ಗ್ರಾಮಸ್ಥರ ನೆಮ್ಮದಿ ಕೊಳ್ಳಿ ಇಟ್ಟ LLP ಕಾರ್ಖಾನೆ: ಕಾರ್ಖಾನೆ ದುರ್ವಾಸನೆಗೆ ಗ್ರಾಮಸ್ಥರ ಬದುಕೇ‌ ದುಸ್ಥರ !

ಗ್ರಾಮಸ್ಥರ ನೆಮ್ಮದಿ ಕೊಳ್ಳಿ ಇಟ್ಟ LLP ಕಾರ್ಖಾನೆ: ಕಾರ್ಖಾನೆ ದುರ್ವಾಸನೆಗೆ ಗ್ರಾಮಸ್ಥರ ಬದುಕೇ‌ ದುಸ್ಥರ !

Published : Sep 13, 2023, 09:56 AM IST

ಅವರೆಲ್ಲರೂ ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಗ್ರಾಮಸ್ಥರು. ಖಾಸಗಿ ಕಂಪನಿಯಿಂದ ಬರುತ್ತಿರುವ ದುರ್ವಾಸನೆಗೆ ನಲುಗಿದ ಗ್ರಾಮಸ್ಥರು ಕೆಲಸ ಕಾರ್ಯವನ್ನು ಬಿಟ್ಟು ಹೋರಾಟಕ್ಕೆ ಇಳಿದಿದ್ದಾರೆ. ಊರಿಗೆ ಉದ್ಯೋಗದ ಭರವಸೆಯಲ್ಲಿದ್ದವರಿಗೆ ಜೀವ ಉಳಿಸಿಕೊಳ್ಳುವುದೇ ಕಷ್ಟದ ಕೆಲಸವಾಗಿದೆ.  
 

ಮುಖಕ್ಕೆ ಸೆರಗು ಸುತ್ತಿಕೊಂಡ ಮಹಿಳೆಯರು. ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ(Protest). ಪೊಲೀಸರ ಮಾತಿಗೂ ಜಗ್ಗದೆ ಅನಿರ್ಧಿಷ್ಟಾವಧಿ ಧರಣಿ. ಕಾರ್ಖಾನೆ ಬಂದ್‌ ಮಾಡಲೇಬೇಕೆಂದು ಹಠ ಹಿಡಿದು ಹೋರಾಟ. ಈ ದೃಶ್ಯ ಕಂಡು ಬಂದಿದ್ದು, ಹುಬ್ಬಳ್ಳಿ(Hubli) ನಗರದ  ಕೂಗಳತೆ ದೂರದಲ್ಲಿರುವ ಅಂಚಟಗೇರಿ ಗ್ರಾಮದಲ್ಲಿ. ದುರ್ವಾಸನೆ ಬೀರುವ ವಿಂಟೆಕ್ ಪ್ರೊಟೀನ್ ರಿಕವರಿ ಪ್ಲಾಂಟ್ ಎಲ್ ಎಲ್ ಪಿ ಕಾರ್ಖಾನೆ(LLP factory) ಬಂದ್ ಮಾಡುವಂತೆ ಇವರೆಲ್ಲಾ ಬೀದಿಗಿಳಿದಿದ್ದಾರೆ. ವಾಸನೆ.. ದುರ್ವಾಸನೆ.. ಮನೆಯಲ್ಲಿ ಇರೋಕಾಲ್ಲ.. ಬೀದಿಗೂ ಬರಕಾಗಲ್ಲ.. ದುರ್ಮಾಂಸ ದುರ್ನಾತ ಗ್ರಾಮಸ್ಥರ ಬದುಕು‌ ದುಸ್ತರ ಮಾಡಿದೆ. ಗ್ರಾಮದಲ್ಲಿ ಮಕ್ಕಳು, ವೃದ್ಧರು , ಅನಾರೋಗ್ಯ ತುತ್ತಾಗುವಂತಾಗಿದೆ. ಕೇರಳದ(Kerala) ಉದ್ಯಮಿಯೊಬ್ಬರು ಸ್ಥಾಪಿಸಿದ ವಿಂಟೆಕ್ ಪ್ರೊಟೀನ್ ರಿಕವರಿ ಪ್ಲಾಂಟ್ ಎಲ್ ಎಲ್ ಪಿ ಕಾರ್ಖಾನೆ  ಗ್ರಾಮಸ್ಥರರ ನೆಮ್ಮದಿ ಕಿತ್ತುಕೊಂಡಿದೆ. ಇದರಿಂದ ಬೇಸತ್ತ ಗ್ರಾಮಸ್ಥರು ಕಾರ್ಖಾನೆ ಬಂದ್ ಮಾಡಿಸಿ ಅಥವಾ ಬೇರೆಡೆ ಸ್ಥಳಾಂತರ ಮಾಡುವಂತೆ ಹೆದ್ದಾರಿ ತಡೆದು ಅನಿರ್ಧಿಷ್ಟಾವಧಿ ಧರಣಿ ನಡೆಸ್ತಿದ್ದಾರೆ. ಕೇರಳ, ಗೋವಾ ರಾಜ್ಯದ ಕಸಾಯಿಖಾನೆಗಳಲ್ಲಿ ದನದ ಮಾಂಸದ ತ್ಯಾಜ್ಯವನ್ನು  ಸಂಗ್ರಹಿಸ್ತಾರೆ. ಅಲ್ಲಿಂದ ತಂದ ಮಾಂಸಾವನ್ನು ಈ ಕಾರ್ಖಾನೆಯಲ್ಲಿ ಕುದಿಸಿ, ಅದರಿಂದ ಪ್ರಾಣಿಗಳ ಆಹಾರ ತಯಾರಿಸಲಾಗುತ್ತಿದೆ. ಇದರಿಂದ ಹೊರಹೊಮ್ಮುವ ದುರ್ನಾತ ಜನರ ನಿದ್ದೆಗೆಡಿಸಿದೆ. ಅಂಚಟಗೇರಿ ಗ್ರಾಮಸ್ಥರು ತಮ್ಮ ಹೊಲಗದ್ದೆಗಳಿಗೆ ಕೆಲಸ ಕಾರ್ಯಕ್ಕೂ ಹೋಗದ ಸ್ಥಿತಿ ಎದುರಾಗಿದೆ.. ಇಷ್ಟೆಲ್ಲಾ ಸಮಸ್ಯೆ ಇದ್ರೂ, ವಾಯುಮಾಲಿನ್ಯ ಮಂಡಳಿಯ ಅಧಿಕಾರಿಗಳು, ಧಾರವಾಡ ಜಿಲ್ಲಾಡಳಿತ ಮಾತ್ರ ಮೌನಕ್ಕೆ ಶರಣಾಗಿದೆ.. ಜಿಲ್ಲಾಡಳಿತದ ಮೌನ ಗ್ರಾಮಸ್ಥರ ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿದೆ.

ಇದನ್ನೂ ವೀಕ್ಷಿಸಿ:  ಇಲ್ಲಿ ದುಡ್ಡುಕೊಟ್ರೆ ಪರೀಕ್ಷೆ ಪಾಸ್, ಫುಲ್ ಮಾರ್ಕ್ಸ್! ಇದು ಕರ್ನಾಟಕ ರಾಜ್ಯ ಮುಕ್ತ ವಿವಿ ಕರ್ಮಕಾಂಡ

25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
24:50ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ
Read more