ಕೊರೋನಾ ಭಯ: ಗ್ರಾಮವನ್ನೇ ತೊರೆದು ಹೋದ ಜನ, 60 ಮನೆಗಳು ಖಾಲಿ ಖಾಲಿ

Apr 12, 2020, 4:33 PM IST

ತುಮಕೂರು(ಏ.12): ಕೊರೋನಾ ವೈರಸ್‌ ಅಟ್ಟಹಾಸ ಹೆಚ್ಚಾಗುತ್ತಿರುವಾಗಲೇ ತುಮಕೂರಿನಲ್ಲಿ ಜನ ಗ್ರಾಮವನ್ನೇ ತೊರೆದಿದ್ದಾರೆ. ಕೊರೋನಾ ಭಯದಿಂದ ಜನ ಗ್ರಾಮ ತೊರೆದಿದ್ದು, ಗ್ರಾಮ ದೇವತೆ ಮಾರಮ್ಮನ ಆದೇಶದಂತೆ ಜನ ಗಂಟು ಮೂಟೆ ಕಟ್ಟಿದ್ದಾರೆ.

ಹೆಚ್ಚುತ್ತಿದೆ ಸೋಂಕಿತರ ಸಂಖ್ಯೆ, ಮೈಸೂರು ಕಂಪ್ಲೀಟ್ ಲಾಕ್‌ಡೌನ್

ಕೊರಟಗೆರೆ ತಾಲೂಕಿನ ಮುದ್ದೇನಹಳ್ಳಿಯ ಸುಮಾರು 60 ಮನೆಗಳು ಖಾಲಿಯಾಗಿವೆ. ಲಾಕ್‌ಡೌನ್ ನಡುವೆಯೇ ಮೌಢ್ಯ ಆಚರಣೆಯೂ ಹೆಚ್ಚಿದ್ದು, ಜನರು ಸಮಾಮುಗಳನ್ನು ಕಟ್ಟಿಕೊಂಡು ಮನೆ ಬಿಟ್ಟು ಹೋಗುತ್ತಿದ್ದಾರೆ.