Shivamogga: ಆಂಜನೇಯ ಗುಡಿ ತೆರವುಗೊಳಿಸದಂತೆ ಹೋರಾಡಿ ಜೀವ ತೊರೆದ ನೈಜ ನಾಗರ

Dec 7, 2021, 9:58 AM IST

ಶಿವಮೊಗ್ಗ (ಡಿ. 07): ನಗರದ ಎಪಿಎಂಸಿ ಬಳಿ ಸ್ಮಾರ್ಟ್ ಸಿಟಿ  (Smart City) ಕಾಮಗಾರಿ ನಡೆಯುತ್ತಿದೆ. ರಸ್ತೆಯ ಬದಿ ಸುಮಾರು 40 ವರ್ಷ ಹಳೆಯದಾದ ಆಂಜನೇಯ ದೇವಸ್ಥಾನವಿತ್ತು. ಈ ದೇವಾಲಯ ಫುಟ್‌ಪಾತ್ ಕಾಮಗಾರಿಗೆ ಅಡ್ಡಿಯಾಗಿದೆ ಎಂಬ ನೆಪವೊಡ್ಡಿ, ಅದನ್ನು ಕೆಡವಲು (Demolish) ಅಧಿಕಾರಿಗಳು ಮುಂದಾಗಿದ್ದಾರೆ.

Omicron Threat: ಲಸಿಕೆ ಕೊಡ್ತೀವಿ ಬನ್ರಪ್ಪ ಬನ್ನಿ, ಸಂತೆಯಲ್ಲಿ ವ್ಯಾಕ್ಸಿನೇಷನ್!

ಆಗ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ನಾಗಪ್ಪ, (Snake) ತಡೆವೊಡ್ಡಿದ್ದಾನೆ. ಕಾಮಗಾರಿ ಮಾಡಲು ಬಿಡದೇ, ಬುಸ್ ಬುಸ್ ಎಂದಿದ್ದಾನೆ. ಆಗ ಜೆಸಿಬಿಗೆ ಸಿಲುಕಿ ಸಾವನ್ನಪ್ಪಿದೆ. ಕೂಡಲೇ ಸ್ಥಳೀಯ ನಾಗರೀಕರು, ಭಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.