ದರ್ಶನ್‌ಗೆ ಮುಳುವಾಗುತ್ತಾ ಮತ್ತೊಂದು ಸಾಕ್ಷಿ? ಶವ ಬಿಸಾಕಿದ ಬಳಿಕ ಸ್ನೇಹಿತನ ಬಳಿ ಕಥೆ ಹೇಳಿದ್ದ ಆರೋಪಿ!

ದರ್ಶನ್‌ಗೆ ಮುಳುವಾಗುತ್ತಾ ಮತ್ತೊಂದು ಸಾಕ್ಷಿ? ಶವ ಬಿಸಾಕಿದ ಬಳಿಕ ಸ್ನೇಹಿತನ ಬಳಿ ಕಥೆ ಹೇಳಿದ್ದ ಆರೋಪಿ!

Published : Jul 21, 2024, 01:01 PM IST

ರೇಣುಕಾಸ್ವಾಮಿ ಕೊಲೆ ಮಾಡಿ ಶವ ಬಿಸಾಕಿದ ನಂತರ ಆರೋಪಿ ರವಿಶಂಕರ್‌ ತನ್ನ ಸ್ನೇಹಿತನಿಗೆ ಈ ಬಗ್ಗೆ ಕಥೆ ಹೇಳಿದ್ದನಂತೆ.
 

ನಟ ದರ್ಶನ್‌ಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case ) ಮತ್ತೊಂದು ಸಾಕ್ಷಿ ಮುಳುವಾಗುವ ಸಾಧ್ಯತೆ ಇದೆ. ಕೊಲೆ ಮಾಡಿದ ಬಳಿಕ 8ನೇ ಆರೋಪಿ ರವಿಶಂಕರ್‌ (accused Ravi Shankar) ತನ್ನ ಸ್ನೇಹಿತ ಬಳಿ ಕಥೆ ಹೇಳಿದ್ದನಂತೆ. ರೇಣುಕಾಸ್ವಾಮಿ ಕೊಲೆ ಮಾಡಿ ಶವ ಬಿಸಾಕಿದ ನಂತರ ಸ್ನೇಹಿತನಿಗೆ ಕಥೆ ಹೇಳಿದ್ದನಂತೆ. ಈ ವಿಚಾರವನ್ನ ಪೊಲೀಸರು (Police)ಬಾಯ್ಬಿಡಿಸಿದ್ದಾರೆ. ಅಲ್ಲದೇ ಕತೆ ಕೇಳಿಸಿಕೊಂಡಿದ್ದ ಸ್ನೇಹಿತನನ್ನ ಈಗ ಪೊಲೀಸರು ಸಾಕ್ಷ್ಯ ಮಾಡಿದ್ದಾರೆ. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಕಿಡ್ನಾಫ್ ಮಾಡಿದ್ದು ಇದೇ ರವಿಶಂಕರ್ ಕಾರಲ್ಲಿ. ಶವ ಬಿಸಾಕಿ ಚಿತ್ರದುರ್ಗಕ್ಕೆ ತೆರಳಿ ನಡೆದಿದ್ದನ್ನೆಲ್ಲ ಸ್ನೇಹಿತನ ಬಳಿ ಹೇಳಿದ್ದನಂತೆ. ಈಗ ಆತನನ್ನು ಪ್ರಮುಖ‌ಸಾಕ್ಷಿಯಾಗಿ ಪೊಲೀಸರು ಮಾಡಿದ್ದಾರೆ. ದರ್ಶನ್‌ಗೆ ಮನೆ ಕೆಲಸದವರ ಕಂಟಕ ಆಯ್ತು ಈಗ ಮ್ಯಾನೇಜರ್ ಕಾಸ್ಟ್ಯೂಮ್‌ ಡಿಸೈನರ್ (Manager Costume Designer) ಕಂಟಕ ಶುರುವಾಗಿದೆ. ದರ್ಶನ್(Darshan) ವಿರುದ್ಧವೇ ಸಾಕ್ಷಿಯಾದ ಮ್ಯಾನೇಜರ್ ಕಾಸ್ಟ್ಯೂಮ್ ಡಿಸೈನರ್, ದರ್ಶನ್ ಪಡೆದುಕೊಂಡಿದ್ದ ಹಣಕ್ಕೆ ಸಂಬಂಧಿಸಿ ಮ್ಯಾನೇಜರ್ ಸಾಕ್ಷಿ ಇದೆ. ಕೃತ್ಯ ಎಸಗಿದ ಬಳಿಕ‌ ಬಟ್ಟೆಗಳನ್ನ ವಿಜಯಲಕ್ಷ್ಮಿ ಮನೆಗೆ ಕಳುಹಿಸಿದ್ದಕ್ಕೆ ಕಾಸ್ಟ್ಯೂಮ್ ಡಿಸೈನರ್ ಸಾಕ್ಷಿ ಇದೆ. ರೇಣುಕಾಸ್ವಾಮಿ ಕೊಲೆ ಬಳಿಕ ಮೋಹನ್ ರಾಜ್ ಹಾಗೂ ಮಿಲನ ಪ್ರಕಾಶ್ ಮೂಲಕ‌ ದರ್ಶನ್‌ ಹಣ ಪಡೆದಿದ್ದರು. ಇದನ್ನ ತನ್ನ ಮ್ಯಾನೇಜರ್ ಮುಖಾಂತರವೇ ಇಬ್ಬರಿಗೂ ದರ್ಶನ್‌ ಸಂಪರ್ಕ ಮಾಡಿದ್ದರು. 

ಇದನ್ನೂ ವೀಕ್ಷಿಸಿ:  ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸಿಕ್ತು ಮಹತ್ವದ ಸಾಕ್ಷ್ಯ! ದರ್ಶನ್‌ ಗ್ಯಾಂಗ್‌ ಬಚಾವ್‌ ಆಗಲು ಸಾಧ್ಯವೆ ಇಲ್ವಾ?

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!