ಆನೇಕಲ್: ಪ್ರಾಣಾಪಾಯದಿಂದ ಪಾರಾದ ಕೊರೋನಾ ವಾರಿಯರ್ಸ್

May 24, 2020, 6:51 PM IST

ಬೆಂಗಳೂರು, (ಮೇ.24): ಬೆಂಗಳೂರಿನಲ್ಲಿ ಭಾನುವಾರ ಭಾರೀ ಗಾಳಿ ಮಳೆಯಾಗಿದೆ. ವರುಣನ ಅಬ್ಬರಕ್ಕೆ ಹಲವು ಕಡೆಗಳಲ್ಲಿ ಅನಾಹುತಗಳು ಸಂಭವಿಸಿದೆ. ಮರಗಳು ಧರೆಗೆ ಉರುಳಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಇನ್ನು ವರುಣ ಆರ್ಭಟಕ್ಕೆ ಆನೇಕಲ್‌ನಲ್ಲಿ ಕೊರೋನಾ ತಪಾಸಣಾ ಕೇಂದ್ರ ಹಾರಿಹೋಗಿದ್ದು, ಕೊರೋನಾ ವಾರಿಯರ್ಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.