ಪಾಲಿಕೆ ಯಡವಟ್ಟಿಗೆ ಜನ ಜೀವನ ಅಸ್ತವ್ಯಸ್ತ: ರಸ್ತೆಯನ್ನೇ ಪಾರ್ಕ್ ಮಾಡಲು ಮುಂದಾದ ಪಾಲಿಕೆ

ಪಾಲಿಕೆ ಯಡವಟ್ಟಿಗೆ ಜನ ಜೀವನ ಅಸ್ತವ್ಯಸ್ತ: ರಸ್ತೆಯನ್ನೇ ಪಾರ್ಕ್ ಮಾಡಲು ಮುಂದಾದ ಪಾಲಿಕೆ

Published : Sep 13, 2023, 10:25 AM IST

ಮಕ್ಕಳು ಶಾಲೆಗೆ ಹೋಗಲು ಪರದಾಡುತ್ತಿರುವ ದೃಶ್ಯ. ಮತ್ತೊಂದೆಡೆ ರಸ್ತೆ ಇಲ್ಲದೆ ಬೇಸತ್ತ ಸಾರ್ವಜನಿಕರು. ಅಷ್ಟಕ್ಕೂ ಇಲ್ಲಿ ರಸ್ತೆಯೇ ಇರಲಿಲ್ಲ ಅಂತಲ್ಲ. ಕಳೆದ ಹತ್ತಾರು ವರ್ಷಗಳಿಂದ ಈ ಜನರು ಓಡಾಡುತ್ತಿದ್ದ ರಸ್ತೆ ಈಗ ಇದ್ದಕ್ಕಿದ್ದ ಹಾಗೆ ಮಾಯವಾಗಿಬಿಟ್ಟಿದೆ.
 

ರಸ್ತೆ ಎಲ್ಲಿ ಹೋಯ್ತು ಅಂತೀರಾ.. ಇದು ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮಾಡಿದ ಯಡವಟ್ಟು. ಪಾಲಿಕೆ ವ್ಯಾಪ್ತಿಯ 28ನೇ ವಾರ್ಡ್‌ಗೆ ಸೇರುವ ಸರಸ್ವತಿಪುರಂನ 10ನೇ A ಕ್ರಾಸ್‌ನ ಜನರಿಗೆ ರಸ್ತೆಯಿತ್ತು. ಸುಮಾರು 200ಕ್ಕೂ ಹೆಚ್ಚು ಮನೆಗಳಿಗೆ (houses)ಅನುಕೂಲವಾಗಿದ್ದ ಈ ರಸ್ತೆ ಜಾಗದಲ್ಲಿಯೇ ಹೊಸ ಪಾರ್ಕ್(Park) ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಹೀಗಾಗಿ ಇಲ್ಲಿನ ಜನ ಐದು ನಿಮಿಷ‌ದ ದಾರಿ ಬದಲು ಈಗ ಒಂದೂವರೆ ಕಿಲೋಮೀಟರ್ ಸುತ್ತಿ ಬಳಸಿ ಮನೆ ಸೇರುವಂತಾಗಿದೆ. 30 ವರ್ಷದ ಹಿಂದೆ ಸೂಕ್ತ ರಸ್ತೆ ಇಲ್ಲದ ಬಡಾವಣೆ ನಕ್ಷೆಗೆ  ಟೂಡಾ ಹಾಗೂ ಪಾಲಿಕೆ ಅಧಿಕಾರಿಗಳು ಎನ್‌ಒಸಿ ನೀಡಿದ್ದಾರೆ. ಈ ವಿಚಾರ ಕೋರ್ಟ್ ಗಮನಕ್ಕೆ ತರದೆ, ವಾಸ್ತವ ಪರಿಸ್ಥಿತಿ ಮುಚ್ಚಿಟ್ಟ  ಪರಿಣಾಮ, ಕೋರ್ಟ್ ನಿಂದ ವ್ಯತಿರಿಕ್ತ ತೀರ್ಪು ಬಂದಿದೆ. ವಾಸ್ತವಿಕವಾಗಿ ಈ ಬಡಾವಣೆಗೆ ಸೂಕ್ತ ರಸ್ತೆ ಇಲ್ಲದೆ ಇರುವುದು ಹಾಗೂ ಬಡಾವಣೆಯ ಬೇರೆ ಕಡೆ ಪಾರ್ಕ್ ಜಾಗ ಇರುವುದನ್ನು ಅಧಿಕಾರಿಗಳು ಕೋರ್ಟ್ ಗಮನಕ್ಕೆ ತಂದಿಲ್ಲ, ತಮ್ಮ ಯಡವಟ್ಟು ಮುಚ್ಚಿ ಹಾಕೊಳ್ಳಲು ಹಾಗೂ ಹೈ ಕೋರ್ಟ್(High court) ನಿಂದ ಛೀಮಾರಿ ಹಾಕಿಸಿಕೊಳ್ಳೋದನ್ನು ತಪ್ಪಿಸಿಕೊಳ್ಳಲು ಹೀಗೆ ಮಾಡಿದೆ.


ಸದ್ಯ ಇಲ್ಲಿನ ರಸ್ತೆ‌ ಮುಚ್ಚಿ‌ ಪಾರ್ಕ್ ನಿರ್ಮಾಣ ಮಾಡುವಂತೆ ಹೈ ಕೋರ್ಟ್ ಆದೇಶ ನೀಡಿದೆ. ಇದರ ವಿರುದ್ಧ 2022ರಲ್ಲೇ ಬಡಾವಣೆಯ ನಿವಾಸಿಗಳಾದ ಗಂಗಯ್ಯ, ಬಸವರಾಜು, ನರಸಪ್ಪ, ಲಕ್ಕಪ್ಪಗೌಡ, ರಂಗಮ್ಮ, ದೇವಿಕಾ ಎಂಬುವರು ತುಮಕೂರು ಪಾಲಿಕೆ ಕಮಿಷನರ್,‌ ಡೆಪ್ಯೂಟಿ ಕಮಿಷನರ್, ಟೂಡಾ ಕಮಿಷನರ್, ಸ್ಮಾರ್ಟ್ ಸಿಟಿ ಎಂಡಿ, ಟೂಡಾ ಅಧ್ಯಕ್ಷರ ವಿರುದ್ದ ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ರು. ಆದ್ರೆ ಪ್ರಯೋಜನವಾಗಿಲ್ಲ. 

ಇದನ್ನೂ ವೀಕ್ಷಿಸಿ:  ಮಚ್ಚಿನಿಂದ ಪತ್ನಿ ಕೊಚ್ಚಿ ಕೊಂದ ಪತಿ: ಮಾವನ ಮೇಲೂ ಮಾರಣಾಂತಿಕ ಹಲ್ಲೆ

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?