ನದಿ ಪಾಲಾಗಿದ್ರೆ ಚೆನ್ನಾಗಿತ್ತು. ಈಗ ಬದುಕಿಯೂ ಸತ್ತಂತೆ ; ಕುಂಬಾರರ ಕಣ್ಣೀರ ಕಥೆಯಿದು!

Oct 17, 2020, 5:28 PM IST

ಬೆಂಗಳೂರು (ಅ. 17): ನದಿ ಪಾಲಾಗಿದ್ರೆ ಚೆನ್ನಾಗಿತ್ತು. ಈಗ ಬದುಕಿಯೂ ಸತ್ತಂತೆ ಎಂದು ಕುಂಬಾರರು ಕಣ್ಣೀರಿಡುತ್ತಿದ್ದಾರೆ. ಯಾದಗಿರಿಯ ನಾಯ್ಕಲ್ ಗ್ರಾಮದ ಕುಂಬಾರರು ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ. ಮಹಾಮಳೆಯಲ್ಲಿ ಕುಂಬಾರಿಕೆ ಸಾಮಗ್ರಿಗಳು ಕೊಚ್ಚಿ ಹೋಗಿವೆ. ಜೀವ ಹಾಗೂ ಜೀವನದವಾಗಿದ್ದ ಅನೇಕ ಸಾಮಗ್ರಿಗಳು ಕೊಚ್ಚಿ ಹೋಗಿದ್ದರಿಂದ, ಹಾಳಾಗಿದ್ದರಿಂದ ಜನರು ಮುಂದೇನಪ್ಪಾ ಗತಿ ಅಂತ ಚಿಂತೆಯಲ್ಲಿದ್ದಾರೆ. ಸರ್ಕಾರ ಇವರ ನೆರವಿಗೆ ಧಾವಿಸಬೇಕಾಗಿದೆ. ಸಹಾಯ ಮಾಡಬೇಕಾಗಿದೆ. ಇವರ ಕಣ್ಣೀರನ್ನು ಒರೆಸಬೇಕಾಗಿದೆ.