ಕಬಾಬ್‌ನಲ್ಲೂ .. ಗೋಬಿಯಲ್ಲೂ ವಿಷ..! ಸರ್ಕಾರ ಬ್ಯಾನ್ ಮಾಡಿದ್ರೂ ವ್ಯಾಪಾರಿಗಳು ಬಿಡ್ತಿಲ್ಲ..!

ಕಬಾಬ್‌ನಲ್ಲೂ .. ಗೋಬಿಯಲ್ಲೂ ವಿಷ..! ಸರ್ಕಾರ ಬ್ಯಾನ್ ಮಾಡಿದ್ರೂ ವ್ಯಾಪಾರಿಗಳು ಬಿಡ್ತಿಲ್ಲ..!

Published : Jul 07, 2024, 09:13 AM IST

ಕಬಾಬ್‌ನಲ್ಲಿ ಕೆಮಿಕಲ್ ಯುಕ್ತ ಕಲರ್ ಬಳಕೆ ಮಾಡದಂತೆ ನಿಷೇಧ ಮಾಡಲಾಗಿದೆ. ಇದರ ಜೊತೆಗೆ ಗೋಬಿ ಮಂಚೂರಿಯಲ್ಲೂ ಕೆಲ ಕಲರ್ ಬಳಕೆಯನ್ನ ರಾಜ್ಯ ಸರ್ಕಾರ ಕಡ್ಡಾಯವಾಗಿ ನಿಷೇಧ ಮಾಡಿದೆ.

ಕಲರ್ ಕಲರ್ ಕಬಾಬ್.. ಬಣ್ಣ ಬಣ್ಣದ ತಿನಿಸುಗಳು.. ನೋಡಿದ್ರೆ ಬಾಯಲ್ಲಿ ನೀರು ಬರುತ್ತೆ.ಅಂತಾ ನೀವೆನಾದ್ರೂ ಆ ಕಲರ್ ಕಲರ್ ಕಬಾಬ್(Kebab) ಅನ್ನ ತಿಂದ್ರೆ ನಿಮ್ಮ ಆರೋಗ್ಯ ಹಾಳಾಗೋದು ಗ್ಯಾರಂಟಿ. ಬೊಂಬಾಯಿ ಮಿಠಾಯಿಗೆ ಹಾಕುವ ಪಿಂಕ್ ಕಲರ್ ಅನ್ನ ಬ್ಯಾನ್ ಮಾಡಲಾಗಿದೆ. ಅದರಲ್ಲಿ ವಿಷಕಾರ ಪದಾರ್ಥ ಇರುವ ಕಾರಣ ಮಿಠಾಯಿಯಲ್ಲಿ ಆ ಕಲರ್ ಅನ್ನ ಬಳಸದಂತೆ ಸರ್ಕಾರ ಬ್ಯಾನ್(Ban) ಮಾಡಿದೆ. ಕಾಟನ್ ಕ್ಯಾಂಡಿಯಲ್ಲಿ ವಿಷಕಾರಕ ರೊಡೋಮೈನ್ ಬಿ ಅನ್ನುವ ವಿಷಕಾರಕ ಕೆಮಿಕಲ್ ಆರೋಗ್ಯ ಇಲಾಖೆಯ ಪರೀಕ್ಷೆ ವೇಳೆ ಪತ್ತೆಯಾಗಿದೆ.ಈ ಹಿನ್ನೆಲೆ ರಂಗು ರಂಗಿನ ಕಾಟನ್ ಕ್ಯಾಂಡಿಯನ್ನ(Cotton candy) ನಿಷೇದ ಮಾಡಲಾಗಿದೆ. ಉಳಿದಂತೆ ಬಿಳಿಬಣ್ಣದ ಮತ್ತು ಬಣ್ಣ ಹಾಕದ ಕಾಟನ್ ಕ್ಯಾಂಡಿಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಕಾಟನ್ ಕ್ಯಾಂಡಿ ಜೊತೆಗೆ ಜನ ಅತ್ಯಂತ ಹೆಚ್ಚು ಇಷ್ಟಪಡುವ ಪದಾರ್ಥವೇ ಕಬಾಬ್. ಕಬಾಬ್ ಅನ್ನ ಮೂರ್ನಾಲ್ಕು ಕಲರ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಚಿತ್ರ ವಿಚಿತ್ರ ಕಲರ್‌ಗಳನ್ನ ಕಬಾಬ್ ತಯಾರಿಕೆಯ ವೇಳೆ ನಿಷೇಧ ಮಾಡಲಾಗಿದೆ. ಅಂದರೆ, ಕಬಾಬ್ ತಯಾರಿಸಬಹುದು. ಆದರೆ, ಆ ತಯಾರಿಕೆ ವೇಳೆ ಯಾವುದೇ ಕೆಮಿಕಲ್ ಯುಕ್ತ ಕಲರ್ ಬಳಕೆ ಮಾಡದಂತೆ ನಿಷೇಧ ಮಾಡಲಾಗಿದೆ. ಇದರ ಜೊತೆಗೆ ಗೋಬಿ ಮಂಚೂರಿಯಲ್ಲೂ ಕೆಲ ಕಲರ್ ಬಳಕೆಯನ್ನ ರಾಜ್ಯ ಸರ್ಕಾರ ಕಡ್ಡಾಯವಾಗಿ ನಿಷೇಧ ಮಾಡಿದೆ. 

ಇದನ್ನೂ ವೀಕ್ಷಿಸಿ:  News Hour: ಜೈಲಿನಲ್ಲೇ ಹೈವೋಲ್ಟೇಜ್‌ ಮೀಟಿಂಗ್‌, ದರ್ಶನ್‌ ಉಳಿಸೋಕೆ ಮುಂದಾದ ಕುಟುಂಬ!

22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!