ಬರ ಪರಿಸ್ಥಿತಿಯಲ್ಲಿ ವಿಜಯಪುರ ರೈತರಿಗೆ ಮತ್ತೊಂದು ಬರೆ: ಡ್ಯಾಂನಿಂದ ಕೆನಾಲ್‌ಗೆ ಬಿಟ್ಟರು ಜಮೀನು ಸೇರದ ನೀರು..!

ಬರ ಪರಿಸ್ಥಿತಿಯಲ್ಲಿ ವಿಜಯಪುರ ರೈತರಿಗೆ ಮತ್ತೊಂದು ಬರೆ: ಡ್ಯಾಂನಿಂದ ಕೆನಾಲ್‌ಗೆ ಬಿಟ್ಟರು ಜಮೀನು ಸೇರದ ನೀರು..!

Published : Sep 07, 2023, 10:32 AM IST

ಅದ್ಯಾಕೋ ಗೊತ್ತಿಲ್ಲ, ಗುಮ್ಮಟನಗರಿಯ ರೈತರ ಹಣೆಬರಹವೇ ಸರಿ ಇದ್ದಂತೆ ಕಾಣ್ತಿಲ್ಲ. ಮಳೆ ಇಲ್ಲದೆ ಬೆಳೆದು ನಿಂತ ಬೆಳೆ ಒಣಗುತ್ತಿದೆ. ಹೀಗಾಗಿಯೇ ರೈತರಿಗೆ ಅನುಕೂಲವಾಗಲಿ ಎಂದು ಆಲಮಟ್ಟಿ ಡ್ಯಾಂ ನಿಂದ ಕೆನ್ಯಾಲ್‌ಗಳಿಗೆ ನೀರು ಹರಿಬಿಡಲಾಗಿದೆ. ಆದ್ರೆ ಡ್ಯಾಂನಿಂದ ಬಿಡಲಾಗಿರುವ ನೀರು ರೈತರ ಹೊಲಗಳಿಗೆ ತಲುಪುತ್ತಿಲ್ಲ. ಈ ನಡುವೆ ಕೆನಾಲ್‌ಗಳ ಕ್ಲೀನಿಂಗ್‌ನಲ್ಲಿ ಗೋಲ್ಮಾಲ್‌ ನಡೆದಿರೋ ಆರೋಪ ಗಟ್ಟಿಯಾಗಿ ಕೇಳಿ ಬರ್ತಿದೆ.

ದೇವರು ವರ ಕೊಟ್ರು ಪೂಜಾರಿ ವರ ಕೊಡಲಿಲ್ಲ ಅನ್ನೋ ಗಾದೆ ಗುಮ್ಮಟ ನಗರಿ ರೈತರಿಗೆ(Farmer) ಅನ್ವಯಿಸುವಂತಿದೆ. ಯಾಕಂದ್ರೆ ಸರಿಯಾಗಿ ಮಳೆಯಿಲ್ಲದೆ ಬರ ಪರಸ್ಥಿತಿ ಎದುರಿಸುತ್ತಿದ್ದ ವಿಜಯಪುರ(Vijayapura) ಜಿಲ್ಲೆಯ ರೈತರಿಗೆ ಆಲಮಟ್ಟಿ ಡ್ಯಾಂನಿಂದ(Allamatti Dam) ಕೃಷಿ ಉದ್ದೇಶಕ್ಕಾಗಿ ಕೆನಾಲ್‌ನಿಂದ ನೀರು ಬಿಡುಗಡೆ ಮಾಡಲಾಗಿದೆ. ಆದ್ರೆ ಡ್ಯಾಂನಿಂದ ಕಾಲುವೆಗೆ ನೀರು ಬಿಟ್ಟರು ರೈತರ ಜಮೀನುಗಳಿಗೆ ಸಮರ್ಪಕವಾಗಿ ಮುಟ್ಟುತ್ತಿಲ್ಲ. ಹಾಗಿದ್ದರೆ ಕಾಲುವೆಯಲ್ಲಿ ಬಿಟ್ಟ ನೀರು(Water) ಎಲ್ಲಿಗೆ ಹೋಗುತ್ತೆ ಎನ್ನುವ ಪ್ರಶ್ನೆ ಏಳುತ್ತೆ. ಅದಕ್ಕೆ ಉತ್ತರ ಕಾಲುವೆಯಲ್ಲಿ ಹೂಳು ತುಂಬಿಕೊಂಡಿದ್ದು. ಕೆನಾಲ್‌ ಸ್ವಚ್ಛಗೊಳಿಸದ ಕಾರಣ ಕೆಲವೆಡೆ ಹೂಳು ತುಂಬಿಕೊಂಡಿದೆ. ವಿಜಯಪುರದ ಕೋಲಾರ ತಾಲೂಕಿನ ರೋಣಿಹಾಳ ಗ್ರಾಮದ ರೈತರ ಜಮೀನಿಗೆ ಬಿಡುವ ಕಾಲುವೆಗಳು ಸಂಪೂರ್ಣ ಮುಚ್ಚಿ ಹೋಗಿವೆ. ಇದರಿಂದ ರೈತರ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಪ್ರತಿ ವರ್ಷ ಆಲಮಟ್ಟಿ ಡ್ಯಾಂ ಭರ್ತಿಯಾದ ಬಳಿಕ ಡ್ಯಾಂನಿಂದ ರೈತರ ಜಮೀನುಗಳಿಗೆ ಅನುಕೂಲವಾಗಲು ಕಾಲುವೆಗಳಿಗೆ ನೀರು ಬಿಡಲಾಗುತ್ತೆ. ಕಾಲುವೆಗಳು ಖಾಲಿ ಇರೋವಾಗ ಅಂದ್ರೆ ಬೇಸಿಗೆ ಸಮಯದಲ್ಲಿ ಕಾಲುವೆಗಳನ್ನ ಸರಿಯಾದ ರೀತಿಯಲ್ಲಿ ಕ್ಲೀನಿಂಗ್‌ ಮಾಡಿಕೊಳ್ಳಬೇಕಾಗಿತ್ತು. ಆದ್ರೆ, ಕಾಲುವೆ ಹೂಳೆತ್ತಲು ಅನುದಾನ ಬಿಡುಗಡೆಯಾದ್ರೂ, ಕೆಲಸ ಮಾಡದೇ  ಹಣ ಪಡೆದಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಆರೋಪಿಸಿದ್ದಾರೆ. 

ಇದನ್ನೂ ವೀಕ್ಷಿಸಿ:  ಅವನ ಕೊಲೆಯ ಹಿಂದಿತ್ತು ತ್ರಿಕೋನ ಪ್ರೇಮ ಕಹಾನಿ ! ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು ಡೆಡ್ಲಿ ಮರ್ಡರ್ !

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!