ದರ್ಶನ್‌ಗೆ ಮುಳುವಾಗುತ್ತಾ ಮತ್ತೊಂದು ಸಾಕ್ಷಿ? ಶವ ಬಿಸಾಕಿದ ಬಳಿಕ ಸ್ನೇಹಿತನ ಬಳಿ ಕಥೆ ಹೇಳಿದ್ದ ಆರೋಪಿ!

ದರ್ಶನ್‌ಗೆ ಮುಳುವಾಗುತ್ತಾ ಮತ್ತೊಂದು ಸಾಕ್ಷಿ? ಶವ ಬಿಸಾಕಿದ ಬಳಿಕ ಸ್ನೇಹಿತನ ಬಳಿ ಕಥೆ ಹೇಳಿದ್ದ ಆರೋಪಿ!

Published : Jul 21, 2024, 01:01 PM IST

ರೇಣುಕಾಸ್ವಾಮಿ ಕೊಲೆ ಮಾಡಿ ಶವ ಬಿಸಾಕಿದ ನಂತರ ಆರೋಪಿ ರವಿಶಂಕರ್‌ ತನ್ನ ಸ್ನೇಹಿತನಿಗೆ ಈ ಬಗ್ಗೆ ಕಥೆ ಹೇಳಿದ್ದನಂತೆ.
 

ನಟ ದರ್ಶನ್‌ಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case ) ಮತ್ತೊಂದು ಸಾಕ್ಷಿ ಮುಳುವಾಗುವ ಸಾಧ್ಯತೆ ಇದೆ. ಕೊಲೆ ಮಾಡಿದ ಬಳಿಕ 8ನೇ ಆರೋಪಿ ರವಿಶಂಕರ್‌ (accused Ravi Shankar) ತನ್ನ ಸ್ನೇಹಿತ ಬಳಿ ಕಥೆ ಹೇಳಿದ್ದನಂತೆ. ರೇಣುಕಾಸ್ವಾಮಿ ಕೊಲೆ ಮಾಡಿ ಶವ ಬಿಸಾಕಿದ ನಂತರ ಸ್ನೇಹಿತನಿಗೆ ಕಥೆ ಹೇಳಿದ್ದನಂತೆ. ಈ ವಿಚಾರವನ್ನ ಪೊಲೀಸರು (Police)ಬಾಯ್ಬಿಡಿಸಿದ್ದಾರೆ. ಅಲ್ಲದೇ ಕತೆ ಕೇಳಿಸಿಕೊಂಡಿದ್ದ ಸ್ನೇಹಿತನನ್ನ ಈಗ ಪೊಲೀಸರು ಸಾಕ್ಷ್ಯ ಮಾಡಿದ್ದಾರೆ. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಕಿಡ್ನಾಫ್ ಮಾಡಿದ್ದು ಇದೇ ರವಿಶಂಕರ್ ಕಾರಲ್ಲಿ. ಶವ ಬಿಸಾಕಿ ಚಿತ್ರದುರ್ಗಕ್ಕೆ ತೆರಳಿ ನಡೆದಿದ್ದನ್ನೆಲ್ಲ ಸ್ನೇಹಿತನ ಬಳಿ ಹೇಳಿದ್ದನಂತೆ. ಈಗ ಆತನನ್ನು ಪ್ರಮುಖ‌ಸಾಕ್ಷಿಯಾಗಿ ಪೊಲೀಸರು ಮಾಡಿದ್ದಾರೆ. ದರ್ಶನ್‌ಗೆ ಮನೆ ಕೆಲಸದವರ ಕಂಟಕ ಆಯ್ತು ಈಗ ಮ್ಯಾನೇಜರ್ ಕಾಸ್ಟ್ಯೂಮ್‌ ಡಿಸೈನರ್ (Manager Costume Designer) ಕಂಟಕ ಶುರುವಾಗಿದೆ. ದರ್ಶನ್(Darshan) ವಿರುದ್ಧವೇ ಸಾಕ್ಷಿಯಾದ ಮ್ಯಾನೇಜರ್ ಕಾಸ್ಟ್ಯೂಮ್ ಡಿಸೈನರ್, ದರ್ಶನ್ ಪಡೆದುಕೊಂಡಿದ್ದ ಹಣಕ್ಕೆ ಸಂಬಂಧಿಸಿ ಮ್ಯಾನೇಜರ್ ಸಾಕ್ಷಿ ಇದೆ. ಕೃತ್ಯ ಎಸಗಿದ ಬಳಿಕ‌ ಬಟ್ಟೆಗಳನ್ನ ವಿಜಯಲಕ್ಷ್ಮಿ ಮನೆಗೆ ಕಳುಹಿಸಿದ್ದಕ್ಕೆ ಕಾಸ್ಟ್ಯೂಮ್ ಡಿಸೈನರ್ ಸಾಕ್ಷಿ ಇದೆ. ರೇಣುಕಾಸ್ವಾಮಿ ಕೊಲೆ ಬಳಿಕ ಮೋಹನ್ ರಾಜ್ ಹಾಗೂ ಮಿಲನ ಪ್ರಕಾಶ್ ಮೂಲಕ‌ ದರ್ಶನ್‌ ಹಣ ಪಡೆದಿದ್ದರು. ಇದನ್ನ ತನ್ನ ಮ್ಯಾನೇಜರ್ ಮುಖಾಂತರವೇ ಇಬ್ಬರಿಗೂ ದರ್ಶನ್‌ ಸಂಪರ್ಕ ಮಾಡಿದ್ದರು. 

ಇದನ್ನೂ ವೀಕ್ಷಿಸಿ:  ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸಿಕ್ತು ಮಹತ್ವದ ಸಾಕ್ಷ್ಯ! ದರ್ಶನ್‌ ಗ್ಯಾಂಗ್‌ ಬಚಾವ್‌ ಆಗಲು ಸಾಧ್ಯವೆ ಇಲ್ವಾ?

22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!