ಒಂದು ಕುರ್ಚಿ.. ಇಬ್ಬರು ಅಧಿಕಾರಿಗಳ ಫೈಟ್: ಸರ್ಕಾರದ ಆದೇಶ..ಇಬ್ಬರ ನಡುವೆ ಕಿತ್ತಾಟ

ಒಂದು ಕುರ್ಚಿ.. ಇಬ್ಬರು ಅಧಿಕಾರಿಗಳ ಫೈಟ್: ಸರ್ಕಾರದ ಆದೇಶ..ಇಬ್ಬರ ನಡುವೆ ಕಿತ್ತಾಟ

Published : Aug 22, 2023, 11:24 AM IST

ಜನರು ಕಿತ್ತಾಟ ನಡೆಸೋದು ಕಾಮನ್..ಆದ್ರೆ ಇಲ್ಲಿ ಡಾಕ್ಟರ್‌ಗಳೇ ದೊಡ್ಡ ಜಗಳ ಆಡಿದ್ದಾರೆ. ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು DHOಗಳು ಕುರ್ಚಿಗಾಗಿ ಕಿತ್ತಾಟ ನಡೆಸುತ್ತಿದ್ದಾರೆ. 
 

ಇಬ್ಬರು ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ.. ಕಣ್ಣೀರು ಹಾಕ್ತಿರೋ ಮಹಿಳಾ ಅಧಿಕಾರಿ.. ಈ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ. ಸರ್ಕಾರದ ವರ್ಗಾವಣೆ (Transfer)ಆದೇಶದಿಂದ ಈಗ ಒಂದೇ ಕುರ್ಚಿಗೆ ಇಬ್ಬರ ನಡುವೆ ಕಿತ್ತಾಟ ಶುರುವಾಗಿದೆ. ಬಾಗಲಕೋಟೆ(Bagalkot) ಜಿಲ್ಲಾಸ್ಪತ್ರೆಯಲ್ಲಿ DHO ಆಗಿ ಡಾ.ಜಯಶ್ರೀ ಎಮ್ಮಿ ಕಾರ್ಯನಿರ್ವಹಿಸುತ್ತಿದ್ರು. ಆದ್ರೆ ಕೆಲ ದಿನ ರಜೆ ಮೇಲೆ ಹೋಗಿ ವಾಪಸ್ ಆಗುವಷ್ಟರಲ್ಲಿ, ಇದೇ ಹುದ್ದೆಗೆ ಸರ್ಕಾರ ವಿಜಯಪುರದ DHO ಆಗಿದ್ದ ವಿಜಯಕುಮಾರ್ ಯರಗಲ್‌ರನ್ನು ನೇಮಿಸಿದೆ. ಜಯಶ್ರೀಗೆ ಯಾವುದೇ ಜಾಗ ತೊರಿಸದೇ ವರ್ಗಾವಣೆ ಮಾಡಿದೆ. ಸರ್ಕಾರದ ಈ  ಆದೇಶದ ವಿರುದ್ಧ ಸಿಟ್ಟುಗೆದ್ದ ಡಾಕ್ಟರ್ ಜಯಶ್ರೀ ಕೆಎಟಿ ಮೋರೆ ಹೋಗಿ ಸ್ಟೇ ತಂದಿದ್ದಾರೆ. ಇನ್ನು ನೀವು ನಿಮ್ಮ ಕೆಲಸ ಮುಂದುವರೆಸಿ ಎಂದು ಸಿಇಒ ಹೇಳಿದ್ದಾರೆ. ಅದ್ರಂತೆ ಕಚೇರಿಗೆ ಬಂದಿದ್ದೇನೆ ಎಂದು ಡಾ.ಜಯಶ್ರೀ ಎಮ್ಮಿ ಹೇಳ್ತಿದ್ದಾರೆ. ಕೆಎಟಿಯಿಂದ (KAT) ಸ್ಟೇ ತಂದ ಡಾಕ್ಟರ್ ಜಯಶ್ರೀ ಡಿಎಚ್ಒ ಕುರ್ಚಿ ತನಗೇ ಬಿಟ್ಟು ಕೊಡುವಂತೆ ಪಟ್ಟು ಹಿಡಿದಿದ್ದಾರೆ. ಆದ್ರೆ, ಇತ್ತ ಡಾಕ್ಟರ್ ವಿಜಯಕುಮಾರ್ ತಾನು ಸರ್ಕಾರದ ಆದೇಶದ ಪ್ರಕಾರವೇ ಬಂದಿದ್ದೇನೆ. ಆದೇಶ ಪ್ರತಿಯೂ ನನ್ನ ಬಳಿ ಇದೆ. ಇಲ್ಲಿ ತಾನು ಒಬ್ಬನೇ ಡಿಹೆಚ್‌ಒ ಎನ್ನುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಹಳ್ಳ ಹಿಡಿದ ಬಿಜೆಪಿ ಸರ್ಕಾರದ ಯೋಜನೆ: ತುಕ್ಕು ಹಿಡಿದ ‘ಪಶು ಸಂಜೀವಿನಿ’ ಆ್ಯಂಬುಲೆನ್ಸ್ !

25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
24:50ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ