AI ಕ್ಯಾಮೆರಾ ಮೊರೆ ಹೋದ ಸಾರಿಗೆ ಇಲಾಖೆ: ಸವಾರರ ಪಿನ್ ಟು ಪಿನ್ ಮಾಹಿತಿ ಸೆರೆ ಹಿಡಿಯುವ ಕ್ಯಾಮೆರಾ

AI ಕ್ಯಾಮೆರಾ ಮೊರೆ ಹೋದ ಸಾರಿಗೆ ಇಲಾಖೆ: ಸವಾರರ ಪಿನ್ ಟು ಪಿನ್ ಮಾಹಿತಿ ಸೆರೆ ಹಿಡಿಯುವ ಕ್ಯಾಮೆರಾ

Published : Oct 16, 2023, 11:40 AM IST

ಉದ್ಯಾನನಗರಿಯಲ್ಲಿ ಬೇಕಾಬಿಟ್ಟಿ ವಾಹನ ಚಲಾಯಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಮನಸೋ ಇಚ್ಛೆ ವಾಹನ ಚಲಾಯಿಸುವುದರಿಂದ ಅಪಘಾತ ಪ್ರಮಾಣ, ಸಂಚಾರ ದಟ್ಟಣೆ ಕೂಡ ಹೆಚ್ಚಾಗ್ತಿದೆ. ಇದನ್ನು ಮಟ್ಟಹಾಕಲು ಸಾರಿಗೆ ಇಲಾಖೆ ಹೊಸ ಅಸ್ತ್ರದ ಮೊರೆ ಹೊಗಲಿದೆಯಂತೆ. ಅದೇ ಎಐ ಅಸ್ತ್ರ.
 

ಬೆಂಗಳೂರು ಬೆಳೆಯುತ್ತಿದ್ದಂತೆ ವಾಹನ ದಟ್ಟನೆ ಕೂಡ ಹೆಚ್ಚಾಗ್ತಿದೆ. ಒಂದೂವರೆ ಕೋಟಿ ಜನ ಇರೋ ರಾಜಧಾನಿಯಲ್ಲಿ ಒಂದು ಕೋಟಿಗಿಂತ ಅಧಿಕ ವಾಹನಗಳಿವೆ. ವಾಹನಗಳು ಹೆಚ್ಚಾದಂತೆ ನಿಯಮ ಉಲ್ಲಂಘನೆ ಕೂಡ ಮಿತಿ ಮೀರಿದೆ. ಇದ್ರಿಂದ ಅಪಘಾತ ಸಂಖ್ಯೆಯೂ ಏರತೊಡಗಿದೆ. ಈ ಸಮಸ್ಯೆ ಬಗೆಹರಿಸೋದು ಹೇಗಪ್ಪಾ ಅಂತಾ ತಲೆ ಮೇಲೆ ಕೈಹೊತ್ತು ಕುಳಿತಿದ್ದ ಸಾರಿಗೆ ಇಲಾಖೆ ಹೊಸ ಐಡಿಯಾ ಮಾಡಿದೆ. ಮುಖ್ಯರಸ್ತೆಯಲ್ಲೇನೊ  ಪೊಲೀಸರು(Police) ಇರ್ತಿದ್ರು, ರೂಲ್ಸ್ ಬ್ರೇಕ್ ಮಾಡಿದವರನ್ನ ಸೆರೆ ಹಿಡಿತಿದ್ರು. ಆದ್ರೆ ಏರಿಯಾ ಒಳಗಿನ ರಸ್ತೆಗಳಲ್ಲಿ ಕೆಲವು ಪುಂಡರನ್ನ ಹೇಳೋರು ಕೇಳೋರೆ ಇರಲಿಲ್ಲ. ಇಂಥವೆಕ್ಕೆಲ್ಲ ಬ್ರೇಕ್ ಹಾಕಲು ಮುಂದಾದ ಸಾರಿಗೆ ಇಲಾಖೆ ಮತ್ತು ಟ್ರಾಫಿಕ್ ಪೊಲೀಸರು(Traffic Police), ಜಂಟಿಯಾಗಿ ಕಾರ್ಯಾಚರಣೆಗಿಳಿದಿದ್ದಾರೆ. ನಗರದ ಹಲವೆಡೆ AI  ಕ್ಯಾಮೆರಾ(AI Camera) ಅಳವಡಿಸುವ ಮೂಲಕ ನಿಯಮ ಉಲ್ಲಂಘಿಸುವವರ ಮೇಲೆ ಹದ್ದಿನ ಕಣ್ಣಿಡೋಕೆ ಪ್ಲಾನ್ ಮಾಡಿದೆ. ಸಾಮಾನ್ಯ ಕ್ಯಾಮೆರಾಗಳು ಸವಾರರ ಚಲನವಲನ ಮಾತ್ರ ಸೆರೆ ಹಿಡಿಯುತ್ತವೆ. ಆದರೆ ಎಐ ಕ್ಯಾಮೆರಾ ವಾಹನದ ವೇಗ, ಪಥ, ಶಿಸ್ತು ಉಲ್ಲಂಘನೆ, ಚಾಲಕರ ಸೀಟ್ ಬೆಲ್ಟ್ ಸೇರಿದಂತೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ವಾಹನದ ನಂಬರ್ ಪ್ಲೇಟ್ ಸಮೇತ ಕ್ಯಾಪ್ಚರ್ ಮಾಡಲಿದೆ. ಎಐ ಸರಿಸುಮಾರು 200-250 ಮೀಟರ್ ದೂರದವರೆಗೂ ದೃಶ್ಯಾವಳಿಯನ್ನ ಸೆರೆಹಿಡಿಯಬಲ್ಲದು. ಎಐ ಕ್ಯಾಮೆರಾಗಳನ್ನು ಸಾರಿಗೆ ಇಲಾಖೆಯ ವೆಬ್‌ ಆಧಾರಿತ ಸಾರಥಿ-4 ಮತ್ತು ವಾಹನ್‌-4 ತಂತ್ರಾಂಶದ ಜೊತೆ ಕನೆಕ್ಟ್ ಮಾಡಲಾಗುತ್ತೆ. ಎಐ ಕ್ಯಾಮೆರಾಗಳಲ್ಲಿ ವಾಹನದ ನೋಂದಣಿ ಸಂಖ್ಯೆ ಸೆರೆಯಾದ ತಕ್ಷಣ, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ವ್ಯಕ್ತಿಯ ಸಂಪೂರ್ಣ ವಿವರ ಇಲಾಖೆ ಸಿಬ್ಬಂದಿಗೆ ಬೆರಳ ತುದಿಯಲ್ಲೇ ಸಿಗಲಿದೆ. ಎಐ ಕ್ಯಾಮೆರಾದಿಂದ ವಾಹನದ ಪರವಾನಗಿ, ಕಾರ್ಯಕ್ಷಮತೆ ಪ್ರಮಾಣಪತ್ರ, ವಿಮೆ ಸೇರಿದಂತೆ ಇತರೆ ದಾಖಲೆಗಳು ಚಾಲ್ತಿಯಲ್ಲಿವೆಯೇ ಅಥವಾ ಇಲ್ಲವೇ ಎಂಬುದು ಗೊತ್ತಾಗಲಿದೆ. ಹಿಂದಿನ ನಿಯಮ ಉಲ್ಲಂಘನೆ ಪ್ರಕರಣಗಳ ಮಾಹಿತಿಯೂ ಕ್ಷಣ ಮಾತ್ರದಲ್ಲಿ ಸಿಗಲಿದೆ.

ಇದನ್ನೂ ವೀಕ್ಷಿಸಿ:  ಮತ್ತೆ ಸದ್ದು ಮಾಡ್ತಿದೆ ಸ್ಯಾಂಡ್ ಮಾಫಿಯಾ: ನದಿ ಒಡಲನ್ನೇ ಕೊರೆಯತ್ತಿದ್ದಾರೆ ಮರಳು ಗಳ್ಳರು

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more