Love Jihad: ನಿವೇದಿತಾ ಪ್ರತಿಷ್ಠಾನದಿಂದ ಲವ್‌ ಜಿಹಾದ್‌ ಬಗ್ಗೆ ಜಾಗೃತಿ

Dec 26, 2022, 10:38 AM IST

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾವಿರಾರು ಹಿಂದೂ ಯುವತಿಯರು ಲವ್ ಜಿಹಾದ್ ಬಲೆಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟಲು ಹಿಂದೂ ಪರ ಸಂಘಟನೆಗಳು ಸೋದರಿ ನಿವೇದಿತಾ ಪ್ರತಿಷ್ಠಾನದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಲವ್ ಜಿಹಾದ್ ತಡೆಯಲು ಮುಸ್ಲಿಂ ಯುವಕರ ಲವ್ ಜಿಹಾದ್ದಿಂದ ಹೇಗೆ ತಪ್ಪಿಸಿಕೊಳ್ಳುವುದು ಮತ್ತು ಯುವತಿಯರಿಗೆ ಜಾಗೃತಿಗೊಳಿವುದರ ಬಗ್ಗೆ ಮಾಹಿತಿ ನೀಡಲಾಯ್ತು. ಕಾರ್ಯಕ್ರಮದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ, ಹಿಂದೂ ಜನ ಜಾಗೃತಿಯ ಮೋಹನ್ ಗೌಡ ಸೇರಿ ಹಲವು ಯುವಕ, ಯುವತಿಯರು ಭಾಗಿಯಾಗಿದ್ರು.. ಶ್ರದ್ಧಾ ಪ್ರಕರಣದ ನಂತರ ಹಲವು ಪ್ರಕರಣಗಳು ಬಯಲಿಗೆ ಬಂದಿದ್ದು, ಈ ಹಿಂದೆಯ ನಡೆದ ಕಿರುಕುಳ ಕಥೆಗಳು ಕೂಡ ಹೊರ ಬರ್ತಿವೆ, ಲವ್ ಜಿಹಾದ್ ಅನ್ನೋದು ವ್ಯವಸ್ಥಿತ ಪ್ಲ್ಯಾನ್ ಆಗಿದ್ದು, ನಮ್ಮಲ್ಲಿ ನಾವು ಜಾಗೃತಿ ತಂದುಕೊಳ್ಳುವ ಕಾರ್ಯಕ್ರಮ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ರು.
Covid Guideline; ಕೊರೋನಾ ನಿರ್ಬಂಧ: ಇಂದು ಮಹತ್ವದ ಸಭೆ