Mangaluru : ಸಿಂಧೂರ ಕಾಯಿ ಬಳಸಿ ಮನೆಯಲ್ಲೇ ತಯಾರಿಸಿ ಚಂದದ ಬಣ್ಣ..!

Mangaluru : ಸಿಂಧೂರ ಕಾಯಿ ಬಳಸಿ ಮನೆಯಲ್ಲೇ ತಯಾರಿಸಿ ಚಂದದ ಬಣ್ಣ..!

Suvarna News   | Asianet News
Published : Mar 05, 2022, 11:35 AM IST

*  ಮೇಕಪ್ ಮಾಡ್ಕೊಂಡು ಸ್ಮಾರ್ಟ್ ಆಗೋದಕ್ಕೆ ಬಣ್ಣ ಬೇಕು 
*  ರಾಸಾಯನಿಕಯಕ್ತ ಬಣ್ಣ ಬಳಸಿ ಆರೋಗ್ಯ ಯಾಕೆ ಹಾಳು ಮಾಡೋದು?
*  ಸಾವಯವ ಬಣ್ಣ ಬಳಸಿ ಆರೋಗ್ಯವನ್ನೂ, ಸೌಂದರ್ಯವನ್ನೂ ಕಾಪಾಡಿ
 

ದಕ್ಷಿಣ ಕನ್ನಡ(ಮಾ.05): ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಪಣಂಬೂರು ಪರಿಸದಲ್ಲಿ ಯಥೇಚ್ಛವಾಗಿ ಬೆಳೆಯುವ ಲಿಪ್ ಸ್ಟಿಕ್ ಟ್ರೀ ಅಂತ ಕರೆಯುವ ಈ ಮರದ ವೈಜ್ಞಾನಿಕ ಹೆಸರು ಅನೋಟಾ. ಬಣ್ಣದಕಾಯಿ, ಕುಂಕುಮಕಾಯಿ, ಸಿಂಧೂರಕಾಯಿ ಅಂತಾನೂ ಕರೆಯುತ್ತಾರೆ. ಇದರ ಕಾಯಿಯಲ್ಲಿರುವ ಬೀಜವೇ ನೈಸರ್ಗಿಕ ಬಣ್ಣ. ಹಿಂದೆ ಋಷಿಮುನಿಗಳ ಖಾವಿ ಬಟ್ಟೆ ತಯಾರಿಗೆ ಇದರ ಬಣ್ಣ ಬಳಸುತ್ತಿದ್ದರು. ತುಳಸಿಕಟ್ಟೆಗೆ ಬಣ್ಣ ಬಳಿಯಲು, ಗೋವಿನ ಹಬ್ಬದಲ್ಲಿ ಗೋವಿಗೆ ಬಣ್ಣ ಹಚ್ಚಲು ಇದನ್ನು ಬಳಸುತ್ತಿದ್ದರು.

Belagavi: ನಿವೃತ್ತ ಸೇನಾಧಿಕಾರಿಗೆ ಭರ್ಜರಿ ಸ್ವಾಗತ: ಜನಸಾಗರ ನೋಡಿ ಭಾವುಕರಾದ ವೀರಯೋಧ..!

ಬಳಿಕ ಲಿಪ್ ಸ್ಟಿಕ್ ಆಗಿಯೂ ಇದು ಬಳಕೆಗೆ ಬಂತು. ಈಗಲೂ ಪಶ್ಚಿಮ ಬಂಗಾಳ ಸೇರಿದಂತೆ ನಾರ್ತ್ ಈಸ್ಟ್ ರಾಜ್ಯಗಳಲ್ಲಿ ಇದನ್ನು ಬಣ್ಣದ ರೂಪದಲ್ಲಿ ಬಳಸುತ್ತಾರೆ. ವಿದೇಶಗಳಲ್ಲೂ ಇದು ವ್ಯಾಪಕವಾಗಿ ಬಳಕೆಯಲ್ಲಿದೆ. ಹಸಿರು ಹೃದಯಾಕಾರದ ಎಲೆ, ಬಿಳಿಯ ಹೂವು, ಬಳಿಕ ಕಾಯಾಗಿ ಬಲಿತ ಬಳಿಕ ಒಣಗುತ್ತದೆ. ಒಣಗಿದ ಬಳಿಕ ಅದರಲ್ಲಿಯ ಬೀಜವನ್ನ ಬಣ್ಣವಾಗಿ ಬಳಸಬಹುದು. ಕೆಲವರು ಖಾದ್ಯ ತಯಾರಿಸುವಾಗಲೂ ಈ ಬಣ್ಣ ಬಳಸುವುದಿದೆ. ಆಹಾರದ ಬಣ್ಣವಾಗಿ ಬಳಸುತ್ತಿದ್ದು, ಜಿಲೇಬಿಗೆ ಕೃತಕ ಬಣ್ಣದ ಬದಲಾಗಿ ಇದನ್ನು ಬಳಸುತ್ತಾರೆ. ಸ್ವಲ್ಪ ಪ್ರಮಾಣದ ಬೀಜಗಳನ್ನು ಬೆಚ್ಚಗಿನ ನೀರು, ಅಥವಾ ಹಾಲಿನಲ್ಲಿ ಕಲೆಸಿ ಸ್ವಲ್ಪ ಹೊತ್ತು ಬಿಟ್ಟು ಸೋಸಿದರೆ ಸಿಗುವ ಬಣ್ಣದ ನೀರನ್ನು ಜಿಲೇಬಿ ಹಿಟ್ಟಿಗೆ ಬಳಸಬಹುದು ಎನ್ನುತ್ತಾರೆ ಬಾಣಸಿಗರು. ಹಾಗೇ ಕೇಸರಿ ಬಾತು ರೀತಿಯ ಬಣ್ಣ ಬೇಕಾಗುವ ಭಕ್ಷ್ಯ, ಮತ್ತಿತರ ತಿಂಡಿಗಳಲ್ಲಿ ಬಳಸಬಹುದು. ಇದನ್ನು ಔಷಧವಾಗಿಯೂ ಕೆಲವೆಡೆ ಬಳಸುವುದಿದೆ.

ಗುಲಾಬಿ ಮತ್ತು ಕೆಂಪು ಹೀಗೆ ಎರಡು ಬಣ್ಣದ ಗಿಡಗಳು ನಮಗೆ ಸಾಮಾನ್ಯವಾಗಿ ನೋಡಲು ಸಿಗುತ್ತವೆ.  ಇನ್ನೇನು ಕೆಲವೇ ದಿನಗಳಲ್ಲಿ ನಾಡಿನಾದ್ಯಂತ ಹೋಳಿಹಬ್ಬ ಆಚರಣೆಯಾಗಲಿದೆ. ಒಟ್ಟಿನಲ್ಲಿ ಅತಿಯಾದ ರಾಸಾಯನಿಕ ಬಳಸಿದ ಬಣ್ಣಗಳ ಬಳಕೆ ಖರ್ಚಿಗೂ ದಾರಿ, ಆರೋಗ್ಯಕ್ಕೂ ಮಾರಿ. ಹಾಗಾಗಿ ಈ ಸಲ ರಾಸಾಯನಿಕ ಬಣ್ಣಗಳ ಬದಲಾಗಿ ಪ್ರಕೃತಿಯಲ್ಲಿ ಸಿಗುವ ಇಂತಹ ನೈಸರ್ಗಿಕ ಬಣ್ಣದಿಂದ ಮುಂಬರುವ ಹೋಳಿ ಹಬ್ಬವನ್ನು ಆಚರಿಸೋಣ. 
 

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more