ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಉಪ್ಪಿಟ್ಟು ತಿಂತೀರಾ ? ಅಂಗನವಾಡಿಗಳಿಗೆ ಪೂರೈಕೆ ಆಗ್ತಿದೆ ಹುಳು ಹತ್ತಿರೋ ಗೋಧಿ ರವೆ !

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಉಪ್ಪಿಟ್ಟು ತಿಂತೀರಾ ? ಅಂಗನವಾಡಿಗಳಿಗೆ ಪೂರೈಕೆ ಆಗ್ತಿದೆ ಹುಳು ಹತ್ತಿರೋ ಗೋಧಿ ರವೆ !

Published : Jun 25, 2024, 10:59 AM IST

ಹಾವೇರಿ ಜಿಲ್ಲೆಯ ಬಹುತೇಕ ಅಂಗನವಾಡಿಗಳಿಗೆ ಕಳಪೆ ರವೆ ಪೂರೈಕೆ ಆಗುತ್ತಿದ್ದು,ಅಂಗನವಾಡಿಗಳಿಗೆ ಹುಳು ಹತ್ತಿರೋ ಗೋಧಿ ರವೆ ಪೂರೈಕೆ ಆಗ್ತಿದೆ. 
 

ಹಾವೇರಿ: ಈ ಅಂಗನವಾಡಿ ಮಕ್ಕಳು ದಿನಾ ತಿನ್ನುವ ಫುಡ್‌ನನ್ನು ದನಗಳೂ ತಿನ್ನಲ್ಲ. ಪ್ರತಿ ದಿನ ಉಪ್ಪಿಟ್ಟು ತಿಂದು ಅಂಗನವಾಡಿ ಮಕ್ಕಳು ಬೇಸತ್ತಿದ್ದಾರೆ. ಅಲ್ಲದೇ ಅಂಗನವಾಡಿಗಳಿಗೆ (Anganwadis) ಹುಳು ಹತ್ತಿರೋ ಗೋಧಿ ರವೆ (Wheat Rave) ಪೂರೈಕೆ ಆಗ್ತಿದೆ.  ಉಪ್ಪಿಟ್ಟು ರವೆಯಲ್ಲಿ ಅರ್ಧ ಹೊಟ್ಟು,ಕಸ ಕಡ್ಡಿ ಇದ್ದು, ಹಾವೇರಿ (Haveri) ಜಿಲ್ಲೆಯ ಬಹುತೇಕ ಅಂಗನವಾಡಿಗಳಿಗೆ ಕಳಪೆ ರವೆ ಪೂರೈಕೆ ಆಗುತ್ತಿದೆ. ಅಂಗನವಾಡಿ ಮಕ್ಕಳ ಗೋಳನ್ನು ಇಲ್ಲಿ ಕೇಳೋರಿಲ್ಲ. ಅಂಗನವಾಡಿ ಕಂದಮ್ಮಗಳಿಗೆ ಮೊದಲೆಲ್ಲಾ ಪೌಷ್ಟಿಕ ಆಹಾರ ಸಿಗ್ತಿತ್ತು. ಈಗ ಪ್ರತಿ ದಿನ ಸಪ್ಪೆ ಉಪ್ಪಿಟ್ಟು ತಿಂದು ಮಕ್ಕಳು ಹೈರಾಣಾಗಿದ್ದಾರೆ. ಮೊದಲು ಪ್ರತಿ ದಿನ ಮಕ್ಕಳಿಗೆ ಹಾಲು,  ಶೇಂಗಾ ಬೆಲ್ಲ, ಮಧ್ಯಾಹ್ನ ಅನ್ನ ಸಾಂಬಾರ್, ಮೊಳಕೆ ಕಟ್ಟಿದ ಹೆಸರು ಕಾಳು‌, ಸಿಹಿ ರವೆ ಪಾಯಸ, ರವೆ ಕಿಚಡಿ, ಮೊಟ್ಟೆ ನೀಡಲಾಗುತ್ತಿತ್ತು. ಆದರೆ ಕೆಲ ತಿಂಗಳ ಹಿಂದೆ ಹೊಸ ಮೆನು ಜಾರಿ ಮಾಡಿದ್ದ ಸರ್ಕಾರ, ಈಗ ಕಿಚಡಿ ಬದಲು ಪ್ರತಿ ದಿನ ಉಪ್ಪಿಟ್ಟು ನೀಡಲಾಗ್ತಿದೆ. ಗರ್ಭಿಣಿ ಬಾಣಂತಿಯರಿಗೆ ಪ್ರತಿ ದಿನ ಮೊಟ್ಟೆ , ಹಾಲು, ನಾಲ್ಕು ದಿನ ಅನ್ನ ಸಾಂಬಾರ್, ಎರಡು ದಿನ ಉಪ್ಪಿಟ್ಟು  ನೀಡಲಾಗ್ತಿದೆ. ಗರ್ಭಿಣಿ, ಬಾಣಂತಿಯರಿಗೂ ಸತ್ವ ರಹಿತ ಅನ್ನ ಸಾಂಬಾರ್ ನೀಡಲಾಗ್ತಿದೆ.

ಇದನ್ನೂ ವೀಕ್ಷಿಸಿ:  ಇಂದ್ರಜಿತ್ ಲಂಕೇಶ್ ಪುತ್ರನ ಹಾಡು ಟ್ರೆಂಡಿಂಗ್! ದಕ್ಷಿಣದ ಸಿನಿಮಾಗಳ ಮುಂದೆ ಧೂಳೆಬ್ಬಿಸಿದ ‘ಗೌರಿ’ ಸಾಂಗ್ !

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more