ಚಿಪ್ಪಿಕಲ್ಲಿನಲ್ಲಿ ಕಂಡು ಬಂದ ಮುತ್ತು..!: ಗೋಕರ್ಣ ಸಮೀಪ ತದಡಿಯಲ್ಲಿ ಪತ್ತೆ

Jun 6, 2023, 12:20 PM IST

ಆಹಾರ ತಯಾರಿಕೆ ವೇಳೆ ಗೋಕರ್ಣ ತದಡದಲ್ಲಿ ಚಿಪ್ಪಿಕಲ್ಲಿನಲ್ಲಿ ಮುತ್ತು ಕಂಡುಬಂದಿದೆ. ಮೀನುಗಾರಿಕೆ ಸ್ಥಗಿತವಾಗಿರುವ ಹಿನ್ನೆಲೆ ಮೀನುಗಾರರು ಚಿಪ್ಪಿಕಲ್ಲನ್ನು ಹಿಡಿಯುತ್ತಿದ್ದರು. ಮಹಿಳೆಯೊಬ್ಬರು ಚಿಪ್ಪನ್ನು ಮಾರಾಟ ಮಾಡಿದ್ದಾರೆ. ತದಡಿಯ ಮಾಜಿ ಗ್ರಾಮಪಂಚಾಯಿತಿ ಸದಸ್ಯೆ ಪಾರ್ವತಿ ನಾಯ್ಕ್‌ ಎಂಬುವವರು ಆ ಚಿಪ್ಪನ್ನು ಖರೀದಿಸಿದ್ದರು. ಅವರು ಮನೆಗೆ ತೆಗೆದುಕೊಂಡು ಹೋಗಿ, ಅದನ್ನು ಸ್ವಚ್ಛಗೊಳಿಸುವಾಗ ಒಳಗಡೆ ಮುತ್ತು ಕಂಡುಬಂದಿದೆ. ಇದರಿಂದ ಮನೆಯವರೆಲ್ಲಾ ಆಶ್ಚರ್ಯಗೊಂಡಿದ್ದಾರೆ. ಈ ಘಟನೆ ಬಳಿಕ ಚಿಪ್ಪಿಕಲ್ಲು ಮಾರಾಟ ಮತ್ತು ಸಂಗ್ರಹ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ವೀಕ್ಷಿಸಿ: ಗೃಹಜ್ಯೋತಿ ಯೋಜನೆ ಮಾರ್ಗಸೂಚಿ ಬಿಡುಗಡೆ: ಬಾಡಿಗೆದಾರರಿಗಿಲ್ಲ ಉಚಿತ ವಿದ್ಯುತ್‌ ಭಾಗ್ಯ!