೂ ಗಂಗೆ ಝೇಂಕರಿಸಿದ್ದಾಳೆ. ದಿಢೀರ್ ಮಳೆಗೆ ಕೆಲವಡೆ ಟ್ರಾಫಿಕ್ ಜಾಂ ಉಂಟಾಗಿ ಸವಾರರು ಪರದಾಡಿದ್ರು. ಬೆಂಗಳೂರಿನಲ್ಲಿ ಮಳೆಗೆ ಮೊದಲ ಬಲಿಯಾಗಿದೆ. ಹೊಸಕೋಟೆಯ ಗಣಗಲು ಗ್ರಾಮದಲ್ಲಿ ಸಿಡಿಲಿಗೆ ಮರದಡಿ ನಿಂತಿದ್ದ ರತ್ನಮ್ಮ ಎಂಬ ಮಹಿಳೆ ಮೃತಪಟ್ಟಿದ್ದಾಳೆ. ನೆಲಮಂಗಲದಲ್ಲಿ ಬಿರುಗಾಳಿ ಸಹಿತ ಮಳೆಗೆ ಪೆಟ್ಟಿಗೆ ಅಂಗಡಿ ಮೇಲೆ ಮರವೊಂದು ಉರುಳಿಬಿದ್ದಿತ್ತು. ಅದೃಷ್ಟವಶಾತ್ ಅಂಗಡಿಯಲ್ಲಿ ಯಾರು ಇಲ್ಲದ ಕಾರಣ ಪ್ರಾಣಹಾನಿ ತಪ್ಪಿತು. ಅರಮನೆನಗರಿ ಮೈಸೂರಲ್ಲಿ(Mysore) ಬಿರುಗಾಳಿ ಮಳೆಗೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿದ್ವು. ಕಾಳಿದಾಸ ರಸ್ತೆಯಲ್ಲಿ ಮರ ಬಿದ್ದು, ಹತ್ತಾರು ಕಾರುಗಳು ಜಖಂ ಆದ್ವು. ರಾಮನಗರದಲ್ಲಿ ಸಿಡಿಲು ಬಡಿತದಿಂದಾಗಿ ರಾಮನಗರದ ಪ್ರಸಿದ್ಧ ಜಾನಪದ ಲೋಕದಲ್ಲಿ ನಿರ್ಮಿಸಿದ್ದ ಗಿರಿಜನ ಶೆಡ್ ಬೆಂಕಿಗಾಹುತಿಯಾಗಿದೆ. ಜಾನಪದ ಕಲೆಯ ಆಟಿಕೆಗಳು ಸರ್ವನಾಶವಾಗಿದೆ.

ಇದನ್ನೂ ವೀಕ್ಷಿಸಿ:  Ilayaraja: ರಜನಿಯ 'ಕೂಲಿ'ಗೆ ಇಳಯರಾಜ ಕೃತಿಚೌರ್ಯ ನೋಟಿಸ್ ಕಳುಹಿಸಿದ್ದೇಕೆ..?

02:48ಶ್ರೀದೇವಿ ಮಗಳಿಗೆ 5 ಕೋಟಿಯ ಕಾರ್ ಗಿಫ್ಟ್ ಕೊಟ್ಟಿದ್ದು ಬಾಯ್‌ಫ್ರೆಂಡ್ ಅಲ್ಲ ಮತ್ಯಾರು?
15:48 ತಿಹಾರ್ ಜೈಲು ಕಂಬಿ ಹಿಂದೆ ಉಗ್ರ ತಹಾವೂರ್.. ಯಾರು next​ ಟಾರ್ಗೆಟ್​..?
22:51ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​! ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?
16:40ಕಣಿವೆ ನಾಡಿನ ಕಾಡುಗಳಲ್ಲಿ ಉಗ್ರಸರ್ಪಗಳ ರಣಬೇಟೆ: ಭಾರತ ಸೇನೆಯ ಆರ್ಭಟಕ್ಕೆ ಭಯೋತ್ಪಾದಕರಿಗೆ ಚಳಿಜ್ವರ!
22:52ಇಲ್ಲಿದೆ ನೋಡಿ ವೈರಲ್​ ಜಗತ್ತಿನಲ್ಲಿ ಸದ್ದು ಮಾಡ್ತಿರೋ ಸಖತ್​ ಸುದ್ದಿಗಳ ಗುಚ್ಛ ವೈರಲ್​ ನ್ಯೂಸ್!
22:24 2025ರಲ್ಲಿ ಏನೇನಾಗ್ತಿದೆ : ವರ್ಷದ ಆರಂಭದಲ್ಲೇ ಭೂಕಂಪ ಪ್ರಳಯ, ಭೀಕರ ಕಾಡ್ಗಿಚ್ಚು ಶೀತ ಬಿರುಗಾಳಿ
25:41 ಏಷ್ಯಾನೆಟ್‌ ಸುವರ್ಣನ್ಯೂಸ್‌ ನ್ಯೂಇಯರ್‌ ಸಂಭ್ರಮ, ಸುವರ್ಣಪಾರ್ಟಿಯಲ್ಲಿ ಗಿಲ್ಲಿ ಕಾಮಿಡಿ
08:03ಡಿಕೆಸು ಹೆಸರೇಳಿ ವಂಚನೆ: ಐಶ್ವರ್ಯ- ವನಿತಾ ನಡುವೆ ಆರೋಪ ಪ್ರತ್ಯಾರೋಪ
15:12ಮತ್ತೊಮ್ಮೆ ಪೊಲೀಸ್‌ ಸ್ಟೇಷನ್‌ಗೆ ಅಲ್ಲು ಅರ್ಜುನ್‌; ವಕೀಲರ ಸಮ್ಮುಖದಲ್ಲೇ ನಟನ ವಿಚಾರಣೆ
22:53 ನೋ ಡೌಟ್, ರಶ್ಮಿಕಾ ರಿಯಲ್ ಲೇಡಿ ಸೂಪರ್‌ಸ್ಟಾರ್: ಐರನ್‌ಲೆಗ್ ಅಲ್ಲ ಗೋಲ್ಡನ್‌ಫ್ಲ್ಯಾಗ್ ಶ್ರೀವಲ್ಲಿ ವಾರ್!