ವಿಜಯನಗರದಲ್ಲಿ ಸಿದ್ದರಾಮಯ್ಯ ಸೈಟ್ ಪಡೆದುಕೊಂಡಿದ್ದೇಕೆ? ಉದ್ದೇಶಪೂರ್ವಕವಾಗಿಯೇ ಜಮೀನು ಪಡೆದ್ರಾ?

ವಿಜಯನಗರದಲ್ಲಿ ಸಿದ್ದರಾಮಯ್ಯ ಸೈಟ್ ಪಡೆದುಕೊಂಡಿದ್ದೇಕೆ? ಉದ್ದೇಶಪೂರ್ವಕವಾಗಿಯೇ ಜಮೀನು ಪಡೆದ್ರಾ?

Published : Jul 14, 2024, 11:02 AM IST

ಮುಡಾದಿಂದ ಸಿಎಂ ಸಿದ್ದರಾಮಯ್ಯ ಪತ್ನಿಗೆ ಬದಲಿ ನಿವೇಶನ
ಜಮೀನಿದ್ದ ಬಡಾವಣೆಯಲ್ಲೇ ಸೈಟ್ ಇದ್ರೂ ಪಡೆಯದ ಸಿಎಂ
ದೇವನೂರು ಬಡಾವಣೆ 3ನೇ ಹಂತದಲ್ಲಿ ಸಿಎಂ ಪತ್ನಿ ಜಮೀನು

ಮುಡಾ ಹಗರಣದಲ್ಲಿ(Muda scam) ಸಿಎಂ ಸಿದ್ದರಾಮಯ್ಯ (Siddaramaiah) ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಚುನಾವಣಾ ಆಯೋಗಕ್ಕೆ ಮಾಹಿತಿ ಮುಚ್ಚಿಟ್ಟಿದ್ದಾರೆ ಎನ್ನಲಾಗ್ತಿದೆ. ಚುನಾವಣಾ ಅಫಿಡವಿಟ್‌ನಲ್ಲಿ(Election Affidavit) ಜಮೀನಿನ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ. 2010ರಲ್ಲಿ ಸಿದ್ದರಾಮಯ್ಯ ಪತ್ನಿಗೆ ಸಹೋದರನಿಂದ ಜಮೀನು ಸಿಕ್ಕಿದ್ದು, 2013ರ ಚುನಾವಣಾ ಅಫಿಡವಿಟ್‌ನಲ್ಲಿ ಮಾಹಿತಿ ಮುಚ್ಚಿಟ್ಟಿದ್ದಾರೆ ಎನ್ನಲಾಗ್ತಿದೆ. 2018ರ ಚುನಾವಣೆ ಅಫಿಡವಿಟ್‌ನಲ್ಲಿ ಜಮೀನಿನ ಬಗ್ಗೆ ಉಲ್ಲೇಖ ಮಾಡಲಾಗಿದೆ. 3.16 ಎಕರೆ ಜಮೀನು ತಮ್ಮ ಪತ್ನಿ ಹೆಸರಲ್ಲಿದೆ ಅಂತಾ ಮಾಹಿತಿ ನೀಡಿದ್ದು, ಜಮೀನಿನ ಮೌಲ್ಯ 25 ಲಕ್ಷ ಅಂತಾ ಸಿದ್ದರಾಮಯ್ಯ ಉಲ್ಲೇಖಿಸಿದ್ರು. 2023ರ ಚುನಾವಣಾ ಅಫಿಡವಿಟ್‌ನಲ್ಲಿ ಬದಲಿ ನಿವೇಶನಗಳ ಘೋಷಣೆ ಮಾಡಲಾಗಿದೆ. 25 ರೂ. ಲಕ್ಷದ ಜಮೀನಿಗೆ ಬದಲಿಯಾಗಿ ₹8 ಕೋಟಿ ಮೌಲ್ಯದ ನಿವೇಶನ, ಸಿಎಂ ಸಿದ್ದರಾಮಯ್ಯಗೆ RTI ಕಾರ್ಯಕರ್ತ ಗಂಗರಾಜು(RTI activist Gangaraju) ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯ ಪತ್ನಿಗೆ ವಿಜಯನಗರದಲ್ಲಿ ಬದಲಿ ನಿವೇಶನ ನೀಡಿದ್ದು, ಮುಡಾದಿಂದ 37 ಸಾವಿರ ಚದರಡಿಗೂ ಹೆಚ್ಚು ಜಾಗ ಮಂಜೂರು ಮಾಡಲಾಗಿದೆ. ದೇವನೂರು ಬಡಾವಣೆಯಲ್ಲೇ ಖಾಲಿಯಿವೆ ಸಾಕಷ್ಟು ನಿವೇಶನ ಇವೆ. 4,538 ನಿವೇಶನಗಳ ಪೈಕಿ 565 ನಿವೇಶನಗಳು ಈಗಲೂ ಖಾಲಿ ಇವೆ. ಸಿದ್ದರಾಮಯ್ಯ ಪತ್ನಿ ನೀಡಿರುವ ಭೂಮಿಯಲ್ಲೇ 18 ಸೈಟ್ ಖಾಲಿ ಇದ್ದು, ವಿಜಯನಗರದಲ್ಲಿ ಸಿದ್ದರಾಮಯ್ಯ ಸೈಟ್ ಪಡೆದುಕೊಂಡಿದ್ದೇಕೆ?, ಉದ್ದೇಶಪೂರ್ವಕವಾಗಿಯೇ ವಿಜಯನಗರದಲ್ಲಿ ಸೈಟ್ ಪಡೆದ್ರಾ? ಸಿಎಂ ಸಿದ್ದರಾಮಯ್ಯಗೆ ಸೈಟ್ ಹಂಚಿಕೆ ಬಗ್ಗೆ ಇದೀಗ ಅನುಮಾನ ಹೆಚ್ಚಿದೆ.

ಇದನ್ನೂ ವೀಕ್ಷಿಸಿ:  ಇಡಿ ಬಲೆಗೆ ಬಿದ್ದಿರುವ ನಾಗೇಂದ್ರಗೆ ಮತ್ತಷ್ಟು ಸಂಕಷ್ಟ..! ಡೀಲ್‌ನಲ್ಲಿ ಕೈಜೋಡಿಸಿದ್ದವರೇ ಮಾಜಿ ಸಚಿವನಿಗೆ ಮುಳುವಾದ್ರಾ..?

23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ