ಮಾನವೀಯತೆ ಸತ್ತು ಹೋಗಿದ್ಯಾ? ಯುವಕನ ಕೈಕಾಲು ಕಟ್ಟಿ ರಸ್ತೆಗೆ ಬಿಸಾಕಿದ ಜನ

Jan 21, 2020, 6:19 PM IST

ವಿಜಯಪುರ, (ಜ.21): ಜನರಲ್ಲಿ ಮಾನವೀಯತೆ ಅನ್ನೋದು ಸತ್ತು ಹೋಗಿದಿಯಾ? ಗುಮ್ಮಟನಗರಿ ವಿಜಯಪುರದಲ್ಲಿ ನಡೆದ ಘಟನೆಯೊಂದನ್ನ ನೋಡ್ತಿದ್ರೆ ಇಂಥಹ ಅನುಮಾನವೊಂದು ಕಾಡತೊಡಗಿದೆ. 

ವಿಜಯಪುರ: ಚರಂಡಿ ನೀರಿನಲ್ಲಿ ಈಜಾಡಿದ ಯುವಕ, ವಿಡಿಯೋ ವೈರಲ್

ಪಬ್ಜಿ ಗೀಳಿಗೆ ಬಿದ್ದ ಯುವಕನೊಬ್ಬ ಮಾನಸಿಕ ಅಸ್ವಸ್ಥನಾಗಿ ಸಾರ್ವಜನಿಕರು ಹಾಗೂ ವಾಹನಗಳ ಮೇಲೆ ಕಲ್ಲು ಎಸೆದ ಅನ್ನೋ ಕಾರಣಕ್ಕೆ ಆತನನ್ನ ಥಳಿಸಿ ಕಟ್ಟಿಹಾಕಲಾಗಿದೆ. ಜೊತೆಗೆ ಆತ ಸಂಪೂರ್ಣ ಬೆತ್ತಲಾಗಿದ್ರು, ಕೊಂಚವು ಮಾನವೀಯತೆ ತೋರದೆ ರಸ್ತೆಯಲ್ಲಿ ಬಿಸಾಡಿದ ಘಟನೆ ನಡೆದಿದೆ.