ಶತ್ರು ಭೈರವಿ ಯಾಗವನ್ನು ಅಘೋರಿಗಳು ಮಾತ್ರ ಮಾಡೋದಾ? ಡಿಕೆಶಿ ರಾಜಕೀಯ ಶತ್ರುಗಳಿಂದ ನಡೆಯುತ್ತಿದೆಯಾ ಯಾಗ?

Jun 1, 2024, 4:31 PM IST


ರಾಜ್ಯ ರಾಜಕಾರಣದಲ್ಲಿ ಮತ್ತೆ ಮಾಟ-ಮಂತ್ರದ ಭಯಾನಕ ಸುದ್ದಿ ಕೇಳಿ ಬರುತ್ತಿದೆ. ಸಿಎಂ ಸಿದ್ದರಾಮಯ್ಯ(Siddaramaiah)  ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌(DK Shivakumar) ಅವರಿಗೆ ರಾಜಕಂಟಕ ತರುವ ಉದ್ದೇಶದಿಂದ ಕೇರಳದಲ್ಲಿ(Karala) ಶತ್ರು ಭೈರವಿ ಸಂಹಾರ ಯಾಗ(Shatru Bhairavi Yaga)ನಡೆಯುತ್ತಿದೆಯಂತೆ. ಇದಕ್ಕಾಗಿ ಅಘೋರಿಗಳು ಕೇರಳಕ್ಕೆ ಬಂದಿದ್ದಾರಂತೆ. ಡಿಕೆ ಶಿವಕುಮಾರ್ ಕೊಟ್ಟ ಆ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಡಿಕೆಶಿ ಆ ಮಾತು ಹೇಳಿದಾಗಿನಿಂದ ರಾಜ್ಯ ರಾಜಕಾರಣದಲ್ಲಿ ಇಡೇ ದೊಡ್ಡ ಚೆರ್ಚಾ ವಿಷಯವಾಗಿದೆ. ಕೇರಳದಲ್ಲಿ ತಮ್ಮ ಮತ್ತು ಸಿಎಂ ಸಿದ್ದರಾಮಯ್ಯನವರ ಮೇಲೆ ದೊಡ್ಡ ಪ್ರಯೋಗ ನಡೆಯುತ್ತಿದೆ. ಈ ಪ್ರಯೋಗ ನಡೆಯುತ್ತಿರುವುದು ತಮ್ಮ ಶತ್ರುಗಳಿಂದ ಎಂದು ಡಿಕೆಶಿ ದೊಡ್ಡ ಬಾಂಬ್ವೊಂದನ್ನು ಸಿಡಿಸಿದ್ದರು. ಭೈರವಿ ಯಾಗವೆಂದ್ರೆ, ಭೈರವ ಮಂತ್ರವನ್ನು ಬಳಸಿ, ತನ್ನ ವೈರಿ ಅಥವಾ ಶತ್ರುಗಳನ್ನು ಸಂಹಾರ ಮಾಡಲಿ ಎಂಬ ಆಸೆಯಿಂದ ಮಾಡುವ ಯಾಗವನ್ನೇ ಶತ್ರು ಭೈರವಿ ಸಂಹಾರ ಯಾಗವೆಂದು ಹೇಳಲಾಗುತ್ತೆ. ಈ ಯಾಗವನ್ನು ತಮ್ಮ ಶತ್ರು ಸತ್ತು ಹೋಗಲಿ, ಓಡಿ ಹೋಗಲಿ, ನಾಶವಾಗಲಿ, ಧ್ವಂಷವಾಗಲಿ, ಜೊತೆಗಿದ್ದವರೊಟ್ಟಿಗೆ ಬಡಿದಾಡಿಕೊಳ್ಳಲಿ, ಮನೆಯವರಿಂದ ದೂರವಾಗಲಿ, ಕಿತ್ತಾಡಿಕೊಳ್ಳಲಿ ಒಟ್ಟಾರೆ ಹೇಳಬೇಕೆಂದ್ರೆ ತಮ್ಮ ಶತ್ರುವಿನ ಸರ್ವನಾಶಕ್ಕಾಗಿ ಈ ಯಾಗವನ್ನು ಮಾಡಿಸಲಾಗುತ್ತದೆ. ಇದನ್ನೇ ಶತ್ರು ಭೈರವಿ ಸಂಹಾರ ಯಾಗವೆಂದು ಕರೆಯಲಾಗುತ್ತೆ.

ಇದನ್ನೂ ವೀಕ್ಷಿಸಿ:  ಬಿಜೆಪಿ ವಿರುದ್ಧ 40% ಕಮಿಷನ್‌ ಆರೋಪ: ರಾಹುಲ್ ಗಾಂಧಿ ವಿರುದ್ಧ ವಾರಂಟ್ ಹೊರಡಿಸಲಾಗುತ್ತಾ..?