ಯಾದಗಿರಿ: ದಲಿತರಿಗೆ ಬಹಿಷ್ಕಾರ, DC-SP ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನ

Sep 19, 2019, 9:38 PM IST

ಯಾದಗಿರಿ, [ಸೆ.19]; ಅದೊಂದು ಕೆಟ್ಟ ಗಳಿಗೆ.. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆಯೇ  ನಡೆದುಹೋಗಿತ್ತು.. ಗಲಾಟೆ ನಡೆದ ನಂತ್ರ ಒಂದುಗುಂಪು ಇನ್ನೊಂದು ಗುಂಪನ್ನ ಬಹಿಷ್ಕಾರಿಸುವ ಹಂತಕ್ಕೆ ತಲುಪಿತ್ತು.. ಸದ್ಯ ಜಿಲ್ಲಾಧಿಕಾರಿಗಳ ಮಧ್ಯಸ್ಥಿತಿಯಲ್ಲಿ ಈ ಪ್ರಕರಣ ಸುಖಾಂತ್ಯ ಕಂಡಿದೆ. ಯಾದಗಿರಿ ತಾಲೂಕಿನ ಹೊರಗೇರಾ ಗ್ರಾಮದಲ್ಲಿ ಕಳೆದ ಕೆಲದಿಗಳಿಂದ ನಡೀತಿರೋ ಹೈಡ್ರಾಮಾ ಇದು..ಕ್ಷುಲ್ಲಕ ಕಾರಣಕ್ಕೆ ನಡೆದ ಕಿತ್ತಾಟ ಎರಡು ಸಮುದಾಯದ ಮಧ್ಯೆ ಬೆಂಕಿಹೊತ್ತಿ ನಿಗಿನಿಗಿ ಎನ್ನುವಂತೆ ಮಾಡಿತ್ತು.. ಅಣ್ತಮ್ಮಾ ಅಂತಾ ಓಡಾಡ್ತಿದ್ದ ಜನರು ಮುಖ ತಿರುಗಿಸುಂತೆ ಮಾಡಿತ್ತು.