ರೇಣುಕಾಸ್ವಾಮಿ ಕೊಲೆ ಕೇಸ್‌ನ ಮತ್ತೊಂದು ರಹಸ್ಯ ಬಯಲು..ಹಲ್ಲೆ ಬಳಿಕ ಕ್ಷಮಾಪಣೆ ವಿಡಿಯೋ ಮಾಡಲು ಪ್ಲ್ಯಾನ್‌ !

ರೇಣುಕಾಸ್ವಾಮಿ ಕೊಲೆ ಕೇಸ್‌ನ ಮತ್ತೊಂದು ರಹಸ್ಯ ಬಯಲು..ಹಲ್ಲೆ ಬಳಿಕ ಕ್ಷಮಾಪಣೆ ವಿಡಿಯೋ ಮಾಡಲು ಪ್ಲ್ಯಾನ್‌ !

Published : Jul 22, 2024, 04:25 PM IST

ಸಾವಿನ ವಿಚಾರ ಪೋನ್ ಮೂಲಕ ದರ್ಶನ್ ಗೆ ತಿಳಿಸಿದ್ದ ಆರೋಪಿಗಳು
ಪೊಲೀಸರ ತನಿಖೆ ವೇಳೆ ದರ್ಶನ್ ಗ್ಯಾಂಗ್ ಅಪಾಲಜಿ ಪ್ಲ್ಯಾನ್ ಬಯಲು 
ಆರೋಪಿಗಳ ಮೊಬೈಲ್ ಪರಿಶೀಲನೆ ರಿಟ್ರೀವ್ ಗೆ ಕಳಿಸಿದ ಪೊಲೀಸರು

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ(Renukaswamy murder case) ಮಹತ್ವದ ಬೆಳವಣಿಗೆಯಾಗಿದ್ದು, ತನಿಖೆ ವೇಳೆ ಮತ್ತೊಂದು ಕುತೂಹಲಕಾರಿ ವಿಚಾರ ಬಯಲಾಗಿದೆ. ಹಲ್ಲೆ ಬಳಿಕ ಅಪಾಲಜಿ ವಿಡಿಯೋ (Apology video) ಮಾಡಲು ಪ್ರಯತ್ನಿಸಲಾಗಿದೆಯಂತೆ. ರೇಣುಕಾಸ್ವಾಮಿ ಕೈಯಲ್ಲಿ ಕ್ಷಮಾಪಣೆ ಕೇಳಿಸಲು ಪ್ರಯತ್ನಿಸಲಾಗಿದೆಯಂತೆ. ಕ್ಷಮೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಾಕಲು ಪ್ಲ್ಯಾನ್ ಮಾಡಿದ್ದರಂತೆ. ರೇಣುಕಾಸ್ವಾಮಿ ಮೇಲೆ ಭೀಕರವಾಗಿ ಹಲ್ಲೆ(Attack) ಮಾಡಿದ್ದ ಗ್ಯಾಂಗ್. ಹಲ್ಲೆಯಿಂದ ಮೃತ ರೇಣುಕಾಸ್ವಾಮಿ ನಿತ್ರಾಣನಾಗಿ ಬಿದ್ದಿದೆ. ಅಸ್ವಸ್ಥನಾಗಿದ್ದ ರೇಣುಕಾಸ್ವಾಮಿಯನ್ನು ಇಬ್ಬರು ಮೇಲೆತ್ತಿ ಕೂರಿಸಿದ್ರು, ಎದುರುಗಡೆ ಮೊಬೈಲ್ ಫೋನ್ ಹಿಡಿದು ನಿಂತಿದ್ದ ಮತ್ತೊಬ್ಬ ಆರೋಪಿ. ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಹೇಳುವಂತೆ ಒತ್ತಾಯ ಮಾಡಲಾಗಿದೆಯಂತೆ. ಅಶ್ಲೀಲ ಮೆಸೇಜ್ , ಪೋಟೊ ಕಳಿಸಲ್ಲ ಎಂದು ಹೇಳುವಂತೆ ಒತ್ತಾಯ, ಅಷ್ಟೊತ್ತಿಗಾಗಲೇ ನಿಲ್ಲಲು, ಕೂರಲು ಆಗದೇ ರೇಣುಕಾಸ್ವಾಮಿ ನಿತ್ರಾಣಗೊಂಡಿದ್ದ. ದರ್ಶನ್(Darshan) ಗ್ಯಾಂಗ್ ಹಲ್ಲೆಗೆ ರೇಣುಕಾಸ್ವಾಮಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ನಾಳೆ ಹೇಳಿಸೋಣ ಬಿಡ್ರೋ ಅಂತೇಳಿ ಸುಮ್ಮನಾಗಿದ್ದ ದರ್ಶನ್. ಅಸ್ವಸ್ಥನಾಗಿದ್ದ ರೇಣುಕಾಸ್ವಾಮಿಯನ್ನ ಸೆಕ್ಯುರಿಟಿ ರೂಂಗೆ ಹಾಕಿದ್ದರು. ತೀವ್ರ ಹಲ್ಲೆಯಿಂದ ರೇಣುಕಾಸ್ವಾಮಿ ಪ್ರಾಣಪಕ್ಷಿ ಹಾರಿ ಹೋಗಿತ್ತು. 

ಇದನ್ನೂ ವೀಕ್ಷಿಸಿ:  ಕನ್ನಡಿಗರ ಜೀವನಾಡಿ KRS ಜಲಾಶಯ ಭರ್ತಿ: ಡಿಕೆಶಿ ಭೇಟಿ.. ಕಾವೇರಿ ಆರತಿಗೆ ಹೊಸ ಯೋಜನೆ

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!