ದರ್ಶನ್‌ಗೆ ಮುಳುವಾಗುತ್ತಾ ಮತ್ತೊಂದು ಸಾಕ್ಷಿ? ಶವ ಬಿಸಾಕಿದ ಬಳಿಕ ಸ್ನೇಹಿತನ ಬಳಿ ಕಥೆ ಹೇಳಿದ್ದ ಆರೋಪಿ!

ದರ್ಶನ್‌ಗೆ ಮುಳುವಾಗುತ್ತಾ ಮತ್ತೊಂದು ಸಾಕ್ಷಿ? ಶವ ಬಿಸಾಕಿದ ಬಳಿಕ ಸ್ನೇಹಿತನ ಬಳಿ ಕಥೆ ಹೇಳಿದ್ದ ಆರೋಪಿ!

Published : Jul 21, 2024, 01:01 PM IST

ರೇಣುಕಾಸ್ವಾಮಿ ಕೊಲೆ ಮಾಡಿ ಶವ ಬಿಸಾಕಿದ ನಂತರ ಆರೋಪಿ ರವಿಶಂಕರ್‌ ತನ್ನ ಸ್ನೇಹಿತನಿಗೆ ಈ ಬಗ್ಗೆ ಕಥೆ ಹೇಳಿದ್ದನಂತೆ.
 

ನಟ ದರ್ಶನ್‌ಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case ) ಮತ್ತೊಂದು ಸಾಕ್ಷಿ ಮುಳುವಾಗುವ ಸಾಧ್ಯತೆ ಇದೆ. ಕೊಲೆ ಮಾಡಿದ ಬಳಿಕ 8ನೇ ಆರೋಪಿ ರವಿಶಂಕರ್‌ (accused Ravi Shankar) ತನ್ನ ಸ್ನೇಹಿತ ಬಳಿ ಕಥೆ ಹೇಳಿದ್ದನಂತೆ. ರೇಣುಕಾಸ್ವಾಮಿ ಕೊಲೆ ಮಾಡಿ ಶವ ಬಿಸಾಕಿದ ನಂತರ ಸ್ನೇಹಿತನಿಗೆ ಕಥೆ ಹೇಳಿದ್ದನಂತೆ. ಈ ವಿಚಾರವನ್ನ ಪೊಲೀಸರು (Police)ಬಾಯ್ಬಿಡಿಸಿದ್ದಾರೆ. ಅಲ್ಲದೇ ಕತೆ ಕೇಳಿಸಿಕೊಂಡಿದ್ದ ಸ್ನೇಹಿತನನ್ನ ಈಗ ಪೊಲೀಸರು ಸಾಕ್ಷ್ಯ ಮಾಡಿದ್ದಾರೆ. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಕಿಡ್ನಾಫ್ ಮಾಡಿದ್ದು ಇದೇ ರವಿಶಂಕರ್ ಕಾರಲ್ಲಿ. ಶವ ಬಿಸಾಕಿ ಚಿತ್ರದುರ್ಗಕ್ಕೆ ತೆರಳಿ ನಡೆದಿದ್ದನ್ನೆಲ್ಲ ಸ್ನೇಹಿತನ ಬಳಿ ಹೇಳಿದ್ದನಂತೆ. ಈಗ ಆತನನ್ನು ಪ್ರಮುಖ‌ಸಾಕ್ಷಿಯಾಗಿ ಪೊಲೀಸರು ಮಾಡಿದ್ದಾರೆ. ದರ್ಶನ್‌ಗೆ ಮನೆ ಕೆಲಸದವರ ಕಂಟಕ ಆಯ್ತು ಈಗ ಮ್ಯಾನೇಜರ್ ಕಾಸ್ಟ್ಯೂಮ್‌ ಡಿಸೈನರ್ (Manager Costume Designer) ಕಂಟಕ ಶುರುವಾಗಿದೆ. ದರ್ಶನ್(Darshan) ವಿರುದ್ಧವೇ ಸಾಕ್ಷಿಯಾದ ಮ್ಯಾನೇಜರ್ ಕಾಸ್ಟ್ಯೂಮ್ ಡಿಸೈನರ್, ದರ್ಶನ್ ಪಡೆದುಕೊಂಡಿದ್ದ ಹಣಕ್ಕೆ ಸಂಬಂಧಿಸಿ ಮ್ಯಾನೇಜರ್ ಸಾಕ್ಷಿ ಇದೆ. ಕೃತ್ಯ ಎಸಗಿದ ಬಳಿಕ‌ ಬಟ್ಟೆಗಳನ್ನ ವಿಜಯಲಕ್ಷ್ಮಿ ಮನೆಗೆ ಕಳುಹಿಸಿದ್ದಕ್ಕೆ ಕಾಸ್ಟ್ಯೂಮ್ ಡಿಸೈನರ್ ಸಾಕ್ಷಿ ಇದೆ. ರೇಣುಕಾಸ್ವಾಮಿ ಕೊಲೆ ಬಳಿಕ ಮೋಹನ್ ರಾಜ್ ಹಾಗೂ ಮಿಲನ ಪ್ರಕಾಶ್ ಮೂಲಕ‌ ದರ್ಶನ್‌ ಹಣ ಪಡೆದಿದ್ದರು. ಇದನ್ನ ತನ್ನ ಮ್ಯಾನೇಜರ್ ಮುಖಾಂತರವೇ ಇಬ್ಬರಿಗೂ ದರ್ಶನ್‌ ಸಂಪರ್ಕ ಮಾಡಿದ್ದರು. 

ಇದನ್ನೂ ವೀಕ್ಷಿಸಿ:  ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸಿಕ್ತು ಮಹತ್ವದ ಸಾಕ್ಷ್ಯ! ದರ್ಶನ್‌ ಗ್ಯಾಂಗ್‌ ಬಚಾವ್‌ ಆಗಲು ಸಾಧ್ಯವೆ ಇಲ್ವಾ?

02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
07:24ಪತ್ನಿಯ ಶೀಲ ಶಂಕಿಸಿ ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಭೀಕರ ಹತ್ಯೆ; 'ಹಾರ್ಟ್ ಅಟ್ಯಾಕ್' ಎಂದಿದ್ದ ಪತಿಯ ಬಣ್ಣ ಬಯಲು!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ