ಪವಿತ್ರಾಗೌಡ ನಿವಾಸದಲ್ಲಿ ಮಹಜರು ವೇಳೆ ಸಿಕ್ಕಿದೇನು ? ತನಿಖೆ ವೇಳೆ ಆ ದಾಖಲೆ ಕಂಡು ಪೊಲೀಸರೇ ಶಾಕ್..!

Jun 18, 2024, 11:41 AM IST

ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಪವಿತ್ರಾಗೌಡ ನಿವಾಸದಲ್ಲಿ(Pavitra Gowda residence) ಮಹಜರು ನಡೆಸುವ ವೇಳೆ ಸುಮಾರು 15 ಕೋಟಿ ಆಸ್ತಿ ವ್ಯವಹಾರ ಪತ್ರ ಪತ್ತೆಯಾಗಿದೆ. ಈ ದಾಖಲೆ ಕಂಡು ಪೊಲೀಸರಿಗೇ(Police) ಶಾಕ್ ಆಗಿದ್ದಾರೆ. ಆಸ್ತಿ ಖರೀದಿಯ ಹಣದ ಮೂಲದ ಪರಿಶೀಲನೆಗೆ ಪೊಲೀಸರು ಇಳಿದಿದ್ದಾರೆ. ಆಸ್ತಿ ಖರೀದಿಯಲ್ಲಿ ರಾಜಕಾರಣಿಗಳ ಪಾತ್ರ ಇದೆಯಾ..?, ದರ್ಶನ್(Darshan)​ ಪ್ರಕರಣದಲ್ಲಿ ರಾಜಕಾರಣಿಗಳ ನಂಟು ಇರಬಹುದು ಎನ್ನಲಾಗ್ತಿದೆ. ರಿಯಲ್​ ಎಸ್ಟೇಟ್​ (Real estate)ಕಾರಣಕ್ಕೆ ದರ್ಶನ್​ ಬಚಾವ್​ ಮಾಡಲು ಯತ್ನ ನಡೆಸಲಾಗುತ್ತಿದೆ. ಇಬ್ಬರು ಕಾಂಗ್ರೆಸ್ , ಒಬ್ಬ ಬಿಜೆಪಿ ಮುಖಂಡನಿಂದ ದರ್ಶನ್​ ರಕ್ಷಣೆ ಮಾಡಲಾಗುತ್ತಿದೆ ಎನ್ನಲಾಗ್ತಿದೆ. ರೇಣುಕಾಸ್ವಾಮಿ ಕೊಲೆಗೂ ಮೀರಿ ತನಿಖೆ ನಡೆದ್ರೆ  ಲಾಕ್​ ಆಗೋದು ಫಿಕ್ಸ್​ ಎನ್ನಲಾಗ್ತಿದೆ. ಒಂದು ವೇಳೆ ಪೊಲೀಸರು​ ತನಿಖೆಗೆ ಇಳಿದ್ರೆ ನಟ ದರ್ಶನ್‌ರ ಮತ್ತೊಂದು ಮುಖ ಬಯಲಾಗಲಿದೆ. ಸದ್ಯ ಪೊಲೀಸ್​ ತನಿಖೆ ಮೇಲೆ ನಟ ದರ್ಶನ್ ಭವಿಷ್ಯ ನಿಂತಿದೆ.

ಇದನ್ನೂ ವೀಕ್ಷಿಸಿ:  ರೇಣುಕಾಸ್ವಾಮಿ ಕೊಲೆ ಹೇಗಾಯ್ತು, ಯಾರಿದ್ರು, ಎಷ್ಟು ಜನ ಸೇರಿದ್ರು? ಯಾವ ಆಯುಧಗಳಿಂದ ಹಲ್ಲೆ ಮಾಡಲಾಯ್ತು?