ಕಬಾಬ್‌ನಲ್ಲೂ .. ಗೋಬಿಯಲ್ಲೂ ವಿಷ..! ಸರ್ಕಾರ ಬ್ಯಾನ್ ಮಾಡಿದ್ರೂ ವ್ಯಾಪಾರಿಗಳು ಬಿಡ್ತಿಲ್ಲ..!

ಕಬಾಬ್‌ನಲ್ಲೂ .. ಗೋಬಿಯಲ್ಲೂ ವಿಷ..! ಸರ್ಕಾರ ಬ್ಯಾನ್ ಮಾಡಿದ್ರೂ ವ್ಯಾಪಾರಿಗಳು ಬಿಡ್ತಿಲ್ಲ..!

Published : Jul 07, 2024, 09:13 AM IST

ಕಬಾಬ್‌ನಲ್ಲಿ ಕೆಮಿಕಲ್ ಯುಕ್ತ ಕಲರ್ ಬಳಕೆ ಮಾಡದಂತೆ ನಿಷೇಧ ಮಾಡಲಾಗಿದೆ. ಇದರ ಜೊತೆಗೆ ಗೋಬಿ ಮಂಚೂರಿಯಲ್ಲೂ ಕೆಲ ಕಲರ್ ಬಳಕೆಯನ್ನ ರಾಜ್ಯ ಸರ್ಕಾರ ಕಡ್ಡಾಯವಾಗಿ ನಿಷೇಧ ಮಾಡಿದೆ.

ಕಲರ್ ಕಲರ್ ಕಬಾಬ್.. ಬಣ್ಣ ಬಣ್ಣದ ತಿನಿಸುಗಳು.. ನೋಡಿದ್ರೆ ಬಾಯಲ್ಲಿ ನೀರು ಬರುತ್ತೆ.ಅಂತಾ ನೀವೆನಾದ್ರೂ ಆ ಕಲರ್ ಕಲರ್ ಕಬಾಬ್(Kebab) ಅನ್ನ ತಿಂದ್ರೆ ನಿಮ್ಮ ಆರೋಗ್ಯ ಹಾಳಾಗೋದು ಗ್ಯಾರಂಟಿ. ಬೊಂಬಾಯಿ ಮಿಠಾಯಿಗೆ ಹಾಕುವ ಪಿಂಕ್ ಕಲರ್ ಅನ್ನ ಬ್ಯಾನ್ ಮಾಡಲಾಗಿದೆ. ಅದರಲ್ಲಿ ವಿಷಕಾರ ಪದಾರ್ಥ ಇರುವ ಕಾರಣ ಮಿಠಾಯಿಯಲ್ಲಿ ಆ ಕಲರ್ ಅನ್ನ ಬಳಸದಂತೆ ಸರ್ಕಾರ ಬ್ಯಾನ್(Ban) ಮಾಡಿದೆ. ಕಾಟನ್ ಕ್ಯಾಂಡಿಯಲ್ಲಿ ವಿಷಕಾರಕ ರೊಡೋಮೈನ್ ಬಿ ಅನ್ನುವ ವಿಷಕಾರಕ ಕೆಮಿಕಲ್ ಆರೋಗ್ಯ ಇಲಾಖೆಯ ಪರೀಕ್ಷೆ ವೇಳೆ ಪತ್ತೆಯಾಗಿದೆ.ಈ ಹಿನ್ನೆಲೆ ರಂಗು ರಂಗಿನ ಕಾಟನ್ ಕ್ಯಾಂಡಿಯನ್ನ(Cotton candy) ನಿಷೇದ ಮಾಡಲಾಗಿದೆ. ಉಳಿದಂತೆ ಬಿಳಿಬಣ್ಣದ ಮತ್ತು ಬಣ್ಣ ಹಾಕದ ಕಾಟನ್ ಕ್ಯಾಂಡಿಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಕಾಟನ್ ಕ್ಯಾಂಡಿ ಜೊತೆಗೆ ಜನ ಅತ್ಯಂತ ಹೆಚ್ಚು ಇಷ್ಟಪಡುವ ಪದಾರ್ಥವೇ ಕಬಾಬ್. ಕಬಾಬ್ ಅನ್ನ ಮೂರ್ನಾಲ್ಕು ಕಲರ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಚಿತ್ರ ವಿಚಿತ್ರ ಕಲರ್‌ಗಳನ್ನ ಕಬಾಬ್ ತಯಾರಿಕೆಯ ವೇಳೆ ನಿಷೇಧ ಮಾಡಲಾಗಿದೆ. ಅಂದರೆ, ಕಬಾಬ್ ತಯಾರಿಸಬಹುದು. ಆದರೆ, ಆ ತಯಾರಿಕೆ ವೇಳೆ ಯಾವುದೇ ಕೆಮಿಕಲ್ ಯುಕ್ತ ಕಲರ್ ಬಳಕೆ ಮಾಡದಂತೆ ನಿಷೇಧ ಮಾಡಲಾಗಿದೆ. ಇದರ ಜೊತೆಗೆ ಗೋಬಿ ಮಂಚೂರಿಯಲ್ಲೂ ಕೆಲ ಕಲರ್ ಬಳಕೆಯನ್ನ ರಾಜ್ಯ ಸರ್ಕಾರ ಕಡ್ಡಾಯವಾಗಿ ನಿಷೇಧ ಮಾಡಿದೆ. 

ಇದನ್ನೂ ವೀಕ್ಷಿಸಿ:  News Hour: ಜೈಲಿನಲ್ಲೇ ಹೈವೋಲ್ಟೇಜ್‌ ಮೀಟಿಂಗ್‌, ದರ್ಶನ್‌ ಉಳಿಸೋಕೆ ಮುಂದಾದ ಕುಟುಂಬ!

21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!