ಅಮವಾಸ್ಯೆ ‌ದಿನ ಧಾರವಾಡದಲ್ಲಿ ಪವಾಡ: ಸಾಯಿಬಾಬಾ ಚಿತ್ರ ನೋಡಲು ಮುಗಿಬಿದ್ದ ಭಕ್ತರು!

Jan 24, 2020, 12:46 PM IST

ಧಾರವಾಡ(ಜ.24): ಪೇಡಾನಗರಿ ಧಾರವಾಡದಲ್ಲಿ ಅಮವಾಸ್ಯೆ ‌ದಿನ ಅಚ್ಚರಿಯ ಘಟನೆಯೊಂದು ನಡೆದಿದೆ. ಹೌದು, ಸತ್ಯಸಾಯಿಬಾಬಾ ದೇವಸ್ಥಾನದಲ್ಲಿ ಪವಾಡವೊಂದು ನಡೆದಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ನಗರದ ಸಪ್ತಾಪುರದಲ್ಲಿರುವ ಸತ್ಯ ಸಾಯಿಬಾಬಾ ದೇವಸ್ಥಾನದಲ್ಲಿನ ಭಾವಚಿತ್ರದಲ್ಲಿ ನೀರು ಹರಿದು ಬರುತ್ತಿದೆ. 

ಬಾಬಾರ ಬಾವಚಿತ್ರದಲ್ಲಿ ನೀರು ಬರುತ್ತಿರುವುದನ್ನು ನೋಡಲು ಭಕ್ತರು ತಂಡೋಪತಂಡವಾಗಿ ಆಗಿಸುತ್ತಿದ್ದಾರೆ. ನಗರದೆಲ್ಲೆಡೆ ಸುದ್ದಿ ಹರಡಿ ದೂರದ ಪ್ರದೇಶಗಳಿಂದ ಜನರು ಆಗಮಿಸಿ ಬಾಬಾನ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ. ಬಾಬಾ ಅವರ ಫೋಟೋದಿಂದ ಬರುತ್ತಿರುವ ನೀರಿಗೆ ಭಕ್ತರು ಅಮೃತವೇ ಬರುತ್ತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.