ವಿಜಯನಗರದಲ್ಲಿ ಸಿದ್ದರಾಮಯ್ಯ ಸೈಟ್ ಪಡೆದುಕೊಂಡಿದ್ದೇಕೆ? ಉದ್ದೇಶಪೂರ್ವಕವಾಗಿಯೇ ಜಮೀನು ಪಡೆದ್ರಾ?

ವಿಜಯನಗರದಲ್ಲಿ ಸಿದ್ದರಾಮಯ್ಯ ಸೈಟ್ ಪಡೆದುಕೊಂಡಿದ್ದೇಕೆ? ಉದ್ದೇಶಪೂರ್ವಕವಾಗಿಯೇ ಜಮೀನು ಪಡೆದ್ರಾ?

Published : Jul 14, 2024, 11:02 AM IST

ಮುಡಾದಿಂದ ಸಿಎಂ ಸಿದ್ದರಾಮಯ್ಯ ಪತ್ನಿಗೆ ಬದಲಿ ನಿವೇಶನ
ಜಮೀನಿದ್ದ ಬಡಾವಣೆಯಲ್ಲೇ ಸೈಟ್ ಇದ್ರೂ ಪಡೆಯದ ಸಿಎಂ
ದೇವನೂರು ಬಡಾವಣೆ 3ನೇ ಹಂತದಲ್ಲಿ ಸಿಎಂ ಪತ್ನಿ ಜಮೀನು

ಮುಡಾ ಹಗರಣದಲ್ಲಿ(Muda scam) ಸಿಎಂ ಸಿದ್ದರಾಮಯ್ಯ (Siddaramaiah) ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಚುನಾವಣಾ ಆಯೋಗಕ್ಕೆ ಮಾಹಿತಿ ಮುಚ್ಚಿಟ್ಟಿದ್ದಾರೆ ಎನ್ನಲಾಗ್ತಿದೆ. ಚುನಾವಣಾ ಅಫಿಡವಿಟ್‌ನಲ್ಲಿ(Election Affidavit) ಜಮೀನಿನ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ. 2010ರಲ್ಲಿ ಸಿದ್ದರಾಮಯ್ಯ ಪತ್ನಿಗೆ ಸಹೋದರನಿಂದ ಜಮೀನು ಸಿಕ್ಕಿದ್ದು, 2013ರ ಚುನಾವಣಾ ಅಫಿಡವಿಟ್‌ನಲ್ಲಿ ಮಾಹಿತಿ ಮುಚ್ಚಿಟ್ಟಿದ್ದಾರೆ ಎನ್ನಲಾಗ್ತಿದೆ. 2018ರ ಚುನಾವಣೆ ಅಫಿಡವಿಟ್‌ನಲ್ಲಿ ಜಮೀನಿನ ಬಗ್ಗೆ ಉಲ್ಲೇಖ ಮಾಡಲಾಗಿದೆ. 3.16 ಎಕರೆ ಜಮೀನು ತಮ್ಮ ಪತ್ನಿ ಹೆಸರಲ್ಲಿದೆ ಅಂತಾ ಮಾಹಿತಿ ನೀಡಿದ್ದು, ಜಮೀನಿನ ಮೌಲ್ಯ 25 ಲಕ್ಷ ಅಂತಾ ಸಿದ್ದರಾಮಯ್ಯ ಉಲ್ಲೇಖಿಸಿದ್ರು. 2023ರ ಚುನಾವಣಾ ಅಫಿಡವಿಟ್‌ನಲ್ಲಿ ಬದಲಿ ನಿವೇಶನಗಳ ಘೋಷಣೆ ಮಾಡಲಾಗಿದೆ. 25 ರೂ. ಲಕ್ಷದ ಜಮೀನಿಗೆ ಬದಲಿಯಾಗಿ ₹8 ಕೋಟಿ ಮೌಲ್ಯದ ನಿವೇಶನ, ಸಿಎಂ ಸಿದ್ದರಾಮಯ್ಯಗೆ RTI ಕಾರ್ಯಕರ್ತ ಗಂಗರಾಜು(RTI activist Gangaraju) ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯ ಪತ್ನಿಗೆ ವಿಜಯನಗರದಲ್ಲಿ ಬದಲಿ ನಿವೇಶನ ನೀಡಿದ್ದು, ಮುಡಾದಿಂದ 37 ಸಾವಿರ ಚದರಡಿಗೂ ಹೆಚ್ಚು ಜಾಗ ಮಂಜೂರು ಮಾಡಲಾಗಿದೆ. ದೇವನೂರು ಬಡಾವಣೆಯಲ್ಲೇ ಖಾಲಿಯಿವೆ ಸಾಕಷ್ಟು ನಿವೇಶನ ಇವೆ. 4,538 ನಿವೇಶನಗಳ ಪೈಕಿ 565 ನಿವೇಶನಗಳು ಈಗಲೂ ಖಾಲಿ ಇವೆ. ಸಿದ್ದರಾಮಯ್ಯ ಪತ್ನಿ ನೀಡಿರುವ ಭೂಮಿಯಲ್ಲೇ 18 ಸೈಟ್ ಖಾಲಿ ಇದ್ದು, ವಿಜಯನಗರದಲ್ಲಿ ಸಿದ್ದರಾಮಯ್ಯ ಸೈಟ್ ಪಡೆದುಕೊಂಡಿದ್ದೇಕೆ?, ಉದ್ದೇಶಪೂರ್ವಕವಾಗಿಯೇ ವಿಜಯನಗರದಲ್ಲಿ ಸೈಟ್ ಪಡೆದ್ರಾ? ಸಿಎಂ ಸಿದ್ದರಾಮಯ್ಯಗೆ ಸೈಟ್ ಹಂಚಿಕೆ ಬಗ್ಗೆ ಇದೀಗ ಅನುಮಾನ ಹೆಚ್ಚಿದೆ.

ಇದನ್ನೂ ವೀಕ್ಷಿಸಿ:  ಇಡಿ ಬಲೆಗೆ ಬಿದ್ದಿರುವ ನಾಗೇಂದ್ರಗೆ ಮತ್ತಷ್ಟು ಸಂಕಷ್ಟ..! ಡೀಲ್‌ನಲ್ಲಿ ಕೈಜೋಡಿಸಿದ್ದವರೇ ಮಾಜಿ ಸಚಿವನಿಗೆ ಮುಳುವಾದ್ರಾ..?

29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?