Asianet Suvarna News Asianet Suvarna News

ಅವನ ಕೊಲೆಯ ಹಿಂದಿತ್ತು ತ್ರಿಕೋನ ಪ್ರೇಮ ಕಹಾನಿ ! ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು ಡೆಡ್ಲಿ ಮರ್ಡರ್ !

ಕೊಂದವರಿಗೆ ಕೊಂದಿದ್ದೇಕೆ ಅನ್ನೋದೇ ಗೊತ್ತಿರಲಿಲ್ಲ!
ಅವನ ಹೆಣ ಹಾಕಿ ಫೋನ್ ಸ್ವಿಚ್ ಆಫ್ ಮಾಡಿದ್ರು..!
ಕಲ್ಲಲ್ಲಿ ಹೊಡೆದು ಅವನನ್ನ ಹಂತಕರು ಕೊಂದಿದ್ಯಾಕೆ ?

First Published Sep 7, 2023, 10:03 AM IST | Last Updated Sep 7, 2023, 10:03 AM IST

ಆತ ಕೂಲಿ ಕಾರ್ಮಿಕ.. ಚಿಕ್ಕ ವಯಸ್ಸಿಗೆ ಮದುವೆಯಾಗಿದ್ರೂ ಹೆಂಡತಿ ಈತನೊಂದಿಗೆ ಸಂಸಾರ ಮಾಡಿದ್ದು ಒಂದೇ ವರ್ಷ. ಆದ್ರೆ ಹೆಂಡತಿ ಬಿಟ್ಟ ಮೇಲೆ ಏಕಾಂಗಿಯಾಗಿದ್ದ ಈತ ಆವತ್ತು ಇದ್ದಕ್ಕಿದ್ದಂತೆ ಬರ್ಬರವಾಗಿ ಕೊಲೆಯಾಗಿ(Murder) ಹೋಗಿದ್ದ. ತನ್ನ ಏರಿಯಾದಲ್ಲಿ  ತನ್ನದೇ ಹವಾ ಮೆಂಟೆನ್ ಮಾಡಿಕೊಂಡು ಓಡಾಡ್ತಿದ್ದ ಈತ ಕೊಲೆಯಾಗಿದ್ದನ್ನ ಕಂಡು ಜನ ಬೆಚ್ಚಿ ಬಿದ್ದಿದ್ದರು. ಇನ್ನೂ ಈತನ ಕೊನೆ ಕ್ಷಣಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ವು. ಇನ್ನೂ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ(Police) ಹಂತಕರು ಯಾರು ಅನ್ನೋದನ್ನ ಪತ್ತೆ ಹಚ್ಚೋದೇ ದೊಡ್ಡ ಸವಾಲಾಗಿತ್ತು. ಆ ಯುವಕ ಮುಂದಕ್ಕೆ  ಬೈಕ್ ನಡುವಲ್ಲಿ ಕುಳಿತಿದ್ದವ ಏಕಾಏಕಿ ಇಳಿದು ತನ್ನ ಜತೆಗೆ ತಂದಿದ್ದ ಕಲ್ಲಿನಿಂದ ಯುವಕನ ತಲೆ ಭಾಗಕ್ಕೆ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ. ಇತ್ತಿಚೆಗಷ್ಟೇ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಆದ್ರೆ ಈ ವಿಡಿಯೋದ ಮೂಲ ಹುಡುಕುತ್ತ ಹೋದ ನಮಗೆ ಗೊತ್ತಾಗಿದ್ದು ಈ ದೃಶ್ಯ ನಮ್ಮದೇ ಬೆಳಗಾವಿ(Belagavi) ಜಿಲ್ಲೆಯಲ್ಲಿ ನಡೆದಿದ್ದು ಅಂತ. ಇನ್ನೂ ಈ ದೃಶ್ಯ ನೋಡಿದ ಪ್ರತೀಯೊಬ್ಬರೂ ರಾತ್ರಿ ಹೊತ್ತು ಒಬ್ಬೊಬ್ಬರೇ ಹೇಗೆ ಓಡಾಡೋದಪ್ಪ ಅಂತ ಚಿಂತೆ ಮಾಡುವಂತೆ ಮಾಡಿದ್ರು. ಈ ಘಟನೆ ನಡೆದಿದ್ದು ಆಗಸ್ಟ್‌ 30ರಂದು ಬೆಳಗಾವಿಯ ಶಿವಬಸವನಗರದಲ್ಲಿ. ಒಂದೇ ಏಟಿಗೆ ರಸ್ತೆ ಮೇಲೆ ಬಿದ್ದು ಪ್ರಾಣ ಬಿಟ್ಟ ಆ ಯುವಕನ ಹೆಸರು ನಾಗರಾಜ್ ಗಾಡಿವಡ್ಡರ್. 27 ವರ್ಷದ ಈತ ಗ್ಯಾಂಗವಾಡಿ ನಿವಾಸಿಯಾಗಿದ್ದು ಟೈಲ್ಸ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಆದ್ರೆ ಆವತ್ತು ತನ್ನ ಪಾಡಿಗೆ ತಾನು ಫೋನ್ನಲ್ಲಿ ಮಾತನ್ನಾಡಿಕೊಂಡು ಹೋಗುವಾಗ ಹಂತಕರು ಕಲ್ಲಿನಲ್ಲಿ ಹೊಡೆದು ಕಥೆ ಮುಗಿಸಿಬಿಟ್ಟಿದ್ರು.

ಇದನ್ನೂ ವೀಕ್ಷಿಸಿ:  ಕೃಷ್ಣನಗರಿಯಲ್ಲಿ ಕಳೆಗಟ್ಟಿದ ಕೃಷ್ಣಜನ್ಮಾಷ್ಟಮಿ ಸಂಭ್ರಮ: ಇಂದು ವಿಟ್ಲಪಿಂಡಿ ಉತ್ಸವ